Headlines

‘ಅಭಿನಯ ಸರಸ್ವತಿ’ ಬಿ ಸರೋಜಾದೇವಿ ವೃತ್ತಿಜೀವನ ಶುರುವಾಗಿದ್ದು ಹೇಗೆ; ಸಿನಿಮಾ ಜರ್ನಿ ಒಳನೋಟ.. | Kannada Senior Actress B Saroja Devi Film Career And Her Acting Journey

‘ಅಭಿನಯ ಸರಸ್ವತಿ’ ಬಿ ಸರೋಜಾದೇವಿ ವೃತ್ತಿಜೀವನ ಶುರುವಾಗಿದ್ದು ಹೇಗೆ; ಸಿನಿಮಾ ಜರ್ನಿ ಒಳನೋಟ.. | Kannada Senior Actress B Saroja Devi Film Career And Her Acting Journey



ಅವರ ಅಭಿನಯಕ್ಕೆ ಸಂದ ಗೌರವಗಳು ಅಪಾರ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ (1969) ಮತ್ತು ಪದ್ಮಭೂಷಣ (1992) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದಲ್ಲದೇ, ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು..

ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ತಾರೆ, ‘ಅಭಿನಯ ಸರಸ್ವತಿ’ ಮತ್ತು ‘ಚತುರ್ಭಾಷಾ ತಾರೆ’ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಡಾ. ಬಿ. ಸರೋಜಾ ದೇವಿ (87) ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಬಿ ಸರೋಜಾ ದೇವಿ (B Saroja Devi) ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳು ಸ್ತಬ್ಧವಾಗಿದ್ದು, ಭಾರತೀಯ ಸಿನಿರಂಗದ ಸುವರ್ಣಯುಗದ ಮಹೋನ್ನತ ಅಧ್ಯಾಯವೊಂದು ಕೊನೆಗೊಂಡಿದೆ.

07 ಜನವರಿ 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸರೋಜಾ ದೇವಿ, ತಮ್ಮ 17ನೇ ವಯಸ್ಸಿನಲ್ಲಿಯೇ ‘ಮಹಾಕವಿ ಕಾಳಿದಾಸ’ (1955) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸುವುದರೊಂದಿಗೆ, ಸರೋಜಾ ದೇವಿಯವರ ಅದ್ಭುತ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ತಮ್ಮ ಅಂದ, ಅಭಿನಯ ಮತ್ತು ಆಕರ್ಷಕ ನೃತ್ಯದಿಂದಾಗಿ ಅವರು ಕೆಲವೇ ವರ್ಷಗಳಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ‘ಕಿತ್ತೂರು ರಾಣಿ ಚೆನ್ನಮ್ಮ’, ‘ಅಮರಶಿಲ್ಪಿ ಜಕಣಾಚಾರಿ’ (ಕನ್ನಡದ ಮೊದಲ ವರ್ಣಚಿತ್ರ), ‘ಸ್ಕೂಲ್ ಮಾಸ್ಟರ್’ ನಂತಹ ಐತಿಹಾಸಿಕ ಚಿತ್ರಗಳಲ್ಲಿ ಅವರ ಅಭಿನಯ ಚಿರಸ್ಮರಣೀಯ. ತಮಿಳಿನಲ್ಲಿ ಎಂ.ಜಿ. ರಾಮಚಂದ್ರನ್ (MGR) ಮತ್ತು ಶಿವಾಜಿ ಗಣೇಶನ್, ತೆಲುಗಿನಲ್ಲಿ ಎನ್.ಟಿ. ರಾಮರಾವ್ (NTR) ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರಂತಹ ದಿಗ್ಗಜರೊಂದಿಗೆ ನಟಿಸಿ, ‘ಚತುರ್ಭಾಷಾ ತಾರೆ’ ಎಂಬ ಬಿರುದನ್ನು ಸಾರ್ಥಕಪಡಿಸಿಕೊಂಡರು. ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ತಮ್ಮ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು.

ಅವರ ಅಭಿನಯಕ್ಕೆ ಸಂದ ಗೌರವಗಳು ಅಪಾರ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ (1969) ಮತ್ತು ಪದ್ಮಭೂಷಣ (1992) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದಲ್ಲದೆ, ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಇತರ ರಾಜ್ಯ ಪ್ರಶಸ್ತಿಗಳು ಅವರ ಮುಡಿಗೇರಿವೆ. ಬಹಳಷ್ಟು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿ ಕನ್ನಡ ನಟಿಗೆ ಅಪಾರ ಗೌರವ ಸಲ್ಲಿಸಿದ್ದಾರೆ. ನಟನೆ ಬಿಟ್ಟರೂ ಕೂಡ ಅವರು ಚಿತ್ರರಂಗದ ನಂಟನ್ನು ಬಿಟ್ಟಿರಲಿಲ್ಲ.

ಸರೋಜಾ ದೇವಿ ಅವರ ನಿಧನಕ್ಕೆ ಮುಖ್ಯಮಂತ್ರಿಗಳು, ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು ಹಾಗೂ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. “ಸರೋಜಾ ದೇವಿ ಅವರ ನಿಧನದಿಂದ ಭಾರತೀಯ ಚಿತ್ರರಂಗ ಬಡವಾಗಿದೆ. ಅವರ ಸೌಂದರ್ಯ, ಪ್ರತಿಭೆ ಮತ್ತು ಸರಳತೆ ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಲವು ಹಿರಿಯ ಹಾಗೂ ಕಿರಿಯ ನಟನಟಿಯು ಬಿ ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ನಗು, ಭಾವಪೂರ್ಣ ಅಭಿನಯ ಮತ್ತು ಸೊಗಸಾದ ವ್ಯಕ್ತಿತ್ವದಿಂದ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ‘ಅಭಿನಯ ಸರಸ್ವತಿ’ಯ ಅಗಲಿಕೆ, ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಇದೀಗ ಅರ್ ಅಶೋಕ್ ಸೇರಿದಂತೆ ಹಲವು ಗಣ್ಯರು ಅಗಲಿದ ನಟಿ ಬಿ ಸರೋಜಾದೇವಿಯ ಅಂತಮ ದರ್ಶನ ಪಡೆದಿದ್ದಾರೆ. ಭಾರತದ ಸೂಪರ್ ಸ್ಟಾರರ್ ನಟ ರಜನಿಕಾಂತ್ ಅವರು ನಟಿ ಬಿ ಸರೋಜಾದೇವಿ ಸಾವಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾ ಎಕ್ಸ್‌ (X) ನಲ್ಲಿ ಕಂಬನಿ ಮಿಡಿದಿದ್ದಾರೆ. 

 



Source link

Leave a Reply

Your email address will not be published. Required fields are marked *