ಯಾರೂ ಕೆಮ್ಮಂಗಿಲ್ಲ: ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಮೇಲೆ ಭೀಕರ ಹಲ್ಲೆ, ಚಿಕಿತ್ಸೆ ಫಲಿಸದೇ ಸಾವು! | Ramanagara Shocking Murder Rajasthan Youth Death For Coughing Loudly
ರಾಮನಗರದ ವಾಜರಹಳ್ಳಿಯಲ್ಲಿ ಜೋರಾಗಿ ಕೆಮ್ಮಿದ್ದಕ್ಕೆ ನೆರೆಮನೆಯವರಿಂದ ಹಲ್ಲೆಗೊಳಗಾದ ರಾಜಸ್ಥಾನ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಫಲಿಸದೆ ವಿನೋದ್ ಕುಮಾರ್ ಜೈನ್ ಮೃತಪಟ್ಟಿದ್ದು, ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬ ತಲೆಮರೆಸಿಕೊಂಡಿದೆ. ರಾಮನಗರ (ಫೆ.11): ಸಣ್ಣ ವಿಚಾರಕ್ಕೆ ಮನುಷ್ಯ ಎಷ್ಟು ವಿಕೃತನಾಗಬಲ್ಲ ಎಂಬುದಕ್ಕೆ ರಾಮನಗರದಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಜೋರಾಗಿ ಕೆಮ್ಮಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ನೆರೆಮನೆ ವ್ಯಕ್ತಿ ನಡೆಸಿದ ಮನಸೋ ಇಚ್ಛೆ ಹಲ್ಲೆಯಿಂದಾಗಿ ರಾಜಸ್ಥಾನ ಮೂಲದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ವಾಜರಹಳ್ಳಿಯಲ್ಲಿ ಕೆಮ್ಮಿನ ವಿಚಾರಕ್ಕೆ…