Headlines

18 ತಿಂಗಳ ಸಂಸಾರಕ್ಕೆ ವಿಚ್ಛೇದನ ವೇಳೆ 18 ಕೋಟಿ ರೂಪಾಯಿಗೂ ಜೀವನಾಂಶ ಕೇಳಿದ ಪತ್ನಿ | Mumbai Woman Ask More Than Rs 18 Crore Alimony For 18 Months Of Marriage

18 ತಿಂಗಳ ಸಂಸಾರಕ್ಕೆ ವಿಚ್ಛೇದನ ವೇಳೆ 18 ಕೋಟಿ ರೂಪಾಯಿಗೂ ಜೀವನಾಂಶ ಕೇಳಿದ ಪತ್ನಿ | Mumbai Woman Ask More Than Rs 18 Crore Alimony For 18 Months Of Marriage



ಮದುವೆಯಾಗಿ 18 ತಿಂಗಳಿಗೆ ವಿಚ್ಚೇದನ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ. ಪತಿಯಿಂದ ಜೀವನಾಂಶವಾಗಿ ಪತ್ನಿ ಕೇಳಿದ್ದು 12 ಕೋಟಿ ರೂಪಾಯಿ, ಮುಂಬೈನಲ್ಲೊಂದು ಮನೆ, BMW ಕಾರು. ಈ ಬೇಡಿಕೆ ಆಲಿಸಿದ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆಯೊಂದನ್ನು ಕೇಳಿದೆ. 

ಮುಂಬೈ (ಜು.22) ಮದುವೆ ಅಷ್ಟೇ ಬೇಗ ವಿಚ್ಛೇದನ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಡಿವೋರ್ಸ್ ವೇಳೆ ಕೋರ್ಟ್‌ನಲ್ಲಿ ನೀಡುವ ಕಾರಣ, ಜೀವನಾಂಶ ಬೇಡಿಕೆಗಳು ಹಲವು ಭಾರಿ ಸುದ್ದಿಯಾಗುತ್ತದೆ. ಇದೀಗ ಮಹಿಳೆಯೊಬ್ಬರು ವಿಚ್ಚೇದನ ವೇಳೆ ಪತಿಯಿಂದ ಜೀವನಾಂಶವಾಗಿ ದುಬಾರಿ ಬೇಡಿಕೆ ಇಟ್ಟಿದ್ದಾಳೆ. ಈಕೆಯ ಬೇಡಿಕೆ ನೋಡಿ ಒಂದು ಕ್ಷಣ ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಒಂದು ಕ್ಷಣ ಸ್ಥಬ್ಧರಾಗಿದ್ದಾರೆ. ಕಾರಣ ವಚ್ಛೇದನ ವೇಳೆ ಜೀವನಾಂಶವಾಗಿ ಪತಿಯಿಂದ ಕೇಳಿದ್ದ ಬರೋಬ್ಬರಿ 12 ಕೋಟಿ ರೂಪಾಯಿ, ಮುಂಬೈನಲ್ಲಿ ಐಷಾರಾಮಿ ಮನೆ ಹಾಗೂ BMW ಕಾರು.

ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ

ಮದುವೆಯಾಗಿ 18ನೇ ತಿಂಗಳಿಗೆ ಸತಿ ಪತಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲ ದಿನಳಿಂದ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಪೈಕಿ ಪತ್ನಿ ಕೇಳುತ್ತಿರುವ ಜೀವನಾಂಶ ಹಾಗೂ ವಾದ ಎಲ್ಲರ ಗಮನ ಸೆಳೆದಿದೆ. ದುಬಾರಿ ಜೀವನಾಂಶ ಬೇಡಿಕೆಗೆ ಪತ್ನಿ ಕಾರಣವನ್ನು ನೀಡಿದ್ದಾರೆ. ಆದರೆ ಈ ಜೀವನಾಂಶ ಕೇಳಿದ ಸುಪ್ರೀಂ ಕೋರ್ಟ್ ಜಡ್ಜ್ ಖಡಕ್ ಪ್ರಶ್ನೆ ಕೇಳಿದ್ದಾರೆ. ಮದುವೆಯಾಗಿ ಕೇವಲ 18 ತಿಂಗಳು ಆಗಿದೆ ಅಷ್ಟೇ, ನೀವು ವಿದ್ಯಾವಂತರೀದ್ದೀರಿ, ಈ ರೀತಿ ಕೇಳುವ ಬದಲು ನೀವೇ ದುಡಿದು ಗಳಿಸಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್ ಜಡ್ಜ್ ಪ್ರಶ್ನಿಸಿದ್ದಾರೆ.

ಕೇವಲ 18 ತಿಂಗಳ ಸಂಸಾರ, 18 ಕೋಟಿಗೂ ಹೆಚ್ಚು ಜೀವನಾಂಶ

ಪತ್ನಿಯ ಜೀವನಾಂಶ ಬೇಡಿಕೆ ಕುರಿತು ನ್ಯಾಯಾಧೀಶರು ಚರ್ಚಿಸಿದ್ದಾರೆ. ಕೇವಲ 18 ತಿಂಗಳು ಸಂಸಾರ ಮಾಡಿ ಇದೀಗ 12 ಕೋಟಿ ರೂಪಾಯಿ, ಮುಂಬೈನಲ್ಲಿ ಮನೆ ಹಾಗೂ ಕಾರು ಕೇಳುತ್ತಿದ್ದೀರಿ. ಮದುವೆಗೂ ಮೊದಲು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀದ್ದೀರಿ. ನೀವು ಎಂಬಿಎ ಕೂಡ ಮಾಡಿದ್ದೀರಿ. ನೀವು ಮದುವೆಯಾದ ಮೇಲೆ ಕೆಲಸಕ್ಕೆ ಹೋಗುವುದಿಲ್ಲ ಅನ್ನೋ ನಿರ್ಧಾರ ನೀವೇ ನಿರ್ಧಾರ ತೆಗೆದುಕೊಂಡಿದ್ದೀರಿ. ನಿಮ್ಮ ಅನುಭವ, ವಿದ್ಯಾಭ್ಯಾಸಕ್ಕೆ ಬೆಂಗಳೂರು, ಹೈದರಾಬಾದ್‌ನಲ್ಲಿ ಉತ್ತಮ ಕೆಲಸ ಸಿಗಲಿದೆ. ಆದರೆ ನೀವು ಜೀವನಾಂಶ ಬೇಡಿಕೆ ಇಡುತ್ತೀದ್ದೀರಿ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಪತಿ ಅತೀ ಶ್ರೀಮಂತರು

ಪತ್ನಿಯ ಈ ದುಬಾರಿ ಬೇಡಿಕೆಗೆ ಹಿಂದಿನ ಕಾರಣ ಕೇಳಿ ಹಲವರು ಅಚ್ಚರಿಗೊಂಡಿದ್ದಾರೆ. ಈಕೆಯ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲ ನೀಡಿದ ಕಾರಣ ಪತಿ ತುಂಬಾ ಶ್ರೀಮಂತರು ಎಂದಿದ್ದಾರೆ. ಅವರಿಗೆ ನಾನು ಕೇಳಿದ ಜೀವನಾಂಶ ಮೊತ್ತ ಹೊರೆಯಾಗುವುದಿಲ್ಲ ಎಂದಿದ್ದಾರೆ. ಇದೀಗ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.

 



Source link

Leave a Reply

Your email address will not be published. Required fields are marked *