Headlines

ವಿ ಸೋಮಣ್ಣ ಪುತ್ರ ಅರುಣ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತು | Union Minister V Somanna Hints At Son Arun Political Entry Gow

ವಿ ಸೋಮಣ್ಣ ಪುತ್ರ ಅರುಣ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತು | Union Minister V Somanna Hints At Son Arun Political Entry Gow



ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಮ್ಮ ಪುತ್ರ ಅರುಣ್ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷದ ನಿರ್ಧಾರದಂತೆ ಅರುಣ್ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರಬಹುದು ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದ ದಿನವೇ ಪುತ್ರನ ಭವಿಷ್ಯ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಮಹತ್ವದ ಸಂದೇಶ ನೀಡಿದ್ದಾರೆ. ತಮ್ಮ ಪುತ್ರ ಅರುಣ್ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಅರುಣ್ ರಾಜಕೀಯ ಕ್ಷೇತ್ರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅವರಿಗೆ ಒಳ್ಳೆಯ ಭವಿಷ್ಯ ಎದುರಿರುವುದು ನಿಶ್ಚಿತ. ನಾನು ತಂದೆ ಅಂತ ಹೆಮ್ಮೆ ಪಡುವ ಪರಿಸ್ಥಿತಿ ಇಲ್ಲ. ಅವರ ನಡವಳಿ ಸನ್ಮಾರ್ಗದಾಯಕವಾಗಿದೆ,” ಎಂದು ವಿ. ಸೋಮಣ್ಣ ಹೇಳಿದರು. ಅರುಣ್ ರಾಜಕೀಯ ಪ್ರವೇಶ ಮಾಡುವೆಂದರೆ ಯಾವ ಕ್ಷೇತ್ರದಿಂದ ಅಥವಾ ಯಾವ ಹುದ್ದೆಗೆ ಎಂಬುದು ಈಗ ನಿರ್ಧರಿಸಲಾಗಿಲ್ಲ. “ಅದು ಪಕ್ಷವೇ ತೀರ್ಮಾನಿಸುತ್ತದೆ. ಎಲ್ಲವನ್ನು ಪಕ್ಷದ ನಾಯಕತ್ವ ಗಮನಿಸುತ್ತಿದೆ. ಅವರು ಯಾವ ಹಾದಿಯಿಂದ ಮುಂದುವರಿಯಬೇಕು ಎಂಬುದನ್ನು ಪಕ್ಷವೇ ನಿರ್ಧರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರಿನಲ್ಲಿ ಹಲವು ಮುಖ್ಯ ವಿಷಯಗಳ ಕುರಿತು ನೇರವಾಗಿ ಮಾತನಾಡಿದರು. ಬಿಎಸ್‌ವೈ   ಪಕ್ಷದ ಮುಂದಾಳತ್ವದಲ್ಲಿ ಹೊಸ  ಹೆಸರುಗಳು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತನ್ನ ಹೆಸರೂ ಕೇಳಿಬರುತ್ತಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದರು.

“ಎರಡು ಕಡೆ ಸೋತು, ಮೂರನೇ ಕಡೆ ಟಿಕೆಟ್ ಕೊಟ್ರು. ತುಮಕೂರಿನ ಜನ ನನ್ನ ಕೈಹಿಡಿದ್ರು. ಇಂದು ನಾನು ಕೇಂದ್ರದಲ್ಲಿ ಸಚಿವನಾಗಿದ್ದೇನೆ. ಜನರ ವಿಶ್ವಾಸಕ್ಕೆ ನಾನು ಋಣಿ,” ಎಂದು ಭಾವನಾತ್ಮಕವಾಗಿ ಹೇಳಿದರು.

“ಪಕ್ಷ ನನ್ನಕ್ಕಿಂತ ದೊಡ್ಡದು. ಪಕ್ಷಕ್ಕಿಂತಲೂ ದೇಶ ದೊಡ್ಡದು. ಪ್ರಧಾನಿ ನಾನಗೆ ದೊಡ್ಡ ಜವಾಬ್ದಾರಿ ನೀಡಿದ್ರು. ರಾಜ್ಯಾಧ್ಯಕ್ಷ ಸ್ಥಾನದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ,” ಎಂದ ಅವರು, “ಹೈಕಮಾಂಡ್ ಯಾರು ಏನಾಗಬೇಕು ಅಂತ ತೀರ್ಮಾನ ಮಾಡ್ತದೆ. ಪಕ್ಷದೊಳಗಿನ ಬಣಬೇಧಗಳ ಬಗ್ಗೆ ನನಗೆ ಗೊತ್ತಿಲ್ಲ. ಒಳ್ಳೆಯತನಕ್ಕೇ ಇಲ್ಲಿ ಬೆಲೆ ಇದೆ,” ಎಂದು ಬಿಂಬಿಸಿದರು.

ವಿಜಯೇಂದ್ರಗೆ ಪರೋಕ್ಷ ಟಾಂಗ್?

“ಯಾರೇ ಆಗಲಿ, ‘ನಾನೇ’ ಅನ್ನೋದನ್ನ ಬಿಟ್ಟುಬಿಡಬೇಕು,” ಎಂಬ ಮಾತು ಹಿನ್ನಲೆಯಲ್ಲಿ ಯುವ ಮುಖಂಡ ಬಿ. ವೈ. ವಿಜಯೇಂದ್ರಗೆ ಪರೋಕ್ಷ ಟಾಂಗ್ ಎಂದು ಅಂದುಕೊಳ್ಳಲಾಗುತ್ತಿದೆ.

