Headlines

ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?

ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?



ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?
<p>ಸಾರಿಗೆ ನೌಕರರ ಮುಷ್ಕರದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿ ‘ಶಕ್ತಿ’ ಯೋಜನೆಯಡಿ ಸರ್ಕಾರಕ್ಕೆ. ಉಳಿತಾಯವಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು.</p><img><p>ಮಂಗಳವಾರ ಸಾರಿಗೆ ನೌಕರರ ಮುಷ್ಕರದಿಂದ ಬಸ್ ನಿಂತರೂ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ಹಣ ಉಳಿತಾಯವಾಗಿದೆ. ಮಂಗಳವಾರ ನೌಕರರ ಮುಷ್ಕರದ ಹಿನ್ನೆಲೆ ರಾಜ್ಯದಲ್ಲಿ ಶೇ. 60ಕ್ಕೂ ಹೆಚ್ಚು ಸಾರಿಗೆ ಬಸ್ ಓಡಾಟ ಬಂದ್ ಆಗಿತ್ತು.</p><img><p>ಶೇ.60 ಬಸ್ ಓಡಾಟ ಬಂದ್ ಆಗಿದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ರಾಜ್ಯದ ಮಹಿಳೆಯರು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಾರೆ. ನಾಲ್ಕು ನಿಗಮಗಳಿಂದ ನಿತ್ಯ ಸರಾಸರಿ 1.20 ಕೋಟಿ ಜನ ಪ್ರಯಾಣ ಮಾಡ್ತಾರೆ. ಇದರಲ್ಲಿ ನಿತ್ಯ 73 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ.</p><img><p>ಮಹಿಳಾ ಪ್ರಯಾಣಿಕರ ಟಿಕೆಟ್ ಹಣವನ್ನು ರಾಜ್ಯ ಸರ್ಕಾರವೇ ಪಾವತಿಸುತ್ತದೆ. ಮಂಗಳವಾರ ಒಂದು ದಿನದ ಮುಷ್ಕರದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಉಳಿತಾಯವಾಗಿದೆ. ನಿನ್ನೆ ಒಂದೇ ದಿನ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.</p><img><p>ಮಂಗಳವಾರ "ಶಕ್ತಿ" ಇಲ್ಲದ ಕಾರಣ ರಾಜ್ಯ ಸರ್ಕಾರಕ್ಕೆ 16 ಕೋಟಿ ಉಳಿತಾಯವಾಗಿದೆ. ಬಿಎಂಟಿಸಿ ಹೊರತು ಪಡಿಸಿ ಮೂರು ನಿಗಮಗಳಲ್ಲಿ ಶೇ. 60 ಮಹಿಳೆ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿತ್ತು. ನಿತ್ಯ ಮಹಿಳಾ ಪ್ರಯಾಣಿಕರ ಓಡಾಟದ ಖರ್ಚು 23 ಕೋಟಿ ರೂಪಾಯಿ ಆಗಿರುತ್ತದೆ.</p><img><p>ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ನಡೆದ ಸಾರಿಗೆ ನೌಕರರ ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾದರೆ, ಇನ್ನು ಕೆಲವರು ಗೌರಾಗಿದ್ದರು.</p>



Source link

Leave a Reply

Your email address will not be published. Required fields are marked *