ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆ – ಖಾಸಗಿ ಟ್ಯೂಷನ್, ಶಾಲಾ ಶುಲ್ಕ, ಸಮವಸ್ತ ಸುಲಿಗೆಗೆ ಕಡಿವಾಣ! | Curbs On Private Tuition School Fees And Uniform Exploitation

ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆ – ಖಾಸಗಿ ಟ್ಯೂಷನ್, ಶಾಲಾ ಶುಲ್ಕ, ಸಮವಸ್ತ ಸುಲಿಗೆಗೆ ಕಡಿವಾಣ! | Curbs On Private Tuition School Fees And Uniform Exploitation



ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಖಾಸಗಿ ಟ್ಯೂಷನ್ ಸೆಂಟರ್‌ಗಳ ದುಬಾರಿ ಶುಲ್ಕ, ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕ ಹೆಚ್ಚಿಸುವುದು ಮತ್ತು ಇಂಥದ್ದೇ ಮಳಿಗೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರದ ಖರೀದಿಸಬೇಕೆಂಬ ಆದೇಶಗಳಿಗೆ ಕಡಿವಾಣ ಹಾಕಲು ಮಂದಾಗಿದೆ.

ಮುಂಬೈ: ಶಿಕ್ಷಣದಲ್ಲಿ ವಾಣಿಜ್ಯೀಕರಣ ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಖಾಸಗಿ ಟ್ಯೂಷನ್ ಸೆಂಟರ್‌ಗಳ ದುಬಾರಿ ಶುಲ್ಕ, ಖಾಸಗಿ ಶಾಲೆಗಳು ಮನಸ್ಸಿಗೆ ಬಂದಂತೆ ಪ್ರತಿ ವರ್ಷ ಶುಲ್ಕ ಹೆಚ್ಚಿಸುವುದು ಮತ್ತು ಇಂಥದ್ದೇ ಮಳಿಗೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರದ ಖರೀದಿಸಬೇಕೆಂಬ ಆದೇಶಗಳಿಗೆ ಕಡಿವಾಣ ಹಾಕಲು ಮಂದಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಇಂಥ ಸುಲಿಗೆ ನೀತಿ ವಿರುದ್ಧ ನಿಯಂತ್ರಣ ಕಾಯ್ದೆ ರಚನೆಗೆ ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಹಾರಾಷ್ಟ್ರ ಶಿಕ್ಷಣ ಸಚಿವ ದಾದಾಜಿ ಭೂಸೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ‘ ಕಾಲೇಜುಗಳು ಮತ್ತು ಖಾಸಗಿ ಟ್ಯೂಷನ್‌ಗಳ ನಡುವಿನ ಸಂಬಂಧ ಪರಿಶೀಲನೆಗೆ ಖಾಸಗಿ ತರಬೇತಿ ನಿಯಂತ್ರಣ ಕಾಯ್ದೆ ರಚಿಸಲಾಗಿತ್ತದೆ ಶಾಲೆಗಳು ಅನುಮೋದಿತ ಶುಲ್ಕ ರಚನೆಯನ್ನು ಮೀರಿ ಶುಲ್ಕ ವಿಧಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಿಕ್ಷಣವು ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ, ವ್ಯವಹಾರವಲ್ಲ’ ಎಂದರು.

ಉತ್ತರಾಖಂಡದ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯ, ಕಾಂಗ್ರೆಸ್ ಟೀಕೆ

ಉತ್ತರಾಖಂಡ ಸರ್ಕಾರವು ಜುಲೈ 14, 2025 ರಂದು ಹೊರಡಿಸಿದ ಆದೇಶದಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗಿನ ಸಭೆಗಳಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣವನ್ನು ಕಡ್ಡಾಯಗೊಳಿಸಿದೆ. ಈ ಉಪಕ್ರಮವು ಸಾಂಪ್ರದಾಯಿಕ ಭಾರತೀಯ ಜ್ಞಾನವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಗುಣವಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ನಾಯಕತ್ವ ಮತ್ತು ಭಾವನಾತ್ಮಕ ಸಮತೋಲನವನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಪ್ರೌಢ ಶಿಕ್ಷಣ ನಿರ್ದೇಶಕ ಡಾ. ಮುಕುಲ್ ಕುಮಾರ್ ಸತಿ ಅವರ ಆದೇಶದ ಪ್ರಕಾರ, ಪ್ರತಿದಿನ ಒಂದು ಗೀತಾ ಶ್ಲೋಕವನ್ನು ಪಠಿಸುವುದರ ಜೊತೆಗೆ, ಶಿಕ್ಷಕರು ಅದರ ಅರ್ಥ ಮತ್ತು ವೈಜ್ಞಾನಿಕ ಪ್ರಸ್ತುತತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಬೇಕು. ‘ವಾರದ ಶ್ಲೋಕ’ವನ್ನು ಆಯ್ಕೆ ಮಾಡಿ, ಶಾಲೆಯ ಸೂಚನಾ ಫಲಕದಲ್ಲಿ ಅದರ ಅರ್ಥದೊಂದಿಗೆ ಪ್ರದರ್ಶಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಉತ್ತೇಜಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ವಾರಾಂತ್ಯದಲ್ಲಿ ಶ್ಲೋಕದ ಬಗ್ಗೆ ಚರ್ಚೆಗಳು ಮತ್ತು ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ತರಗತಿಯ ಚಟುವಟಿಕೆಯಾಗಿ ಸೇರಿಸಲಾಗುವುದು.

ಈ ಉಪಕ್ರಮವು ಗೀತೆಯ ಬೋಧನೆಗಳನ್ನು ಜಾತ್ಯತೀತ ದೃಷ್ಟಿಕೋನದಿಂದ, ಮನೋವಿಜ್ಞಾನ, ತರ್ಕ, ವರ್ತನೆಯ ವಿಜ್ಞಾನ ಮತ್ತು ನೈತಿಕ ತತ್ತ್ವಶಾಸ್ತ್ರದ ಮೂಲಕ ಸಮೀಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.. ಶಿಕ್ಷಣ ಇಲಾಖೆಯು, ಗೀತೆಯ ಬೋಧನೆಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ನಡವಳಿಕೆ ಮತ್ತು ವರ್ತನೆಯ ಮೇಲೆ ಪ್ರಭಾವ ಬೀರಬೇಕು ಎಂದು ನಿರ್ದೇಶಿಸಿದೆ. ಇದರಿಂದ ವಿದ್ಯಾರ್ಥಿಗಳನ್ನು ಬಲಿಷ್ಠ ವ್ಯಕ್ತಿತ್ವ ಮತ್ತು ಸಮತೋಲಿತ ಮನಸ್ಸಿನ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ.



Source link

Leave a Reply

Your email address will not be published. Required fields are marked *