Headlines

ನಟ ಯದುಶ್ರೇಷ್ಠ ಮದುವೆಯಲ್ಲಿ ಮಿಥುನರಾಶಿ ಧಾರಾವಾಹಿ ಕಲಾವಿದರ ಮಿಲನ; ಮಿಸ್‌ ಆದ ಇಬ್ಬರು ಆರ್ಟಿಸ್ಟ್‌ ಯಾರು?

ನಟ ಯದುಶ್ರೇಷ್ಠ ಮದುವೆಯಲ್ಲಿ ಮಿಥುನರಾಶಿ ಧಾರಾವಾಹಿ ಕಲಾವಿದರ ಮಿಲನ; ಮಿಸ್‌ ಆದ ಇಬ್ಬರು ಆರ್ಟಿಸ್ಟ್‌ ಯಾರು?




<p>ಮಿಥುನರಾಶಿ ಧಾರಾವಾಹಿ ನಟ ಯದುಶ್ರೇಷ್ಠ ಅವರ ಮದುವೆಯಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಿದ್ದರು. ಅವರು ಯಾರು? ಯಾರು?&nbsp;</p><img><p>ಮಿಥುನರಾಶಿ ಧಾರಾವಾಹಿ ನಟ ಯದುಶ್ರೇಷ್ಠ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಕನ್ನಡ ಕಿರುತೆರೆ ಬಳಗ ಹಾಜರಿ ಹಾಕಿತ್ತು.</p><img><p>ನಟ ಯದುಶ್ರೇಷ್ಠ ಅವರು ಮದುವೆಯಾಗಿರೋ ಹುಡುಗಿ ಯಾರು? ಎಲ್ಲಿಯವರು? ಲವ್‌ ಮ್ಯಾರೇಜ್?‌ ಅಥವಾ ಅರೇಂಜ್‌ ಮ್ಯಾರೇಜ್‌ ಎನ್ನುವ ಬಗ್ಗೆ ಮಾಹಿತಿ ಇಲ್ಲ.</p><img><p>ಯದುಶ್ರೇಷ್ಠ ಅವರು ಅಷ್ಟಾಗಿ ಖಾಸಗಿ ವಿಷಯಗಳನ್ನು ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ಅಂದಹಾಗೆ ಯದುಶ್ರೇಷ್ಠ ಅವರು ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಆಕ್ಟಿವ್‌ ಆಗಿಲ್ಲ.</p><img><p>ಮಿಥುನರಾಶಿ ಧಾರಾವಾಹಿ ಕಲಾವಿದರು ಸದ್ಯ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೂ ಕೂಡ ಇವರು ಯದುಶ್ರೇಷ್ಠ ಮದುವೆಗೆ ಬಂದಿದ್ದು ಖುಷಿಯ ವಿಷಯ.&nbsp;</p><img><p>ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮಿಥುನರಾಶಿ ಧಾರಾವಾಹಿ ಪ್ರಸಾರ ಆಗಿತ್ತು. ಮಿಥುನ್‌, ರಾಶಿ ಕಥೆ ಇಲ್ಲಿತ್ತು. ಆಟೋ ಓಡಿಸುತ್ತಿದ್ದ ಹುಡುಗಿ ತನ್ನ ಮನೆ ನೋಡಿಕೊಳ್ಳುತ್ತಾಳೆ, ಆ ಬಳಿಕ ಅನಿರೀಕ್ಷಿತವಾಗಿ ಮದುವೆ ಆಗುತ್ತಾಳೆ, ಆಮೇಲೆ ಎದುರಿಸುವ ಕತೆ ಇಲ್ಲಿದೆ.&nbsp;</p><img><p>ಮಿಥುನರಾಶಿ ಧಾರಾವಾಹಿಯಲ್ಲಿ ಹೀರೋ ತಂಗಿ ಪಾತ್ರದಲ್ಲಿ ದೀಪಾ ಕಟ್ಟೆ ನಟಿಸಿದ್ದರು. ಅಂದಹಾಗೆ ಈಗ ಅವರು ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.&nbsp;</p><img><p>ಮಿಥುನರಾಶಿ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ದೀಪಾ ಕಟ್ಟೆ ಅವರು ನಟಿಸುತ್ತಿದ್ದರು. ಆಗ ಅವರ ತಂದೆ ಪಾತ್ರದಲ್ಲಿ ನಟಿಸುತ್ತಿದ್ದ ನಟನ ಜೊತೆ ದೀಪಾ ಕಟ್ಟೆ ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ…&nbsp;</p><img><p>ಮಿಥುನರಾಶಿ ಧಾರಾವಾಹಿ ನಾಯಕಿ ವೈಷ್ಣವಿ ಜೊತೆ ದೀಪಾ ಕಟ್ಟೆ ಫೋಟೋ ತೆಗೆಸಿಕೊಂಡಿದ್ದಾರೆ. ʼಮಿಥುನರಾಶಿʼ ಬಳಿಕ ಅವರು ಬೇರೆ ಭಾಷೆಯಲ್ಲಿ ಬ್ಯುಸಿಯಾದರು. ಈಗ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರಂತೆ.&nbsp;</p><img><p>ಮಿಥುನರಾಶಿ ಧಾರಾವಾಹಿಯ ಬಹುತೇಕ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಧಾರಾವಾಹಿ ಹೀರೋ ಸ್ವಾಮಿನಾಥನ್‌, ನಟಿ ಹರಿಣಿ ಶ್ರೀಕಾಂತ್‌ ಅವರು ಬಂದಿರಲಿಲ್ಲ. &nbsp;ನಟಿ ಹರಿಣಿ ಶ್ರೀಕಾಂತ್‌ ಅವರು “ನಾನು ಮಿಸ್‌ ಮಾಡ್ಕೊಂಡೆ” ಎಂದು ಬೇಸರ ಹೊರಹಾಕಿದ್ದಾರೆ.</p><img><p>ದೀಪಾ ಕಟ್ಟೆ ಅವರು ರಕ್ಷಿತ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಬ್ಬರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ಈ ಜೋಡಿ ಮಧ್ಯೆ ಲವ್‌ ಆಗಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.&nbsp;</p><img><p>ತಂದೆ-ತಾಯಿಗೆ ದೀಪಾ ಕಟ್ಟೆ ಏಕೈಕ ಮಗಳು. ಮಧ್ಯಮ ವರ್ಗದಲ್ಲಿ ಹುಟ್ಟಿದ ದೀಪಾ ಕಟ್ಟೆ ಅವರು ಕಷ್ಟಪಟ್ಟು ಓದಿ ಇಂದು ನಟನೆ ಜೊತೆಗೆ ಕಂಪೆನಿಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ.&nbsp;</p><img><p>ದೀಪಾ ಕಟ್ಟೆ ಅವರು ಶಿಕ್ಷಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಹೀಗಾಗಿ ಅವರು ನಟನೆ ಜೊತೆಗೆ ಬೇರೆ ಆದಾಯದ ಮೂಲವನ್ನು ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ.&nbsp;</p><img><p>ಮಿಥುನರಾಶಿ ಧಾರಾವಾಹಿ ಅಂತ್ಯವಾಗಿ ಕೆಲ ವರ್ಷಗಳು ಕಳೆದರೂ ಕೂಡ, ಅವರ ನಡುವಿನ ಬಾಂಧವ್ಯ ಸುಂದರವಾಗಿದೆ. ಇದು ಖುಷಿಯ ವಿಷಯ.&nbsp;</p>



Source link

Leave a Reply

Your email address will not be published. Required fields are marked *