dharmasthala missing cases ಧರ್ಮಸ್ಥಳದಲ್ಲಿ ನಿಗೂಢ ಸಾವು ಪ್ರಕರಣ: ಈ ಕಾರಣಕ್ಕೆ ಘಟನಾ ಸ್ಥಳಕ್ಕೆ ಎಸ್ ಐ ಟಿ ಭೇಟಿ ನೀಡ್ತಿಲ್ಲ | Dharmasthala Burial Case Sit Formed To Probe Suspicious Deaths Temple Town Gow

dharmasthala missing cases ಧರ್ಮಸ್ಥಳದಲ್ಲಿ ನಿಗೂಢ ಸಾವು ಪ್ರಕರಣ: ಈ ಕಾರಣಕ್ಕೆ ಘಟನಾ ಸ್ಥಳಕ್ಕೆ ಎಸ್ ಐ ಟಿ ಭೇಟಿ ನೀಡ್ತಿಲ್ಲ | Dharmasthala Burial Case Sit Formed To Probe Suspicious Deaths Temple Town Gow



ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ತನಿಖೆಗಾಗಿ ಎಸ್ಐಟಿ ರಚನೆಯಾಗಿದೆ. ತನಿಖಾ ತಂಡವು ಸ್ಥಳಕ್ಕೆ ಭೇಟಿ ನೀಡುವ ದಿನಾಂಕ ಇನ್ನೂ ಅಂತಿಮವಾಗಿಲ್ಲ. ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಬೆಂಗಳೂರು: ಧರ್ಮಸ್ಥಳದಲ್ಲಿ (dharmasthala missing cases) ಬಹಿರಂಗವಾಗುತ್ತಿರುವ ನಿಗೂಢ ಮತ್ತು ಅಸಹಜ ಸಾವು ಆರೋಪದ ಪ್ರಕರಣ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿದೆ. ಈ ಕುರಿತಂತೆ ಆಡಳಿತ, ರಾಜಕೀಯ ಮತ್ತು ಭಕ್ತ ಸಮಾಜದಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ನಾಳೆ‌ ಧರ್ಮಸ್ಥಳಕ್ಕೆ ಎಸ್ ಐ ಟಿ ಭೇಟಿ ನೀಡ್ತಿಲ್ಲ

ಇದೀಗ ಎಸ್‌ಐಟಿ ಮೂಲಗಳ ಪ್ರಕಾರ, ನಾಳೆ ಅಂದರೆ ಜು.23ರಂದು ಧರ್ಮಸ್ಥಳಕ್ಕೆ ತನಿಖೆಗೆಂದು ತಂಡ ಭೇಟಿ ನೀಡುವುದು ಅಂತಿಮವಾಗಿಲ್ಲ. ಇನ್ನೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತನಿಖೆಯ ರೂಪುರೇಷೆಗಳನ್ನು ತಯಾರಿಸಲು ಯೋಜನೆ ಸಿದ್ಧವಾಗಬೇಕಿದೆ. ತನಿಖೆ ರೂಪುರೇಷೆ‌ ಸಿದ್ದಪಡಿಸಿದ ಬಳಿಕ ಹೋಗಲಾಗುವುದು.ಸ್ಪಷ್ಟ ಆದೇಶ ಬಂದ ನಂತರ ಮಾತ್ರ ಸ್ಥಳಕ್ಕೆ ಭೇಟಿ ಸಾಧ್ಯವಾಗುತ್ತದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಎಸ್ ಐ ಟಿ ಮೂಲಗಳು ಮಾಹಿತಿ ನೀಡಿವೆ.

ಡಿ.ಕೆ. ಸುರೇಶ್ ಪ್ರತಿಕ್ರಿಯೆ: “ಅನುಮಾನಗಳಿಗೆ ಉತ್ತರ ಬೇಕು”

