
<p>’ಅಮೃತಧಾರೆ’ ಧಾರಾವಾಹಿಯಲ್ಲಿ ಅನಾಥಾಶ್ರಮದಲ್ಲಿರುವ ಪುಟಾಣಿ ಕಂದಮ್ಮ ತನ್ನ ಮಗಳು ಅಂತ ಸುಳಿವು ಸಿಕ್ಕಿದ್ದು, ಆತ ಅನಾಥಾಶ್ರಮಕ್ಕೆ ಹೋಗಿ ಮಗಳನ್ನು ಮುದ್ದಾಡಿದ್ದಾನೆ. ಆದರೆ ಕಾನೂನಿನ ಪ್ರಕಾರ ಆ ಪುಟಾಣಿಯೇ ಗೌತಮ್ ಮಗಳು ಎನ್ನೋದು ಸಾಬೀತಾಗಬೇಕು. ಹೀಗಾಗಿ ಇನ್ನೂ ಒಂದು ವಾರ ಬೇಕು.</p><p> </p><img><p>ಇನ್ನೊಂದು ಕಡೆ ಭೂಮಿಕಾ ಹಾಗೂ ಭಾಗ್ಯಳನ್ನು ಮುಗಿಸಲು ಶಕುಂತಲಾ-ಜಯದೇವ್ ರೆಡಿಯಾಗಿದ್ದಾರೆ. ಮನೆಯಲ್ಲಿರುವ ಶಕುಂತಲಾ, ಮನೆಯಿಂದ ಹೊರಗಡೆ ಇರೋ ಜಯದೇವ್ ಇಬ್ಬರೂ ಸೇರಿಕೊಂಡು ಒಂದಿಲ್ಲೊಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಇದರ ವಿರುದ್ಧ ಭೂಮಿ, ಸೃಜನ್ ಹೋರಾಡಬೇಕಿದೆ.</p><img><p>ಯಾರು ಏನೇ ಹೇಳಿದರೂ ಕೂಡ ಶಕುಂತಲಾ ಕೆಟ್ಟವಳು, ಹಣದ ಆಸೆಗೆ ಮೋಸ ಮಾಡಿದ್ದಾಳೆ, ಕುತಂತ್ರ ಮಾಡಿದ್ದಾಳೆ ಅಂದರೆ ಗೌತಮ್ ನಂಬೋದಿಲ್ಲ. ಗೌತಮ್ನನ್ನು ಶಕುಂತಲಾ ನಾಯಿ ಅಂತ ಕೂಡ ಕರೆದಿದ್ದಳು. ಅದಕ್ಕೆ ಭೂಮಿ ಧರ್ಮದೇಟು ಕೊಟ್ಟಿದ್ದಳು. ಶಕುಂತಲಾಳಿಂದ ಭೂಮಿ-ಗೌತಮ್ ಮಧ್ಯೆ ಸಮಸ್ಯೆ ಬರದಿದ್ರೆ ಸಾಕು.</p><img><p>ಭೂಮಿಕಾಗೆ ತಾನು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿರೋದು ಗೊತ್ತಿಲ್ಲ. ಇದೇ ವಿಷಯ ಇಟ್ಕೊಂಡು ಭೂಮಿಕಾ-ಗೌತಮ್ ಮಧ್ಯೆ ಶಕುಂತಲಾ ಬಿರುಕು ತರುತ್ತಾಳಾ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮಗಳ ವಿಷಯ ಏನಾಗಲಿದೆಯೋ ಏನೋ!</p><img><p>ಇನ್ನೂ ಒಂದು ವಾರಗಳ ಕಾಲ ಆ ಮಗು ಅನಾಥಾಶ್ರಮದಲ್ಲಿ ಇರುತ್ತದೆ. ಡಿಎನ್ಎ ರಿಪೋರ್ಟ್ನಲ್ಲಿ ಗೌತಮ್ ಮಗಳು ಆ ಪುಟಾಣಿ ಎನ್ನೋದು ಪಕ್ಕಾ ಆದರೆ ಮಾತ್ರ ಆ ಮಗು ಗೌತಮ್ ಮನೆ ಸೇರುವುದು. ಮಗಳು ಬದುಕಿರೋದು ಶಕುಂತಲಾ-ಜಯದೇವ್ಗೆ ಗೊತ್ತಾದರೆ ಅವರು ಸುಮ್ಮನಿರೋದು ಡೌಟ್. ಏನಾದರೂ ಮಾಡಿ ಗೌತಮ್ನಿಂದ ಆ ಮಗುವನ್ನು ದೂರ ಮಾಡಬಹುದು.</p><img><p>ಮಗಳು ಪತ್ತೆ ಆದಳು ಅಂತ ಅದು ಇಷ್ಟು ಬೇಗ ಗೌತಮ್ ಮನೆ ಸೇರುವುದು ಎಂದು ಹೇಳಲಾಗದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ಗಳು ಬರೋದು ಬಾಕಿ ಇದೆ. ಈ ಧಾರಾವಾಹಿಯಲ್ಲಿ ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಜಯದೇವ್ ಪಾತ್ರದಲ್ಲಿ ರಾಣವ್ ಅವರು ನಟಿಸುತ್ತಿದ್ದಾರೆ.</p>
Source link
Amruthadhaare Serial: ಮಗಳು ಸಿಕ್ಕರೂ ಗೌತಮ್ ಮನೆ ಸೇರೋಕಿದೆ ನೂರಾರು ಸವಾಲು! ಮುಂದಾಗೋದೆಲ್ಲ ಖುಷಿ ವಿಷ್ಯವಲ್ಲ!