ಜೀರಿಗೆ ಖರೀದಿಸಿದಾತನಿಗೆ ಆನ್ಲೈನ್ ವಂಚನೆ: ₹24,000 ಕಳೆದುಕೊಂಡ ಉಡುಪಿ ವ್ಯಕ್ತಿ! | Udupi Man Loses Rs 24k After Ordering Jeera Pulses In Online Gow
ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿ ₹24,000 ಕಳೆದುಕೊಂಡಿದ್ದಾರೆ. ಮುಂಗಡ ಪಾವತಿ ಮಾಡಿದ ನಂತರ, ಆರೋಪಿಯು ಸರಕುಗಳನ್ನು ಕಳುಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿಯಾಗಿರುವ 53 ವರ್ಷದ ನಾರಾಯಣ ಎಂಬವರು, ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಆನ್ಲೈನ್ ವಂಚನೆಗೆ ಬಲಿಯಾಗಿದ್ದಾರೆ. ನಾರಾಯಣ ಅವರು ತಮ್ಮ ಮನೆ ಬಳಿಯೇ ಜೀರಿಗೆ, ಕಡಲೆ ಮತ್ತು ಉದ್ದಿನ ಬೇಳೆಯಂತಹ ಸಾಮಗ್ರಿಗಳನ್ನು…