ವಿಶೇಷ ತನಿಖಾ ತಂಡದ ರಚನೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದೆ ಡಿ.ಕೆ. ಸುರೇಶ್, “ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರ. ಇಲ್ಲಿ ಜನರು ದಶಕಗಳಿಂದ ಶ್ರದ್ಧೆಯಿಂದ ನಡೆದುಕೊಂಡಿದ್ದಾರೆ. ಈಗ ಕೆಲವು ದೂರುಗಳು ಬಂದಿರುವುದರಿಂದ ಅನುಮಾನಗಳಿಗೆ ಸ್ಪಷ್ಟತೆ ನೀಡುವುದು ಕ್ಷೇತ್ರಕ್ಕೂ ಉತ್ತಮ. ಯಾರ ಮೇಲಾದರೂ ಆರೋಪಗಳು ಬಂದಿದ್ದರೆ, ಸರಿಯಾಗಿ ತನಿಖೆ ನಡೆಯಬೇಕು. ಶ್ರೀ ಕ್ಷೇತ್ರ ಎಲ್ಲರ ಆಸ್ತಿಯಾಗಿದೆ, ಯಾರೊಬ್ಬರ ವೈಯಕ್ತಿಕ ಸ್ಥಾನವಲ್ಲ ಎಂದು ಹೇಳಿದರು.

ಗೃಹ ಸಚಿವ ಜಿ. ಪರಮೇಶ್ವರ್ ಕಠಿಣ ಎಚ್ಚರಿಕೆ

ಈ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಸ್‌ಐಟಿ ರಚನೆಯಾಗಿದೆ ಮತ್ತು ಅವರು ಶೀಘ್ರದಲ್ಲೇ ಧರ್ಮಸ್ಥಳಕ್ಕೆ ತೆರಳಿ ತನಿಖೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಪೊಲೀಸರಿಗೆ ಕೂಡ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿ ಯಾರಾದರೂ ಎಸ್‌ಐಟಿಯಿಂದ ದೂರ ಉಳಿಯಲು ಯತ್ನಿಸುತ್ತಿದ್ದರೆ ಅಥವಾ ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇಂದಿನ ತನಿಖೆಯ ಮೇಲೆ ಕೆಲವರು ರಾಜಕೀಯ ಉದ್ದೇಶವಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಅವರೇ ಆ ತರದ ಆರೋಪ ಮಾಡುತ್ತಿರುವುದು ಶಂಕೆಗೆ ಕಾರಣವಾಗುತ್ತದೆ ಎಂದು ಬಿಜೆಪಿಯ ವಿರುದ್ಧ ಟೀಕೆ ಮಾಡಿದ್ದಾರೆ.

ಪ್ರಣವ್ ಮೊಹಂತಿ ನೇತೃತ್ವದ ತಂಡ ಭೇಟಿ ಸಾಧ್ಯತೆ

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರು ಇಂದು ಅಥವಾ ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ತನಿಖೆಯ ಪ್ರಗತಿಯ ಅನುಸಾರ ಭೇಟಿ ದಿನಾಂಕ ತೀರ್ಮಾನವಾಗಲಿದೆ.

ಉಗ್ರಪ್ಪ ವರದಿಯ ಪ್ರಸ್ತಾಪ

ಈ ಮಧ್ಯೆ, ಉಗ್ರಪ್ಪ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಬೆಳ್ತಂಗಡಿಯ ಪ್ರದೇಶದಲ್ಲಿ ಅಸಹಜ ಸಾವುಗಳ ಸಂಖ್ಯೆಯಲ್ಲಿ ಏರಿಕೆಯಿರುವ ಬಗ್ಗೆ ಉಲ್ಲೇಖವಿದೆ. ಈ ವರದಿಯನ್ನು ಸರ್ಕಾರ ಪರಿಶೀಲನೆಗೆ ತೆಗೆದುಕೊಂಡಿದ್ದು, ಅದು ಸರ್ಕಾರಕ್ಕೆ ಸಲ್ಲಿಸಿದ ಅಧಿಕೃತ ವರದಿಯಾಗಿದೆಯೇ ಎಂಬುದನ್ನು ತಪಾಸಿಸಲಾಗುತ್ತಿದೆ.

ಮುಖ್ಯ ಅಂಶಗಳು

  • ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ
  • ಈಗಾಗಲೇ ಆಂತರಿಕ ಸಭೆಗಳು ನಡೆಯುತ್ತಿದ್ದು, ಸ್ಥಳದ ಪರಿಶೀಲನೆಗೆ ತಯಾರಿ
  • ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ
  • ಪವಿತ್ರ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ ಪಾರದರ್ಶಕ ತನಿಖೆ ನಡೆಯಬೇಕೆಂಬುದು ಎಲ್ಲರ ಅಭಿಪ್ರಾಯ.



Source link

Leave a Reply

Your email address will not be published. Required fields are marked *