
<p>ಆರ್ಸಿಬಿ ವಿಜಯೋತ್ಸವದ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಯಾವುದೇ ಅನುಮತಿ ನೀಡಿಲ್ಲ, ಅನುಮತಿ ನೀಡದೇ ಇರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಲೋಕೋಪಯೋಗಿ ಇಲಾಖೆ ಉತ್ತರವನ್ನು ನೀಡಿದೆ.</p><img><p><strong>ಬೆಂಗಳೂರು (ಜು.18): </strong>ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧಪಟ್ಟಂತೆ ಒಂದು ಕಡೆ ಸಚಿವ ಸಂಪುಟ ಸಭೆಗೆ ನ್ಯಾ. ಮೈಕಲ್ ಡಿ ಕುನ್ಹಾ ವಿಚಾರಣ ಆಯೋಗದ ವರದಿ ಸಲ್ಲಿಕೆಯಾಗಿದ್ದು, ಇತ್ತ ಚಿನ್ನಸ್ವಾಮಿ ಸ್ಟೇಡಿಯಂನ ಮತ್ತೊಂದು ಶಾಕಿಂಗ್ ವಿಷಯ ಬಯಲಾಗಿದೆ.</p><img><p>ಹೌದು! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಆಚರಿಸಲು ಅನುಮತಿಯೇ ಪಡೆದಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಜೊತೆ ಕೆಎಸ್ಸಿಎ ಕರಾರು ಒಪ್ಪಂದ ಇದೆ. ಕರಾರು ಒಪ್ಪಂದದಂತೆ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ.</p><img><p>ಆದರೆ ಆರ್ಸಿಬಿ ವಿಜಯೋತ್ಸವದ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಯಾವುದೇ ಅನುಮತಿ ನೀಡಿಲ್ಲ, ಅನುಮತಿ ನೀಡದೇ ಇರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಲೋಕೋಪಯೋಗಿ ಇಲಾಖೆ ಉತ್ತರವನ್ನು ನೀಡಿದೆ.</p><img><p>ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಸಲ್ಲಿಸಿದ್ದ, ಆರ್ಟಿಐ ಅರ್ಜಿಗೆ ಲೋಕೋಪಯೋಗಿ ಇಲಾಖೆಯು ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಉತ್ತರ ನೀಡಿದೆ.</p><img><p>ಲೋಕೋಪಯೋಗಿ ಇಲಾಖೆಯ ಅನುಮತಿಯನ್ನೇ ಪಡೆಯದ ಕೆಎಸ್ಸಿಎಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿಗೆ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸೋಕೆ ಅನುಮತಿ ನೀಡಿದ್ದು ಯಾರು..? ಅನುಮತಿ ಇಲ್ಲದೆ ನಡೆದ ಕಾರ್ಯಕ್ರಮದಿಂದಾಗಿ 11 ಜನರ ಸಾವಾಗಿದೆ.</p><img><p>ಇನ್ನು ನಿಯಮಗಳನ್ನು ಉಲ್ಲಂಘಿಸಿ ಸ್ಟೇಡಿಯಂ ನಲ್ಲಿ ಸೆಲೆಬ್ರೇಶನ್ ಮಾಡಿದ್ದ ಕೆಎಸ್ಸಿಎ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ..? ಒಪ್ಪಂದವನ್ನು ಮೀರಿ ನಡೆದುಕೊಂಡಿರುವ ಕೆಎಸ್ಸಿಎ ವಿರುದ್ಧ ಲೋಕೋಪಯೋಗಿ ಇಲಾಖೆ ಕ್ರಮಕ್ಕೆ ಮುಂದಾಗುತ್ತಾ..? ಎಂದು ಕಾದು ನೋಡಬೇಕಿದೆ.</p>
Source link
ಅನುಮತಿ ಇಲ್ಲದೇ ನಡೆದ ಆರ್ಸಿಬಿ ವಿಜಯೋತ್ಸವ: ಆರ್ಟಿಐ ಉತ್ತರದಿಂದ ಹೊಸ ವಿವಾದ!