ಒಳಮೀಸಲಾತಿಯಲ್ಲಿ ಅನ್ಯಾಯ, ನ್ಯಾ ನಾಗಮೋಹನ್ ದಾಸ್‌ಗೆ ಅವಮಾನ ಎಂದ ಬೊಮ್ಮಾಯಿ | Bjp Mp Basavaraj Bommai Slams Karnataka Congress Over Internal Reservation

ಒಳಮೀಸಲಾತಿಯಲ್ಲಿ ಅನ್ಯಾಯ, ನ್ಯಾ ನಾಗಮೋಹನ್ ದಾಸ್‌ಗೆ ಅವಮಾನ ಎಂದ ಬೊಮ್ಮಾಯಿ | Bjp Mp Basavaraj Bommai Slams Karnataka Congress Over Internal Reservation



ಒಳಮೀಸಲಾತಿಯಲ್ಲಿ ಅನ್ಯಾಯ, ನ್ಯಾ ನಾಗಮೋಹನ್ ದಾಸ್‌ಗೆ ಅವಮಾನ ಎಂದ ಬೊಮ್ಮಾಯಿ | Bjp Mp Basavaraj Bommai Slams Karnataka Congress Over Internal Reservation

ಕಾಂಗ್ರೆಸ್ ಒಳಮೀಸಲಾತಿ ಮಸೂದೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಈ ವರದಿ ಮೂಲಕ ನ್ಯಾಯಮೂರ್ತಿ ನಾಗಮೋಹನ್ ದಾಸ್‌ಗೆ ಕಾಂಗ್ರೆಸ್ ಅವಮಾನ ಮಾಡಿದೆ. ಇಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿ (ಆ.20) ರಾಜ್ಯದಲ್ಲಿ ಒಳಮೀಸಲಾತಿ ಕದನ ಶುರುವಾಗಿದೆ. ಕಾಂಗ್ರೆಸ್ ಸರ್ಕಾರ ಇಂದು ಸದನದಲ್ಲಿ ಒಲಮೀಸಲಾತಿ ವರದಿ ಮಂಡಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿ ವರದಿ ಮೀಸಲಾತಿ ಹಂಚಿಕೆ ಮಸೂದೆ ಮಂಡಿಸಲಾಗಿದೆ. ಈ ಮಸೂದೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್‌ಗೆ ಅಪಮಾನ ಮಾಡಿದ್ದು ಮಾತ್ರವಲ್ಲ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ ಎಂದಿದ್ದಾರೆ.

ಜನಸಂಖೆ ಆಧಾರದ ಮೇಲೆ ಮೀಸಲಾತಿ ಕೊಡಿ ಅಂತ ಸಂವಿಧಾನ ಹೇಳಿದೆ. ಆರು ಜಾತಿಗಳಿಂದ ಶುರುವಾಗಿ ಈಗ 101 ಜಾತಿಗಳು ಇವೆ. ಮೀಸಲಾತಿ ಯಾರಿಗೆ ಸಿಗಬೇಕು? ಮುಖ್ಯವಾಗಿ ಮೀಸಲಾತಿ ವಂಚಿತರಿಗೆ ಸಿಗಬೇಕು. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ಜಾತಿ ಸೇರಿಸಿದೆ. ಆದರೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಎಸ್ ಸಿ ಗೆ 13 ರಿಂದ 17 ಶೇಕಡಾ ಒಳಮೀಸಲಾತಿ ಮಾಡಿದ್ದು ಬಿಜೆಪಿ ಸರ್ಕಾರ. ಇದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುಲಭವಾಯಿತು ಎಂದು ಬೊಮ್ಮಾಯಿ ಹೇಳಿದ್ದಾರೆ. ಒಳಮೀಸಲಾತಿ ಹಂಚಿಕೆಗೆ ಕಾರಣ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಬೊಮ್ಮಾಯಿ ಹೇಳಿದ್ದರೆ

ಜಾತಿಗಣತಿ ಮಾಡಿ , ನ್ಯಾ ನಾಗಮೋಹನ್ ದಾಸ್ ಅವರಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇಷ್ಟೇ ಅಲ್ಲ ಅಲ್ಲದೇ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗಿದೆ ಎಂದಿದ್ದಾರೆ. ನಾಗಮೋಹನ್ ದಾಸ್ ಅವರ ವರದಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲ. ದಾಸ್ ಅವರ ವರದಿಯಲ್ಲಿ ಬಹಳ‌ ಸ್ಪಷ್ಟವಾಗಿ ಹೇಳಿದ್ದಾರೆ. ಐದಾರು ಜಾತಿಗಳೇ ಎಲ್ಲಾ ಸೌಲಭ್ಯ ಪಡೆದಿದ್ದಾರೆ ಅಂತ ವರದಿಯಲ್ಲಿ ಹೇಳಿದ್ದಾರೆ. ಎಲ್ಲಾ ಲಾಭ ಪಡೆದವರ ಜೊತೆ ಅಲೆಮಾರಿಗಳು, ಆದಿ ದ್ರಾವಿಡ, ಆದಿ ಕರ್ನಾಟಕ ದವರನ್ನು ಸೇರಿಸಿ ಅನ್ಯಾಯ ಮಾಡಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ಹೆಚ್ಚು ಆದಿ ಕರ್ನಾಟಕ, ಆದಿ ದ್ರಾವಿಡ ಇದ್ದಾರೆ. ಆದರೆ ಅವರಿಗೆ ಅನ್ಯಾಯ ಮಾಡಲಾಗಿದೆ.

ರಾಜಕೀಯ ಉಳಿವಿಗಾಗಿ ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ. ದಲಿತ ಮುಖ್ಯಮಂತ್ರಿಯ ಕೂಗು ತಗ್ಗಿಸಲು ಸಿದ್ದರಾಮಯ್ಯ ಅವರು ಈ ರೀತಿ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಜಾತಿ ಗಣತಿ ಮಾಡಿ, ಕೇಂದ್ರ ಸರ್ಕಾರದ ಜನಗಣತಿ ಎಣಿಕೆಗೆ ಯಾಕೆ ಕಾಯಬೇಕು ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

 



Source link

Leave a Reply

Your email address will not be published. Required fields are marked *