ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?
ತುಮಕೂರು, ಜೂನ್ 24: ಬದುಕಿ ಬಾಳಬೇಕಿದ್ದ 22ರ ಯುವತಿ ಚೈತನ್ಯ ನಿನ್ನೆ ರಾತ್ರಿ ತುಮಕೂರಿನ ಹೊಸಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಸಂಬಂಧಿಯೊಬ್ಬರು (relative of deceased) ಹೇಳುವ ಪ್ರಕಾರ ಚೈತನ್ಯ ಮಾಡೆಲಿಂಗ್ ನಲ್ಲಿ ಬಹಳ ಅಭಿರುಚಿಯಿಟ್ಟುಕೊಂಡಿದ್ದಳು ಮತ್ತು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಚೈತನ್ಯ ನಿನ್ನೆ ರಾತ್ರಿ ತನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಸೀರೆಯೊಂದರಿಂದ ಕಿಟಿಕಿಯ ಸರಳುಗಳಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಪದವಿಯ ಕೊನೆ ವರ್ಷದಲ್ಲಿ ಓದುತ್ತಿದ್ದ ಚೈತನ್ಯ…