ಜನಾಕ್ರೋಶ ಬೆನ್ನಲ್ಲೇ ಉಲ್ಟಾ ಹೊಡೆದ ಪರಮೇಶ್ವರ್: ತುಮಕೂರು ಹೆಸರು ಬದಲಾವಣೆ ಬಗ್ಗೆ ಹೇಳಿದ್ದಿಷ್ಟು..!
ತುಮಕೂರು, ಜೂನ್ 22: ರಾಮನಗರ (Ramnagar) ಜಿಲ್ಲೆಗೆ ಬೆಂಗಳೂರು ದಕ್ಷಿಣ (Bengaluru South) ಅಂತ ಮರುನಾಮಕರಣ ಮಾಡುತ್ತಿದ್ದಂತೆ ತುಮಕೂರಿನ (Tumakuru) ಹೆಸರು ಮುನ್ನೆಲೆಗೆ ಬಂದಿತ್ತು. ತಮಕೂರಿಗೆ ಬೆಂಗಳೂರು ಉತ್ತರ (Bengaluru North) ಅಂತ ಮರುನಾಮಕರಣ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಅಂತಿಮವಾಗಿ ಈ ಚರ್ಚೆಗೆ ತೆರೆ ಬಿದಿದ್ದು, ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ (G Parameshwara) ತುಮಕೂರಿನ ಹೆಸರು…