ಮಳೆಯ ನಡುವೆ ಜಾರಿ ಬಿದ್ದ ಟೀಂ ಇಂಡಿಯಾಗೆ ಕನ್ನಡಿಗ ಕರುಣ್ ನಾಯರ್ ಆಸರೆ! | Karun Nair Fighting Fifty Rescues India After Top Order Collapse In 5th Test Kvn

ಮಳೆಯ ನಡುವೆ ಜಾರಿ ಬಿದ್ದ ಟೀಂ ಇಂಡಿಯಾಗೆ ಕನ್ನಡಿಗ ಕರುಣ್ ನಾಯರ್ ಆಸರೆ! | Karun Nair Fighting Fifty Rescues India After Top Order Collapse In 5th Test Kvn



ಮಳೆಯ ನಡುವೆ ಜಾರಿ ಬಿದ್ದ ಟೀಂ ಇಂಡಿಯಾಗೆ ಕನ್ನಡಿಗ ಕರುಣ್ ನಾಯರ್ ಆಸರೆ! | Karun Nair Fighting Fifty Rescues India After Top Order Collapse In 5th Test Kvn

ಐದನೇ ಟೆಸ್ಟ್‌ನ ಮೊದಲ ದಿನ ಮಳೆ ಅಡ್ಡಿಪಡಿಸಿತು. ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಕರುಣ್ ನಾಯರ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ನ ಮೊದಲ ದಿನ ಮಳೆ ಮೇಲುಗೈ ಸಾಧಿಸಿದೆ. ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಬಹುತೇಕ ಓವರ್‌ಗಳು ಕಡಿತಗೊಂಡವು. ಈ ನಡುವೆ ಭಾರತ ತಂಡ ಆರಂಭಿಕ ಆಘಾತಕ್ಕೆ ತುತ್ತಾಗಿದ್ದು, 100 ರನ್‌ ಗಳಿಸುವ ಮೊದಲೇ ಪ್ರಮುಖ ನಾಲ್ವರನ್ನು ಕಳೆದುಕೊಂಡಿತು. ಈ ಬಳಿಕ ಸರಣಿಯಲ್ಲಿ ಎರಡನೇ ಬಾರಿ ಅವಕಾಶಗಿಟ್ಟಿಸಿಕೊಂಡಿರುವ ಕನ್ನಡಿಗ ಕರುಣ್ ನಾಯರ್ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿದೆ.

ಭಾರತ ನಾಲ್ಕು ಬದಲಾವಣೆಗಳೊಂದಿಗೆ ಪಂದ್ಯದಲ್ಲಿ ಕಣಕ್ಕಿಳಿಯಿತು. ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ 4ನೇ ಓವರ್‌ನಲ್ಲೇ ಆಘಾತ ಕಾದಿತ್ತು. ಯಶಸ್ವಿ ಜೈಸ್ವಾಲ್‌ 2 ರನ್‌ಗೆ ಔಟಾದರು. ಕೆ.ಎಲ್‌.ರಾಹುಲ್‌ ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ಮುನ್ಸೂಚನೆ ನೀಡಿದರಾದರೂ, 14 ರನ್‌ ಗಳಿಸಿದ್ದಾಗ ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಊಟದ ವಿರಾಮದ ಬಳಿಕ ನಾಯಕ ಶುಭ್‌ಮನ್‌ ಗಿಲ್‌ ಕೂಡಾ ಪೆವಿಲಿಯನ್ ಸೇರಿದರು. ಟೂರ್ನಿಯ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿರುವ ಗಿಲ್‌ ಅನಗತ್ಯ ರನ್‌ ಕಸಿಯುವ ಯತ್ನದಲ್ಲಿ ವಿಕೆಟ್‌ ಕಳೆದುಕೊಂಡರು. ಅವರು 21 ರನ್‌ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್‌ ಇನ್ನಿಂಗ್ಸ್‌ 38 ರನ್‌ಗೆ ಕೊನೆಗೊಂಡಿತು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತಂಡದ ಕೈ ಹಿಡಿದಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ 9 ರನ್‌ ಗಳಿಸಿ ಔಟಾದರು.

Scroll to load tweet…

 

ಕೇವಲ 101 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಕರುಣ್ ನಾಯರ್ ಆಸರೆಯಾದರು. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಲು ವಿಫಲವಾಗಿದ್ದ ಕರುಣ್ ನಾಯರ್, ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ಡಾಟಿಸುವಲ್ಲಿ ಯಶಸ್ವಿಯಾದರು. ಕರುಣ್ ನಾಯರ್ 98 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ ಅಜೇಯ 52 ರನ್ ಸಿಡಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನ್ನು ಗಾಯದ ಸಮಸ್ಯೆಯಿಂದ ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದ ಧ್ರುವ್ ಜುರೆಲ್ 19 ರನ್ ಸಿಡಿಸಿ ಗುಸ್ ಅಟ್ಕಿನ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ಟೆಸ್ಟ್‌ನಲ್ಲಿ ಅಜೇಯ ಶತಕ ಸಿಡಿಸಿದ್ದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇದೀಗ 19 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮಳೆ ಕಾಟ: ಟಾಸ್ ತಡ, ಬಹುತೇಕ ಓವರ್‌ ಕಡಿತ

ಮಳೆಯಿಂದಾಗಿ ಟಾಸ್‌ ಕೆಲ ನಿಮಿಷ ವಿಳಂಬವಾಯಿತು. ನಿಗದಿತ ಸಮಯಕ್ಕೆ ಪಂದ್ಯ ಆರಂಭಗೊಂಡಿತಾದರೂ, ಊಟದ ವಿರಾಮದ ವೇಳೆ ಮಳೆ ಸುರಿಯಲಾರಂಭಿಸಿತು. ಮೊದಲ ಅವಧಿಯಲ್ಲಿ 23 ಓವರ್‌ ಆಡಿಸಿದರೂ, 2ನೇ ಅವಧಿಯಲ್ಲಿ ಕೇವಲ 6 ಓವರ್ ಆಟ ನಡೆಯಿತು. ಪದೇ ಪದೇ ಮಳೆ ಸುರಿಯುತ್ತಿದ್ದ ಕಾರಣ 3ನೇ ಅವಧಿ ಕೂಡಾ ತಡವಾಗಿ ಆರಂಭಗೊಂಡಿತು.

ಸತತ 15 ಪಂದ್ಯದಲ್ಲಿ ಟಾಸ್‌ ಸೋತ ಭಾರತ!

ಭಾರತ ಈ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಟಾಸ್‌ ಸೋತಿದೆ. ಒಟ್ಟಾರೆ 3 ಮಾದರಿಯಲ್ಲೂ ತಂಡಕ್ಕಿದು ಸತತ 15ನೇ ಟಾಸ್‌ ಸೋಲು. ಇದರೊಂದಿಗೆ ತಂಡ ಹೊಸ ದಾಖಲೆ ಬರೆದಿದೆ. 1999ರಲ್ಲಿ ವೆಸ್ಟ್‌ಇಂಡೀಸ್‌ ಸತತವಾಗಿ 12 ಟಾಸ್‌ ಸೋತಿತ್ತು.

 



Source link

Leave a Reply

Your email address will not be published. Required fields are marked *