Headlines

ಡಿಕೆ ಶಿವಕುಮಾರ್‌ಗೆ 10,000 ಕೋಟಿ ರೂ. ಚಾಲೆಂಜ್‌ ಹಾಕಿದ ಪ್ರಶಾಂತ್‌ ಸಂಬರಗಿ! | Organ Donation Prashanth Sambargi Challenge To Dk Shivakumar

ಡಿಕೆ ಶಿವಕುಮಾರ್‌ಗೆ 10,000 ಕೋಟಿ ರೂ. ಚಾಲೆಂಜ್‌ ಹಾಕಿದ ಪ್ರಶಾಂತ್‌ ಸಂಬರಗಿ! | Organ Donation Prashanth Sambargi Challenge To Dk Shivakumar


ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಅಂಗಾಂಗ ದಾನ ಮಾಡಿ ಎಂದು ಕರೆಕೊಟ್ಟಿದ್ದು, ಆಗ ಪ್ರಶಾಂತ್‌ ಸಂಬರಗಿ ಅವರು ನಿಮ್ಮ ಸಹೋದರರ ಕುಟುಂಬದಿಂದ ದಾನ ಮಾಡಿಸಿ ಎಂದು ಒಪನ್‌ ಚಾಲೆಂಜ್‌ ಹಾಕಿಸಿದ್ದಾರೆ. 

ಡಿಸಿಎಂ ಡಿಕೆ ಶಿವಕುಮಾರ್‌ ಅವರು ಅಂಗಾಂಗ ದಾನ ಮಾಡುವಂತೆ ಸೋಶಿಯಲ್‌ ಮೀಡಿಯಾದಲ್ಲಿ ಕರೆ ನೀಡಿದ್ದರು. ಬಿಗ್‌ ಬಾಸ್‌ ಕನ್ನಡ 8 ಸ್ಪರ್ಧಿ ಪ್ರಶಾಂತ್‌ ಸಂಬರಗಿ ಅವರು ಹತ್ತು ಸಾವಿರ ಕೋಟಿ ರೂಪಾಯಿ ಚಾಲೆಂಜ್‌ ಮಾಡ್ತೀನಿ, ನಿಮ್ಮ ಸಹೋದರರ ಕುಟುಂಬದಿಂದ ಅಂಗಾಂಗ ದಾನ ಮಾಡಿಸಿ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ಏನು ಹೇಳಿದ್ದಾರೆ?

“ಒಬ್ಬ ವ್ಯಕ್ತಿಯಿಂದ ದಾನ ಮಾಡಿದ ಅಂಗಾಂಗಗಳಿಂದ ಎಂಟು ಜೀವಗಳನ್ನು ಉಳಿಸಬಹುದು. ಅಮೂಲ್ಯ ಜೀವಗಳನ್ನು ಉಳಿಸಿ, ಮತ್ತೊಬ್ಬರಿಗೆ ಹೊಸ ಜೀವನವನ್ನು ನೀಡಲು ಅಂಗಾಂಗಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡೋಣ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

“ನಿಮ್ಮ ಸಹೋದರರಿಗೂ ಅವರ ಅಂಗಾಂಗಗಳನ್ನು ದಾನ ಮಾಡಲು ಹೇಳಿ. ಆದರೆ ಅವರ ಭಾಷಾಶಾಸ್ತ್ರವು ಅವರಿಗೆ ದಾನ ಮಾಡಲು ಅನುಮತಿಸುವುದಿಲ್ಲ ಆದರೆ ನಿಮ್ಮ ಸಹೋದರರಿಗೂ ಅವರ ಅಂಗಾಂಗಗಳನ್ನು ದಾನ ಮಾಡಲು ಹೇಳಿ. ಆದರೆ ಅವರ ಭಾಷಾಶಾಸ್ತ್ರವು ಅವರಿಗೆ ದಾನ ಮಾಡಲು ಅನುಮತಿಸುವುದಿಲ್ಲ ಆದರೆ ಸ್ವೀಕರಿಸುತ್ತದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

“ಜನರಿಗೆ ಮರುಜೀವ ಕೊಡಿ, ದಾನ ಮಾಡಿ. 2025ರ ಜುಲೈ 30ರ ವೇಳೆಗೆ ರಾಜ್ಯದಲ್ಲಿ 43,221 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ. ಧಾರವಾಡ ಜಿಲ್ಲೆ ಅಂಗಾಂಗ ದಾನದಲ್ಲಿ ಮುಂಚೂಣಿಯಿದ್ದು, 11,186 ಮಂದಿ ಅಂಗಾಂಗ ದಾನ ಪ್ರತಿಜ್ಞೆ ಮಾಡಿದ್ದಾರೆ. ಸುವರ್ಣ ಆರೋಗ್ಯ ಟ್ರಸ್ಟ್ ಅಡಿ ಬಿಪಿಎಲ್ ಕುಟುಂಬಗಳಿಗೆ ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಬಹು ಅಂಗಾಂಗ ವೈಫಲ್ಯಕ್ಕೆ ಉಚಿತವಾಗಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಅಂಗಾಂಗಕ್ಕೆ ಕಾಯುತ್ತಿದ್ದು, ಮೂತ್ರಪಿಂಡಕ್ಕೆ ಹೆಚ್ಚಿನ ಬೇಡಿಕೆಯಿದೆ. ನಿಮ್ಮ ಅಂಗಾಂಗ ದಾನ ಮತ್ತೊಬ್ಬರಿಗೆ ಜೀವದಾನ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಎಂದಿದ್ದಾರೆ.

ಪ್ರಶಾಂತ್‌ ಸಂಬರಗಿ ಚಾಲೆಂಜ್‌ ಏನು?

ನಿಮ್ಮ ಸಹೋದರ ಕುಟುಂಬದಿಂದ ಒಂದು ಅಂಗಾಂಗ ದಾನ ಮಾಡಿಸಿ ಅಂತ ಹತ್ತು ಸಾವಿರ ಕೋಟಿ ರೂಪಾಯಿ ಚಾಲೆಂಜ್‌ ಮಾಡ್ತೀನಿ. ಟೋಪಿ ಬ್ರದರ್‌ ಕಡೆಯಿಂದ ಅಂಗಾಂಗ ದಾನ ಮಾಡಿಸಿ. ಸರ್ವೇ ಜನಃ ಸುಖೀನೋ ಭವಂತು ಎನ್ನುವ ವಾಕ್ಯ ಪರಿಪಾಲಕರು ಅವರಲ್ಲ. ನಿಮ್ಮ Ghazwa-e-Hind ಅವರಿಗೆ ಉಚಿತವಾಗಿ ಜ್ಞಾನ ಕೊಡಿ (an al-Qaeda-affiliated Islamist jihadist militant group ) ವಸುದೈವ ಕುಟುಂಬಕಂ. 2014ರಿಂದ ಇಲ್ಲಿಯವರೆಗೆ ಅಂಗಾಂಗ ದಾನ ಮಾಡಲಾಗಿದ್ದು, ಅದರಲ್ಲಿ ಒಲಾ ಉಬರ್‌ ಕಮ್ಯುನಿಟಿಯವರಿಲ್ಲ.



Source link

Leave a Reply

Your email address will not be published. Required fields are marked *