ಜಾಮೀನು ಸಿಕ್ಕ ತಿಮರೋಡಿಗೆ ಮತ್ತೊಂದು ಶಾಕ್, ವಿಚಾರಣೆ ನೋಟಿಸ್‌ಗೆ ಸಜ್ಜಾದ ಬೆಳ್ತಂಗಡಿ ಪೊಲೀಸ್ | Belthangady Police To Issue Notice For Questioning To Mahesh Shetty Thimarody

ಜಾಮೀನು ಸಿಕ್ಕ ತಿಮರೋಡಿಗೆ ಮತ್ತೊಂದು ಶಾಕ್, ವಿಚಾರಣೆ ನೋಟಿಸ್‌ಗೆ ಸಜ್ಜಾದ ಬೆಳ್ತಂಗಡಿ ಪೊಲೀಸ್ | Belthangady Police To Issue Notice For Questioning To Mahesh Shetty Thimarody



ಜಾಮೀನು ಸಿಕ್ಕ ತಿಮರೋಡಿಗೆ ಮತ್ತೊಂದು ಶಾಕ್, ವಿಚಾರಣೆ ನೋಟಿಸ್‌ಗೆ ಸಜ್ಜಾದ ಬೆಳ್ತಂಗಡಿ ಪೊಲೀಸ್ | Belthangady Police To Issue Notice For Questioning To Mahesh Shetty Thimarody

ಜಾಮೀನು ಪಡೆದು ಹೊರಬಂದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೆಳ್ತಂಗಡಿ ಪೊಲೀಸರು ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದಾರೆ

ಬೆಳ್ತಂಗಡಿ (ಆ.24) ಧರ್ಮಸ್ಥಳ ಪ್ರಕರಣದಲ್ಲಿ ದಂಡು ದಂಡಾಗಿ ಬಂದ ಹೋರಾಟಗಾರರು, ದೂರುದಾರು ಒಬ್ಬೊಬ್ಬರೆ ಅರೆಸ್ಟ್ ಆಗುತ್ತಿದ್ದಾರೆ. ಇತ್ತ ಗಂಭೀರ ಆರೋಪ ಮಾಡುತ್ತಿದ್ದ ಹಲವರು ಸೈಲೆಂಟ್ ಆಗಿ ನಾಪತ್ತೆಯಾಗಿದ್ದಾರೆ. ಹೋರಾಟದ ನಡುವೆ ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಅರೆಸ್ಟ್ ಆಗಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ಮನೆಗೆ ಮರಳಿದ ಬೆನ್ನಲ್ಲೇ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಳ್ತಂಗಡಿ ಪೊಲೀಸರು ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ವಿಚಾರಣೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ.

ಉಡುಪಿಯ ಬ್ರಹ್ಮಾಪರ ಪೊಲೀಸರಿಂದ ಅರೆಸ್ಟ್, ಇದೀಗ ಬೆಳ್ತಂಗಡಿ ಪೊಲೀಸರ ನೋಟಿಸ್

ಹೇಳಿಕೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಡುಪಿಯ ಬ್ರಹ್ಮಾವರ ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಇದೀಗ ವಿಚಾರಣೆ ನೋಟಿಸಲು ನೀಡಲು ಬೆಳ್ತಂಗಡಿ ಪೊಲೀಸರು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಬೆಳ್ತಂಗಡಿ ಪೊಲೀಸರು ಮುಂದಾಗಿದ್ದರು.

ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ

ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಹೋದ ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಈಗಾಗಲೇ ವಿಚಾರಣೆಗೆ ಹಾಜರಾಗಿರುವ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ದಾಖಲಿಸಿದ್ದಾರೆ. ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ನೋಟಿಸ್ ನೀಡಲು ಪೊಲೀಸರು ತಯಾರಿ ನಡೆಸಿದ್ದಾರೆ.

ಮಹೇಶ್ ಶೆಟ್ಟಿ ಗ್ಯಾಂಗ್‌ಗೆ ಸಂಕಷ್ಟ

ಧರ್ಮಸ್ಥಳ ವಿರುದ್ಧ ನಡೆಸಿದ ಸೌಜನ್ಯ ಪ್ರಕರಣದ ಕಾವು ತಣ್ಣಗಾಗುತ್ತಿದ್ದಂತೆ, ಬುರುಡೆ ಪ್ರಕರಣದ ಮೂಲಕ ಹೋರಾಟ ನಡೆಸಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಕೆಲವರ ತಂಡ ಭಾರಿ ಪ್ಲಾನ್ ಮಾಡಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಈಗಾಲೇ ಬಂಧಿತನಾಗಿರುವ ದೂರುದಾರ ಮುಸುಕುದಾರಿ ಕೋರ್ಟ್ ನ್ಯಾಯಾಧೀಶರ ಮುಂದೇ ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸುಜಾತಾ ಭಟ್ ಪ್ರಕರಣವನ್ನೂ ಸೇರಿ ಭಾವನಾತ್ಮಕವಾಗಿ ಜನರನ್ನು ಧರ್ಮಸ್ಥಳ ವಿರುದ್ದ ದಂಗೆ ಏಳುವಂತೆ ವ್ಯವಸ್ಥಿತ ಷಡ್ಯಂತ್ರವನ್ನು ಮಾಡಲಾಗಿತ್ತು ಅನ್ನೋ ಮಾಹಿತಿಗಳು ಬಯಲಾಗಿದೆ.

 



Source link

Leave a Reply

Your email address will not be published. Required fields are marked *