ಭಾರತ ತಂಡದಿಂದ ಹೊರಬೀಳಲು ಈ ಕ್ರಿಕೆಟಿಗನೇ ಕಾರಣ ಎಂದ ಇರ್ಫಾನ್ ಪಠಾಣ್!

ಭಾರತ ತಂಡದಿಂದ ಹೊರಬೀಳಲು ಈ ಕ್ರಿಕೆಟಿಗನೇ ಕಾರಣ ಎಂದ ಇರ್ಫಾನ್ ಪಠಾಣ್!



ಭಾರತ ತಂಡದಿಂದ ಹೊರಬೀಳಲು ಈ ಕ್ರಿಕೆಟಿಗನೇ ಕಾರಣ ಎಂದ ಇರ್ಫಾನ್ ಪಠಾಣ್!
<p>ಟೀಂ ಇಂಡಿಯಾ ಪ್ರತಿಭಾನ್ವಿತ ಆಲ್ರೌಂಡರ್ ಇರ್ಫಾನ್ ಪಠಾಣ್, 2009ರಲ್ಲಿ ಭಾರತ ತಂಡದಿಂದ ಹೊರಬೀಳಲು ಈ ಕ್ರಿಕೆಟಿಗ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.</p><img><p>ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಮಾಜಿ ನಾಯಕ ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 2009ರ ನ್ಯೂಜಿಲೆಂಡ್ ಪ್ರವಾಸದ ತಂಡದಿಂದ ತೆಗೆಯಲು ಧೋನಿ ಕಾರಣ ಅಂತ ಹೇಳಿದ್ದಾರೆ. ಲಲ್ಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಗ್ಯಾರಿ ಕರ್ಸ್ಟನ್‌ ಜೊತೆ ಮಾತನಾಡಿದಾಗ ಈ ವಿಷಯ ಗೊತ್ತಾಗಿದೆ ಅಂತ ಹೇಳಿದ್ದಾರೆ.</p><img><p>ಅದ್ಭುತ ಆಟಗಾರ ಇರ್ಫಾನ್ ಪಠಾಣ್ 2008ರಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದರು. ಅದೇ ವರ್ಷ ಏಕದಿನ ತಂಡದಲ್ಲೂ ಸ್ಥಾನ ಕಳೆದುಕೊಂಡರು. 2012ರಲ್ಲಿ ಮತ್ತೆ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರಾದರೂ 12 ಪಂದ್ಯಗಳನ್ನಷ್ಟೇ ಆಡಿದರು. ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ನಂತರ ಇರ್ಫಾನ್ ಪಠಾಣ್‌ಗೆ ಅವಕಾಶ ಸಿಗಲಿಲ್ಲ. ಹೀಗಾಗಿ 2020ರಲ್ಲಿ ನಿವೃತ್ತಿ ಘೋಷಿಸಿದರು.</p><img><p>2009ರ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ 60 ರನ್ ಗಳಿಸಿ, ಅಣ್ಣ ಯೂಸುಫ್ ಪಠಾಣ್ ಜೊತೆ ಸೇರಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದನ್ನ ಇರ್ಫಾನ್ ನೆನಪಿಸಿಕೊಂಡರು. "ಆಗ ನನ್ನ ಜಾಗದಲ್ಲಿ ಯಾರಾದ್ರೂ ಇದ್ರೂ ಒಂದು ವರ್ಷ ತಂಡದಲ್ಲಿ ಇರ್ತಿದ್ರು. ಆದ್ರೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಒಂದು ಪಂದ್ಯವನ್ನೂ ಆಡ್ಲಿಲ್ಲ" ಅಂತ ಹೇಳಿದರು.</p><img><p>"ಏಕೆ ಅವಕಾಶ ಕೊಡ್ಲಿಲ್ಲ ಅಂತ ಗ್ಯಾರಿ ಕರ್ಸ್ಟನ್‌ ಅವರನ್ನ ಕೇಳಿದೆ. ಮೊದಲು ‘ಕೆಲವು ವಿಷಯಗಳು ನನ್ನ ಕೈಯಲ್ಲಿ ಇಲ್ಲ’ ಅಂದ್ರು. ಯಾರ ಕೈಯಲ್ಲಿ ಇದೆ ಅಂತ ಕೇಳಿದ್ರೆ ಉತ್ತರ ಕೊಡ್ಲಿಲ್ಲ. ಆದ್ರೆ ನನಗೆ ಗೊತ್ತು, ಅದು ಧೋನಿ ಕೈಯಲ್ಲಿತ್ತು. ಆಟಗಾರರ ಆಯ್ಕೆ ನಾಯಕನ ಕೈಯಲ್ಲಿ ಇರುತ್ತೆ. ಅದು ನಾಯಕನ ಅಧಿಕಾರ" ಅಂತ ಇರ್ಫಾನ್ ಹೇಳಿದ್ದಾರೆ.</p><img><p>ಗ್ಯಾರಿ ಕರ್ಸ್ಟನ್‌ ಹೇಳಿದ ಎರಡನೇ ಕಾರಣ – ಆಗ ತಂಡಕ್ಕೆ ಬ್ಯಾಟಿಂಗ್ ಆಲ್ರೌಂಡರ್ ಬೇಕಿತ್ತು. "ಯೂಸುಫ್ ಬ್ಯಾಟಿಂಗ್ ಆಲ್ರೌಂಡರ್, ನಾನು ಬೌಲಿಂಗ್ ಆಲ್ರೌಂಡರ್. ಈಗಿನ ಕಾಲದಲ್ಲಿ ಎರಡೂ ರೀತಿಯ ಆಲ್ರೌಂಡರ್‌ಗಳನ್ನ ತಂಡದಲ್ಲಿ ಇಡ್ತಾರೆ" ಅಂತ ಇರ್ಫಾನ್ ಹೇಳಿದರು. ಧೋನಿ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಅಂತಲೂ ಸ್ಪಷ್ಟಪಡಿಸಿದ್ದಾರೆ</p>



Source link

Leave a Reply

Your email address will not be published. Required fields are marked *