ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಹಿಳೆಯರು ಯಾವ ದಿನಗಳಲ್ಲಿ ಉಪವಾಸ ಮಾಡುವುದು ಶ್ರೇಷ್ಠ ಎಂಬುದರ ಬಗ್ಗೆ ವಿವರಿಸಿದ್ದಾರೆ. ಅನೇಕ ರೀತಿಯ ಉಪವಾಸಗಳಿವೆ, ಆದರೆ ವಾರದಲ್ಲಿ ಪ್ರತಿ ದಿನವೂ ಉಪವಾಸ ಮಾಡುವ ಅಗತ್ಯವಿಲ್ಲ. ನಿರ್ಜಲ ಉಪವಾಸ, ಲಘು ಆಹಾರ ಉಪವಾಸ, ಹಣ್ಣಿನ ಉಪವಾಸ ಮತ್ತು ಹಾಲಿನ ಉಪವಾಸ. ಆದರೆ, ಯಾವ ದಿನ ಉಪವಾಸ ಮಾಡುವುದು ಶ್ರೇಷ್ಠ ಎಂಬುದು ಪ್ರಮುಖ ಪ್ರಶ್ನೆ. ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ದಿನಗಳಲ್ಲಿ ಉಪವಾಸ ಮಾಡುವುದು ತುಂಬಾ ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಸೋಮವಾರ ಶಿವನ ಮತ್ತು ಚಂದ್ರನ ವಾರ. ಈ ದಿನ ಉಪವಾಸ ಮಾಡುವುದರಿಂದ ಮಕ್ಕಳ ಶ್ರೇಯಸ್ಸು, ಶುಭಕಾರ್ಯಗಳು, ಆರೋಗ್ಯ ಸಮಸ್ಯೆಗಳು ಮತ್ತು ಕೋರ್ಟ್ ಪ್ರಕರಣಗಳಲ್ಲಿ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ. ಶುಕ್ರವಾರ ಮಹಾಲಕ್ಷ್ಮೀ ದೇವಿಯ ವಾರ. ಈ ದಿನದ ಉಪವಾಸವು ಆರ್ಥಿಕ ಸಮೃದ್ಧಿ, ಸಾಲದ ಸಮಸ್ಯೆಗಳ ನಿವಾರಣೆ ಮತ್ತು ದುಷ್ಟಶಕ್ತಿಗಳ ನಿಗ್ರಹಕ್ಕೆ ಸಹಾಯ ಮಾಡುತ್ತದೆ. ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!
ಶನಿವಾರದ ಉಪವಾಸವು ಗ್ರಹಕಾಟ, ಶನಿಕಾಟ, ಸಾಡೇಸಾತಿ ಮುಂತಾದ ಗ್ರಹದೋಷಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಮಾಟ, ಮಂತ್ರ, ತಂತ್ರ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ನವಗ್ರಹಗಳ ಕೃಪೆಗೆ ಪಾತ್ರರಾಗುವ ಸಾಧ್ಯತೆ ಇದೆ. ಹೀಗೆ, ಸೋಮವಾರ, ಶುಕ್ರವಾರ ಮತ್ತು ಶನಿವಾರದ ಉಪವಾಸಗಳು ಸರ್ವಶ್ರೇಷ್ಠ ಎಂದು ಡಾ. ಬಸವರಾಜ್ ಗುರುಜಿ ಅವರು ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:02 am, Thu, 26 June 25