ಧರ್ಮಸ್ಥಳದಲ್ಲಿ ಇಂದು 5ನೇ ದಿನವೂ ಶೋಧ ಮುಂದುವರೆಯಲಿದೆ. ಇದುವರೆಗೆ 8 ಸ್ಥಳಗಳಲ್ಲಿ ಹೊಂಡ ಅಗೆಯಲಾಗಿದ್ದು, ಕೇವಲ 1 ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. ಸಿಕ್ಕ ಅಸ್ತಿಪಂಜರದ ವೈಜ್ಞಾನಿಕ ವಿಶ್ಲೇಷಣೆಯೇ ಈಗ ಸವಾಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಅಲ್ಲಿನ ಫೋರೆನ್ಸಿಕ್ ವರದಿ ಮೇಲೆ ಎಸ್ಐಟಿ ತನಿಖೆ ನಿಂತಿದೆ. ಮೊದಲಿಗೆ ಹೇಗೆ ಸಾವು ಸಂಭವಿಸಿತು ಎಂದು FSL ತನಿಖೆ ನಡೆಯಲಿದೆ. ಇದು ಸಹಜ ಸಾವೋ? ಕೊಲೆಯೋ? ವ್ಯಕ್ತಿಯ ಎತ್ತರ.. ವ್ಯಕ್ತಿಯ ತೂಕ.. ವಯಸ್ಸು ಪತ್ತೆ ಮಾಡಲಿದ್ದಾರೆ. ಇದಕ್ಕಾಗಿ ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ ಈ ಮೂಲಕ ಅಸ್ಥಿ ಪಂಜರದ ಅವಧಿ ಪತ್ತೆ ಹಚ್ಚೋ ಸಾಧ್ಯತೆ ಇದೆ ಹಗೂ ವ್ಯಕ್ತಿಯ ಗುರುತು ಪತ್ತೆಗೆ FSLನಿಂದ ಮೂಳೆಯ ಡಿಎನ್ಎ ಪರೀಕ್ಷೆ ನಡೆಯಲಿದ್ದು, 15 ದಿನಗಳಲ್ಲಿ FSLನಿಂದ ಮಧ್ಯಂತರ ವರದಿ ನೀಡುವ ಸಾಧ್ಯತೆ ಇದೆ.
ಅಂತಿಮ ವರದಿಗೆ 45-60 ದಿನಗಳು ತೆಗೆದುಕೊಳ್ಳೋ ಸಾಧ್ಯತೆ ಇದ್ದು, FSL ವರದಿ ಆಧರಿಸಿ ಎಸ್ಐಟಿ ತನಿಖೆ ಮುಂದುವರೆಸಲಿದೆ.