
<p>ಲಂಡನ್: ಶುಭ್ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಅನುಭವಿ ಆಟಗಾರರಿಲ್ಲದೇ ಯುವ ಆಟಗಾರರನ್ನೊಳಗೊಂಡ ತಂಡವು 2-2ರ ಸಮಬಲದೊಂದಿಗೆ ಸರಣಿ ಮುಗಿಸಿದೆ. ಈ ಕುರಿತಂತೆ ಕೆ ಎಲ್ ರಾಹುಲ್ ಮನಬಿಚ್ಚಿ ಮಾತಾನಾಡಿದ್ದಾರೆ.</p><p> </p><img><p>ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ನಿವೃತ್ತಿಯಾದಾಗ ಅದನ್ನು ಅರಗಿಸಿಕೊಳ್ಳಲು ನನಗೆ 2 ವಾರ ಬೇಕಾಗಿತ್ತು ಎಂದು ಭಾರತದ ತಾರಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ.</p><img><p>ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅನುಭವಿ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ವಿದಾಯ ಘೋಷಿಸಿದ್ದರು.</p><img><p>ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಕೆಲವೇ ದಿನಗಳ ಮೊದಲ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡಾ ಅಚ್ಚರಿಯ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.</p><img><p>ಹೀಗಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶುಭ್ಮನ್ ಗಿಲ್ಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು.</p><img><p>5ನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಅವರು, ‘ನಾನು ಸುಮಾರು ವರ್ಷದಿಂದ ಕ್ರಿಕೆಟ್ ಆಡುತ್ತಿದ್ದೇನೆ. ಭಾರತ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಗೆದ್ದಿದೆ. ಈ ಸರಣಿಯನ್ನು ಅದಕ್ಕೆ ಹೋಲಿಕೆ ಮಾಡಲು ಆಗದಿದ್ದರೂ, ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲಿ ಒಂದು ಶ್ರೇಷ್ಠ ಸರಣಿಯಾಗಿ ಉಳಿದುಕೊಳ್ಳಲಿದೆ. ಟೆಸ್ಟ್ ಕ್ರಿಕೆಟ್ ಮೌಲ್ಯ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೂ ಈ ಸರಣಿ ಉತ್ತರ’ ಎಂದರು.</p><img><p>ರೋಹಿತ್, ಕೊಹ್ಲಿ, ಅಶ್ವಿನ್ರಂತಹ ಹಿರಿಯ ಆಟಗಾರರಿಲ್ಲದೇ ಎಲ್ಲರೂ ನನ್ನ ಬಳಿ ಬಂದು ಕೇಳುವಾಗ ನನ್ನ ಜವಾಬ್ದಾರಿ ಏನೆಂಬುದು ಗೊತ್ತಾಯಿತು. ಅದರಿಂದಲೇ ಸರಣಿಯಲ್ಲಿ ಉತ್ತಮ ಆಟವಾಡಲು ಸಾಧ್ಯವಾಯಿತು ಎಂದು ರಾಹುಲ್ ಹೇಳಿದ್ದಾರೆ.</p><img><p>ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೆ ಎಲ್ ರಾಹುಲ್ ತಲಾ ಎರಡು ಶತಕ ಹಾಗೂ ಎರಡು ಅರ್ಧಶತಕ ಸಹಿತ 53.20 ಬ್ಯಾಟಿಂಗ್ ಸರಾಸರಿಯಲ್ಲಿ 532 ರನ್ ಸಿಡಿಸಿದ್ದರು.</p>
Source link
ಕೊಹ್ಲಿ, ರೋಹಿತ್, ಅಶ್ವಿನ್ ಆಡದ್ದನ್ನು ಅರಗಿಸಿಕೊಳ್ಳಲು 2 ವಾರ ಬೇಕಾಯ್ತು; ಕೆ ಎಲ್ ರಾಹುಲ್ ಹೀಗಂದಿದ್ದೇಕೆ?