
<p>ಕಾಂತಾರಾ ಚಾಪ್ಟರ್ 1ರಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ ಎನ್ನೋದು ತಿಳಿದ ಮೇಲೆ ಸೋಶಿಯಲ್ ಮೀಡೀಯಾದಲ್ಲಿ ನಟಿಯ ಬಗ್ಗೆ ಸಿಕ್ಕಾಪಟ್ಟೆ ಪಾಸಿಟಿವ್ ಕಾಮೆಂಟ್ ಗಳು ಬರುತ್ತಿವೆ.</p><p> </p><img><p><strong>ಸಪ್ತಸಾಗರದಾಚೆ </strong>ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರುಕ್ಮಿಣಿ ವಸಂತ್. ತಮ್ಮ ಮುದ್ದಾದ ನಟನೆಯ ಜೊತೆಗೆ ತಮ್ಮ ಅಂದದಿಂದ ಕನ್ನಡ ಸಿನಿರಸಿಕರನ್ನು ಗೆದ್ದಿದ್ದರು. ಇದೀಗ ಕಾಂತಾರ ಚಾಪ್ಟರ್ 1 ಮೂಲಕ ಸದ್ದು ಮಾಡುತ್ತಿದ್ದಾರೆ.</p><img><p><strong>ರಿಷಭ್ ಶೆಟ್ಟಿ</strong> ನಟಿಸಿ, ನಿರ್ದೇಶನ ಮಾಡುತ್ತಿರುವ <strong>ಕಾಂತಾರಾ ಚಾಪ್ಟರ್ 1</strong> ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.</p><img><p>ಕಲಾವತಿಯಾಗಿ <strong>ರುಕ್ಮಿಣಿ ವಸಂತ್ </strong>ನಟಿಸುತ್ತಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರನ್ನ ನೋಡಿ ಜನ ಭೂಲೋಕದ ಅಪ್ಸರೆ, ನಮ್ಮ ಪುಟ್ಟಿ ಸುಂದರಿ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಪುಟ್ಟಿ ಇದ್ರೆ ಸಿನಿಮಾ ಸೂಪರ್ ಹಿಟ್ ಎನ್ನುತ್ತಿದ್ದಾರೆ.</p><img><p>ಅಂದ ಹಾಗೆ ರುಕ್ಮಿಣಿ ವಸಂತ್ ಬಿರ್ ಬಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಸಪ್ತಸಾಗರದಾಚೆ ಎಲ್ಲೋ ಪಾರ್ಟ್ 1 ಮತ್ತು 2 ಸಿನಿಮಾದಲ್ಲಿ ನಟಿಸುವ ಮೂಲಕ ಜನಮನ ಗೆದ್ದರು. ಈ ಸಿನಿಮಾದಲ್ಲಿ <strong>ರಕ್ಷಿತ್ ಶೆಟ್ಟಿ</strong> ನಾಯಕನಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಿತ್ತು.</p><img><p>ಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಎಷ್ಟೊಂದು ಜನಪ್ರಿಯತೆ ಗಳಿಸಿದರು ಅಂದ್ರೆ, ಬಳಿಕ ಸಾಲು ಸಾಲು ಸಿನಿಮಾ ಆಫರ್ ಗಳು ಹುಡುಕಿ ಬಂದಿದ್ದವು. ನಂತರ ನಟಿಸಿದ ಎಲ್ಲಾ ಸಿನಿಮಾಗಳು ಸಹ ಯಶಸ್ಸು ಗಳಿಸಿದ್ದವು. ಹಾಗಾಗಿ ರುಕ್ಮಿಣಿಯವರನ್ನು ಲಕ್ಕಿ ನಾಯಕಿ ಎನ್ನುತ್ತಿದ್ದಾರೆ.</p><img><p>ಸಪ್ತಸಾಗರದಾಚೆ ಬಳಿಕ ಬಘೀರ ಹಾಗೂ <strong>ಭೈರತಿ ರಣಗಲ್ </strong>ಸಿನಿಮಾದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಸಹ ಹಿಟ್ ಆಗಿದ್ದವು. ಹಾಗಾಗಿ ಇದೀಗ ಮತ್ತೆ ಹೊಸ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸಿರೋದರಿಂದ ಮತ್ತೆ ಸಿನಿಮಾ ಬಗ್ಗೆ ಭರವಸೆ ಹೆಚ್ಚಿದೆ.</p><img><p>ಆದರೆ ಚಂದನವನದ ದುರಂತ ನಾಯಕಿ ಎಂದೇ ಜನಪ್ರಿಯತೆ ಪಡೆದಿರುವ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲೂ ನಾಯಕನಿಗೆ ಸಿಗುತ್ತಾರೋ ಅನ್ನೋದನ್ನು ಕಾದು ನೋಡಬೇಕು.. ಇದೇ ಅಕ್ಟೋಬರ್ 25 ರಂದು ಕಾಂತಾರಾ ಚಾಪ್ಟರ್ 1 ಬಿಡುಗಡೆಯಾಗಲಿದೆ.</p>
Source link
ರುಕ್ಮಿಣಿ ವಸಂತ್ ಇದ್ರೆ ಸಿನಿಮಾ ಬ್ಲಾಕ್ ಬಸ್ಟರ್ ! ಕಾಂತಾರ 1000 ಕೋಟಿ ಗ್ಯಾರಂಟಿ !