Headlines

Kaun Banega Crorepati 17 first crorepati Aditya Kumar: ಕೋಟಿ ಗೆಲ್ಲಲು ಆದಿತ್ಯ ಕುಮಾರ್‌ ಮಾಡ್ಕೊಂಡಿದ್ದ ತಯಾರಿ ಹೇಗಿತ್ತು? | Amitabh Bachchan Kaun Banega Crorepati 17 First Crorepati Aditya Kumar

Kaun Banega Crorepati 17 first crorepati Aditya Kumar: ಕೋಟಿ ಗೆಲ್ಲಲು ಆದಿತ್ಯ ಕುಮಾರ್‌ ಮಾಡ್ಕೊಂಡಿದ್ದ ತಯಾರಿ ಹೇಗಿತ್ತು? | Amitabh Bachchan Kaun Banega Crorepati 17 First Crorepati Aditya Kumar



Kaun Banega Crorepati 17 first crorepati Aditya Kumar: ಕೋಟಿ ಗೆಲ್ಲಲು ಆದಿತ್ಯ ಕುಮಾರ್‌ ಮಾಡ್ಕೊಂಡಿದ್ದ ತಯಾರಿ ಹೇಗಿತ್ತು? | Amitabh Bachchan Kaun Banega Crorepati 17 First Crorepati Aditya Kumar

Amitabh Bachchan Kaun Banega Crorepati: ನಟ ಅಮಿತಾಬ್ ಬಚ್ಚನ್ ನಿರೂಪಣೆಯ ‘ಕೌನ್ ಬನೇಗಾ ಕರೋಡ್‌ಪತಿ’ ಶೋನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿರುವ ಆದಿತ್ಯ ಕುಮಾರ್‌ ಹೇಳಿದ್ದೇನು? 

ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಕ್ವಿಜ್ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ 17ನೇ ಸೀಸನ್ ( Amitabh Bachchan Kaun Banega Crorepati 17 First Crorepati Aditya Kumar ) ಆಗಸ್ಟ್ 11 ರಿಂದ ಪ್ರಸಾರವಾಗುತ್ತಿದೆ. ಈಗ ಶೋಗೆ ಮೊದಲ ಕೋಟ್ಯಧಿಪತಿ ಸಿಕ್ಕಿದ್ದಾರೆ. ಉತ್ತರಾಖಂಡದ ಆದಿತ್ಯ ಕುಮಾರ್ ( CISF Officer ) 1 ಕೋಟಿ ರೂಪಾಯಿ ಗೆದ್ದಿದ್ದಾರೆ. 7 ಕೋಟಿ ರೂಪಾಯಿಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

‘ಕೌನ್ ಬನೇಗಾ ಕರೋಡ್‌ಪತಿ 17’ರ ಪ್ರೋಮೋದಲ್ಲಿ, ಆದಿತ್ಯ ತಮ್ಮ ಕಾಲೇಜು ದಿನಗಳ ತಮಾಷೆಯ ಘಟನೆಯನ್ನು ಅಮಿತಾಬ್ ಬಚ್ಚನ್ ಜೊತೆ ಹಂಚಿಕೊಂಡಿದ್ದಾರೆ. ‘ನನ್ನನ್ನು ಕೆಬಿಸಿಗೆ ಆಯ್ಕೆ ಮಾಡಲಾಗಿದೆ. ಒಂದು ವಾರದ ನಂತರ ಕೆಬಿಸಿ ತಂಡ ವಿಡಿಯೊ ಶೂಟಿಂಗ್‌ಗೆ ಬರುತ್ತದೆ, ಎಲ್ಲರೂ ಸಿದ್ಧರಾಗಿರಿ’ ಎಂದು ಹೇಳಿದ್ದೆ. ನನ್ನ ಸ್ನೇಹಿತರು ಹೊಸ ಪ್ಯಾಂಟ್, ಶರ್ಟ್ ಖರೀದಿಸಿದರು. ಒಂದು ವಾರದ ನಂತರ ಯಾರೂ ಬಾರದಿದ್ದಾಗ, ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿದೆ. ಈಗ ನಿಜವಾಗಿಯೂ ಫೋನ್ ಬಂದಾಗ, ನನ್ನ ಸ್ನೇಹಿತರು ಅದನ್ನು ಮತ್ತೊಂದು ತಮಾಷೆ ಎಂದು ಭಾವಿಸಿದರು. ನಾನು ಅವರಿಗೆ ಅಧಿಕೃತ ಮೇಲ್ ತೋರಿಸಿದಾಗ ಮಾತ್ರ ನಂಬಿದರು. ಆಗ ಅಮಿತಾಬ್ ಬಚ್ಚನ್, ‘ನೀವು ಶೋಗೆ ಬಂದಿಲ್ಲ, ಆದರೆ ಆಟದಲ್ಲಿ ಬಹಳ ಮುಂದೆ ಬಂದಿದ್ದೀರಿ’ ಎಂದು ಹೇಳಿದರು.

