ನಮ್ಮ ಮೆಟ್ರೋ : ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್ಸಿಎಲ್ಗೆ ಡೆಡ್ಲೈನ್
ಬೆಂಗಳೂರು, (ಫೆಬ್ರವರಿ 09): ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಇಂದು (ಫೆಬ್ರವರಿ 09) ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮೆಟ್ರೋ ದರ ಏರಿಕೆ ಮಾಡಿ ಪ್ರಾಯಾಣಿಕರ ಹೊರೆಯನ್ನ ಹೆಚ್ಚು ಮಾಡಿ ಕನ್ನಡಿಗರನ್ನ ಕೆರಳುವಂತೆ ಮಾಡಿದೆ. ಈ ಕೂಡಲೇ ಮೆಟ್ರೋ ದರವನ್ನು ಹಿಂಪಡೆಯಬೇಕು,ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಬಳಸಬೇಕು. ಇಲ್ಲವಾದರೆ ನಾವು ಬೀದಿಗೆ ಇಳಿಯುತ್ತೇವೆ. ಮಾರ್ಚ್ 7ರವರೆಗೆ ನಿಮ್ಗೆ ಅವಕಾಶ…