ಬೈರತಿ ಬಸವರಾಜ್ ವಿರುದ್ಧದ ಆರೋಪ: ಕಠಿಣ ಪ್ರತಿಕ್ರಿಯೆ

ಹಿರಿಯ ನಾಯಕರಾದ ಬೈರತಿ ಬಸವರಾಜ್ ಮೇಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, “ಅವರು ಆರೋಪಿ ಮಾತ್ರ, ಅಪರಾಧಿ ಅಲ್ಲ. ಇಷ್ಟು ಅವಿವೇಕದ ಕೆಲಸ ಮಾಡಲು ಅವರು ಇಳಿಯಲ್ಲ. ಅವರಿಗೆ ನಾನೂ ಹಲವಾರು ವರ್ಷಗಳಿಂದ ಪರಿಚಯ. ಇದು ಸುಳ್ಳು ಕೇಸ್.  ಅವರು ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂಬ ವಿಶ್ವಾಸವಿದೆ,” ಎಂದರು.

“ಕಾನೂನು ಮೀರಿ, ಒಬ್ಬ ಜನಪ್ರತಿನಿಧಿಗೆ ಸರ್ಕಾರ ತೊಂದರೆ ಕೊಡುವಂತಿಲ್ಲ. ಹೊಟ್ಟೆಕಿಚ್ಚಿಗೆ ಬೈರತಿ ಮೇಲೆ ಗೂಬೆ ಕೂರಿಸಲಾಗಿದೆ,” ಎಂದು ಸರ್ಕಾರದ ಮೇಲೆ ದೋಷಾರೋಪಣೆಯನ್ನೂ ಮಾಡಿದರು.

ವಿಪಕ್ಷ ಶಾಸಕರಿಗೆ ಅನುದಾನ ಕಡಿತ: ಸಿಎಂ ವಿರುದ್ಧ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ ಸೋಮಣ್ಣ, “ಸಿದ್ದರಾಮಯ್ಯ ತಮ್ಮನ್ನು ಎರಡು ಬಾರಿ ಸಿಎಂ ಆಗಿದ್ದಾರೆ ಅಂತ ಜಂಬಪಡುವುದನ್ನು ನಿಲ್ಲಿಸಬೇಕು. ಖಜಾನೆ ಖಾಲಿಯಿದ್ದರೂ ತಮ್ಮವರಿಗೆ ಮಾತ್ರ ತುಪ್ಪ ಸವರಿದ್ದಾರೆ,” ಎಂದರು.

“224 ಶಾಸಕರಿಗೂ ಸಮಾನವಾಗಿ ಅನುದಾನ ನೀಡಬೇಕು. ಪಕ್ಷ-ಪಕ್ಷದ ಭೇದವಿಲ್ಲದೆ ಜನಪ್ರತಿನಿಧಿಗಳನ್ನೂ ಗೌರವಿಸಬೇಕು,” ಎಂದು ಆಗ್ರಹಿಸಿದರು.

ಸಿಎಂ ಸಾಧನಾ ಸಮಾವೇಶದ ಕುರಿತ ಟೀಕೆ

ಮೈಸೂರಿನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದ ಕುರಿತು, “ಸಿಎಂ ಏನು ಸಾಧನೆ ಮಾಡಿದ್ದಾರೆ ಅಂತ ಸಮಾವೇಶ ಮಾಡ್ತಿದ್ದಾರೆ? ಅವರ ಸಂಪುಟ ಅರ್ಧ ಖಾಲಿ. ಖಜಾನೆ ಖಾಲಿ. ಇವರು ಶೂನ್ಯ ಸಾಧನೆ ಮಾಡಿದ್ದಾರೆ,” ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್ ವಿರುದ್ಧ ಟಾಂಗ್: ‘ಅವರು ಕಾಂಗ್ರೆಸ್‌ನ ಭಗವದ್ಗೀತೆ’

ವಸತಿ ಸಚಿವ ಜಮೀರ್ ಅಹಮದ್ ಅವರ ಮೇಲೆ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ, ಸೋಮಣ್ಣ ಅವರು, “ಅವರು ಏನೇ ಮಾಡಿದರೂ ಕಾಂಗ್ರೆಸ್‌ನವರಿಗೆ ಭಗವದ್ಗೀತೆ. ಅವರು ಏಸು ಕ್ರಿಸ್ತ, ಅಲ್ಲ—all in one. ಹೀಗಾಗಿ ನಾವು ಏನೇನು ಮಾತನಾಡಿದರೂ, ಸಿದ್ದರಾಮಯ್ಯ ಅವರನ್ನು ಬಿಡಲ್ಲ, ಹೈಕಮಾಂಡ್‌ ಕೂಡಾ ಅವರನ್ನು ರಕ್ಷಿಸುತ್ತದೆ,” ಎಂದು ವ್ಯಂಗ್ಯವಾಡಿದರು.

“ಜಮೀರ್ ವೋಟ್ ಬ್ಯಾಂಕ್ ಹೊಂದಿದ್ದಾರೆ. ಇದಕ್ಕೆ ಉತ್ತರ ಮುಂದಿನ ಚುನಾವಣೆಯಲ್ಲಿ ಜನರೇ ನೀಡುತ್ತಾರೆ,” ಎಂದು ತಮ್ಮ ಮಾತುಗಳನ್ನು ಮುಗಿಸಿದರು.



Source link

Leave a Reply

Your email address will not be published. Required fields are marked *