KBC 17ರ ಮೊದಲ ಕೋಟ್ಯಾಧಿಪತಿ ಆದಿತ್ಯ ಕುಮಾರ್ ಇತ್ತೀಚೆಗೆ ₹1 ಕೋಟಿ ಗೆದ್ದಿದ್ದಾರೆ. ಹಾಟ್ ಸೀಟ್ ಅನುಭವ, ಅಮಿತಾಭ್ ಬಚ್ಚನ್ ಭೇಟಿ, ಗೆಲುವಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಶಿಸ್ತು, ಆತ್ಮವಿಶ್ವಾಸ, ಕುಟುಂಬದ ಬೆಂಬಲವೇ ಯಶಸ್ಸಿನ ಗುಟ್ಟು ಎಂದಿದ್ದಾರೆ.

ಅಮಿತಾಭ್ ಬಚ್ಚನ್ ಜೊತೆಗಿನ ಮೊದಲ ಮಾತುಕತೆ ಹೇಗಿತ್ತು?

ನಾನು ಮಂತ್ರಮುಗ್ಧನಾಗಿದ್ದೆ. ಅವರ ವ್ಯಕ್ತಿತ್ವ ಅದ್ಭುತ – ಪ್ರೀತಿ, ಗೌರವ, ಆತ್ಮವಿಶ್ವಾಸ ತುಂಬಿತ್ತು. ನಾನು ಹೆದರುತ್ತೇನೆಂದು ಭಾವಿಸಿದ್ದೆ, ಆದರೆ ಅವರು ಮಾತನಾಡಿಸಿದ ರೀತಿ ಬಹಳ ಸ್ನೇಹಪರವಾಗಿತ್ತು.

ನಿಮ್ಮ ಗೆಲುವಿಗೆ ಕಾರಣವಾದ ತಯಾರಿ ಏನು?

ಶಿಸ್ತು, ತಾಳ್ಮೆ ಮತ್ತು ಒತ್ತಡದಲ್ಲಿ ಶಾಂತವಾಗಿರುವ ಸಾಮರ್ಥ್ಯ. ಜ್ಞಾನ ಮತ್ತು ಬುದ್ಧಿವಂತಿಕೆ ಬದುಕು ಬದಲಿಸಬಲ್ಲದು ಎಂದು KBC ಸಾಬೀತುಪಡಿಸುತ್ತದೆ.

ಕಾರ್ಯಕ್ರಮದ ಅತ್ಯಂತ ಕಠಿಣ ಕ್ಷಣ ಯಾವುದು?

ಖಂಡಿತವಾಗಿಯೂ ₹1 ಕೋಟಿ ಪ್ರಶ್ನೆ. ಉತ್ತರ ಗೊತ್ತಿದ್ದರೂ, ಹಣದ ಒತ್ತಡ ಆತ್ಮವಿಶ್ವಾಸ ಕುಂದಿಸುತ್ತದೆ. ನಾನು ಸ್ವಲ್ಪ ನಿಂತು, ಉಸಿರಾಡಿ, ನನ್ನ ಮೇಲೆ ನಂಬಿಕೆ ಇಡಬೇಕಾಯಿತು.

ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗುವುದು ಬಹಳಷ್ಟು ಜನರ ಕನಸು. ಅದನ್ನು ಹೇಗೆ ಅನುಭವಿಸಿದ್ದೀರಿ?

ಅವರ ವ್ಯಕ್ತಿತ್ವ ಆಕರ್ಷಕ. ಅವರ ವಿನಮ್ರತೆ ನನ್ನನ್ನು ಬಹಳವಾಗಿ ಮುಟ್ಟಿತು. ಅವರು ನನ್ನ ಬದುಕಿನ ಬಗ್ಗೆ ಕೇಳಿದರು, ಕಷ್ಟದ ಸಮಯದಲ್ಲಿ ಪ್ರೋತ್ಸಾಹಿಸಿದರು, ನಾನು ಊಹೆಯಿಂದಲ್ಲ, ಜ್ಞಾನದಿಂದ ಆಡುತ್ತಿರುವುದನ್ನು ಶ್ಲಾಘಿಸಿದರು. ಅವರ ಪ್ರಶಂಸೆ ನನಗೆ ಹಣಕ್ಕಿಂತ ದೊಡ್ಡ ಬಹುಮಾನ.

₹1 ಕೋಟಿ ಗೆದ್ದಾಗ ನಿಮಗೆ ಹೇಗನಿಸಿತು?

ಇದು ಕೇವಲ ಹಣದ ವಿಷಯವಲ್ಲ. ತಯಾರಿ, ಶಾಂತಿ, ವಿಶ್ವಾಸ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಸಾಕ್ಷಿ. ₹1 ಕೋಟಿ ಒಂದು ಮೈಲಿಗಲ್ಲು, ಆದರೆ ನಿಜವಾದ ಗುರಿ ₹7 ಕೋಟಿ. ನಾನು ಧೈರ್ಯದಿಂದ ಆಡುವುದನ್ನು ಪ್ರೇಕ್ಷಕರು ನೋಡುತ್ತಾರೆ, ಏಕೆಂದರೆ ನನಗೆ ನಿಜವಾದ ಗೆಲುವು ಈ ಪ್ರಯಾಣ.

ಗೆಲುವಿನ ನಂತರ ನೀವು ಮೊದಲು ಏನು ಮಾಡಲು ಬಯಸುತ್ತೀರಿ?

ಈ ಖುಷಿಯನ್ನು ಗುಜರಾತ್‌ನ UTPPS ಉಕೈನಲ್ಲಿರುವ ನನ್ನ ಘಟಕದ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಕುಟುಂಬವೂ ಇಲ್ಲಿದೆ. ಅವರು ಯಾವಾಗಲೂ ನನ್ನ ಬೆನ್ನೆಲುಬಾಗಿದ್ದಾರೆ, ಮತ್ತು ಈ ಗೆಲುವು ಅವರದ್ದೂ ಹೌದು.

ಕೆಬಿಸಿಯನ್ನು ಎಲ್ಲಿ, ಯಾವಾಗ ವೀಕ್ಷಿಸಬಹುದು?

ಅಮಿತಾಬ್ ಬಚ್ಚನ್ ಅವರ ‘ಕೌನ್ ಬನೇಗಾ ಕರೋಡ್‌ಪತಿ 17’ ಅನ್ನು ನೀವು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸೋನಿ ಟಿವಿಯಲ್ಲಿ ವೀಕ್ಷಿಸಬಹುದು. ಸೋನಿ ಲಿವ್ ಮತ್ತು ಒಟಿಟಿ ಪ್ಲೇ ಪ್ರೀಮಿಯಂನಲ್ಲಿಯೂ ವೀಕ್ಷಿಸಬಹುದು.

 



Source link

Leave a Reply

Your email address will not be published. Required fields are marked *