ಹಾವೇರಿ ಬ್ಯಾನರ್ ತೆರವು ಗಲಾಟೆ: ನಗರಸಭೆ ಸಿಬ್ಬಂದಿ ರಂಗಪ್ಪ ಹರೆಕಲ್ಲ ಸಾವಿನಲ್ಲಿ ಅಂತ್ಯ! | Haveri Banner Row Ends In Tragedy Municipality Staff Rangappa Dies After Alleged Abuse Sat
ಹಾವೇರಿಯಲ್ಲಿ ಬರ್ತಡೇ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ನಗರಸಭೆ ಸಿಬ್ಬಂದಿ ರಂಗಪ್ಪ ಹೆರಕಲ್, ಅವಮಾನಕ್ಕೊಳಗಾಗಿ ವಿಷ ಸೇವಿಸಿ ಸಾವಿಗೆ ಯತ್ನಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾವೇರಿ (ಜೂ.24): ಹಾವೇರಿ ನಗರಸಭೆಯಲ್ಲಿ ಬರ್ತಡೇ ಬ್ಯಾನರ್ ತೆರವಿಗೆ ನಡೆದ ಗಲಾಟೆಯಲ್ಲಿ ನಿಂದನೆಯಿಂದ ಖಿನ್ನಗೊಂಡು ರಂಗಪ್ಪ ಹೆರಕಲ್ಲ ವಿಷ ಸೇವಿಸಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ. ಬರ್ತಡೇ ಬ್ಯಾನರ್ ತೆರವು ಗಲಾಟೆ ಪ್ರಕರಣ…