ಅನಾಮಿಕ ತೋರಿದ ಪಾಯಿಂಟ್ 13ರ ಶೋಧ ಕಾರ್ಯಕ್ಕೆ ಬೇಕು 2 ಇಲಾಖೆಯ ಒಪ್ಪಿಗೆ

ಅನಾಮಿಕ ತೋರಿದ ಪಾಯಿಂಟ್ 13ರ ಶೋಧ ಕಾರ್ಯಕ್ಕೆ ಬೇಕು 2 ಇಲಾಖೆಯ ಒಪ್ಪಿಗೆ



ಅನಾಮಿಕ ತೋರಿದ ಪಾಯಿಂಟ್ 13ರ ಶೋಧ ಕಾರ್ಯಕ್ಕೆ ಬೇಕು 2 ಇಲಾಖೆಯ ಒಪ್ಪಿಗೆ
<p>ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳ ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿ ತೋರಿಸಿದ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.</p><img><p><strong>ಧರ್ಮಸ್ಥಳ ಗ್ರಾಮದ ಪರಿಸರ</strong>ದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸುತ್ತಿದೆ. ನೇತ್ರಾವತಿ ನದಿ ದಡದ ಅರಣ್ಯ ಭಾಗದಲ್ಲಿ ಅನಾಮಿಕ ತೋರಿಸಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.</p><img><p>ಮಾಸ್ಕ್ ಧರಿಸಿ ಬಂದಿರುವ ಅನಾಮಿಕ ಒಟ್ಟು 13 ಸ್ಥಳಗಳನ್ನು ತೋರಿಸಿದ್ದನು. ಇಂದು ಕೊನೆಯ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ 13ನೇ ಪಾಯಿಂಟ್ ನೇತ್ರಾವತಿ ಕಿಂಡಿ ಆಣೆಕಟ್ಟು ಪಕ್ಕದಲ್ಲಿದೆ. ಹಾಗಾಗಿ ಈ ಶೋಧ ಕಾರ್ಯ ನಡೆಸಲು ಎಸ್ಐಟಿ ತಂಡ 2 ಇಲಾಖೆಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ.</p><img><p>ನೀರಾವರಿ ಮತ್ತು ಮೆಸ್ಕಾಂ ಇಲಾಖೆಯ ಒಪ್ಪಿಗೆ ಪಡೆದುಕೊಳ್ಳಲು ಎಸ್‌ಐಟಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎರಡೂ ಇಲಾಖೆ ಅಧಿಕಾರಿಗಳು ಜೊತೆಯಲ್ಲಿ ಎಸ್‌ಐಟಿ ಮಾತುಕತೆಯನ್ನು ನಡೆಸಿದೆ. ಎರಡೂ ಇಲಾಖೆಗಳು ಒಪ್ಪಿಗೆ ಕೊಟ್ಟರೆ ಮಾತ್ರ ಇಂದು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯಲಿದೆ. ಬುಧವಾರ <strong>ಎಸ್‌ಐಟಿ ತಂಡ</strong> ನಿರ್ಗಮಿಸಿದ ಬಳಿಕ ಗಲಾಟೆ ನಡೆದಿತ್ತು.</p><img><p>ಈ ಹಿನ್ನೆಲೆ ಇಂದು ಧರ್ಮಸ್ಥಳ, ನೇತ್ರಾವತಿ ಭಾಗದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. <strong>ಬುಧವಾರ ನಡೆದ ಗಲಾಟೆ ಸಂಬಂಧ ಧರ್ಮಸ್ಥಳ, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ</strong>. ಧರ್ಮಸ್ಥಳ ಠಾಣೆ, ಉಜಿರೆ ಆಸ್ಪತ್ರೆ ಎದುರು ಜನ ಜಮಾವಣೆ ಆದ ಬಗ್ಗೆಯೂ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದ..ಕ‌ ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.</p><img><p>ಉಜಿರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. <strong>ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಜಯಂತ್ ಟಿ</strong> ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬುಧವಾರ ರಾತ್ರಿ ಉಜಿರೆಯ ಬೆನಕ ಆಸ್ಪತ್ರೆ ಆವರಣದಲ್ಲಿ ವರದಿಗೆ ತೆರಳಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾತ್ತು.</p><img><p>ಧರ್ಮಸ್ಥಳದಲ್ಲಿ ನಾಲ್ವರು ಯೂ ಟ್ಯೂಬರ್ಸ್ ಮೇಲೆ ನಡೆದಿದ್ದ ಹಲ್ಲೆ ವಿಚಾರದಲ್ಲಿ ವರದಿಗಾಗಿ ಆಸ್ಪತ್ರೆ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ತೆರಳಿತ್ತು. ಈ ವೇಳೆ ಸುವರ್ಣ ನ್ಯೂಸ್ <strong>ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಪೂಜಾರಿ ಹಲ್ಲೆ</strong> ನಡೆಸಲಾಗಿತ್ತು. ಈ ಸಂಬಂಧ ವರದಿಗಾರ ಹರೀಶ್ ದೂರು ನೀಡಿದ್ದರು. ಬಿಎನ್ಎಸ್ 115(2), 189(2), 191(2), 351(2), 352, 190 ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ.</p>



Source link

Leave a Reply

Your email address will not be published. Required fields are marked *