ಕ್ರೀಡೆ ಯುವಕರ ಜೀವನೋತ್ಸಾಹ ದ್ವಿಗುಣಗೊಳಿಸುವಲ್ಲಿ ಸಹಕಾರಿ.

ಶಿರಾ : ಕ್ರೀಡೆ ಯುವಕರ ಜೀವನೋತ್ಸಾಹ ದ್ವಿ ಗುಣಗೊಳಿಸುವಲ್ಲಿ ಸಹಕಾರಿಯಾಗಲಿದ್ದು, ಇಂತಹ ಕ್ರಿಕೆಟ್ ಟೂರ್ನಿಮೆಂಟ್ ಗಳು ಯುವಕರಲ್ಲಿ ಪರಸ್ಪರ ಸ್ನೇಹ-ಬಾಂಧವ್ಯ ಗಟ್ಟಿಗೊಳಿಸಿ ಒಗ್ಗೂಡಿಸುವಂತಹ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದುಸಮಾಜಸೇವಕ, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಜಿ.ರಂಗನಹಳ್ಳಿ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಕ್ರಿಕೆಟರ್ಸ್ ಹಾಗೂ ಶಿವು ಚಂಗಾವರ ಅಭಿಮಾನಿ ಬಳಗ ಅಯೋಜಿಸಿದ್ದ 2. ದಿನಗಳ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟಿಸಿ ಮಾತನಾಡಿದರು.ಕ್ರಿಕೆಟ್ ಜೊತೆಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳಾದ ಕಬ್ಬಡಿ,…

Read More

ಪುರಾಣ ಕಥೆಗಳಿಂದ…“ಶಿವ-ಪ್ರಿಯ” ವಿಷ್ಣುವಾದರೆ, “ವಿಷ್ಣು-ಪ್ರಿಯ” ಶಿವದೃಷ್ಟಿ ದೋಷವುಳ್ಳವರು ಬೇರೆ ಬೇರೆ ನೋಡುತ್ತಾರೆ.

ವೈಕುಂಠಪತಿ ನಾರಾಯಣ ಮತ್ತು ಲಕ್ಷ್ಮಿಗೂ ಯಾವುದೋ ಕಾರಣಕ್ಕೆ ಮಾತಾಗಿ ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆ ಎಂದು ಲಕ್ಷ್ಮಿ ಕೇಳಲಿಲ್ಲ. ಶಾಪದ ಪ್ರಭಾವದಿಂದ ಅವಳು ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರ ಬೇಕಾಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ…

Read More

ಬದುಕ ಯೋಗ್ಯ ಕನಿಷ್ಟ ವೇತನ ನಿಗಧಿಗೆ ಒತ್ತಾಯಿಸಿ – ಜುಲೈ 28ಸಿಐಟಿಯು ಪ್ರತಿಭಟನೆ..

ರಾಜ್ಯ ಸರ್ಕಾರವು ಕನಿಷ್ಟ ವೇತನ ಪಾವತಿ ಕಾಯಿದೆ- 1948 ಅಡಿಯಲ್ಲಿ ರಾಜ್ಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೆ ಕನಿಷ್ಟವೇತನದ ದರಗಳನ್ನು ನಿಗಧಿ ಪಡಿಸಿ ಹೋರಡಿಸಿರುವ ಕರಡು . ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 11.04.2025ಮತ್ತು 2. ಸೇರ್ಪಡೆ ಅಧಿಸೂಚನೆ ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 19.04.2025 ಅಧಿಸೂಚನೆಗಳು ವೈಜ್ಞಾನಿಕವಾಗಿಲ್ಲ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಹಾಗಾಗಿ ಇಂದಿನ ಬೆಲೆಗಳು ಹಾಗು ಜೀವನ ನಿರ್ವಹಣಾ ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಟ ವೇತನವನವನ್ನು ನಿಗಧಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯು ರಾಜ್ಯಾದ್ಯಂತ ಜುಲೈ-28…

Read More

ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆ..

ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆಯನ್ನು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಣೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ನಮ್ಮ…

Read More

ಶ್ರೀ ಮಾರಿಯಮ್ಮ ದೇವಿಯ 62 ನೇ ವರ್ಷದ ಜಾತ್ರಾ ಮಹೋತ್ಸವ

ತುಮಕೂರು ನಗರ ಮಂಡಿಪೇಟೆಯಲ್ಲಿರುವ ಶ್ರೀ ಮಾರಿಯಮ್ಮ ದೇವಿಯ 62 ನೇ ರ‍್ಷದ ಜಾತ್ರಾ ಮಹೋತ್ಸವನ್ನು ಜುಲೈ 29 ರಿಂದ 31 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಸ್ಲಂ ಸಮಿತಿ, ಮಾರಿಯಮ್ಮ ಯುವಕರ ಸಂಘ ಮತ್ತು ಯುವ ಭೀಮ ಪಡೆಯ ಪದಾಧಿಕಾರಿಗಳು ಹಾಗೂ ಮಾರಿಯಮ್ಮ ನಗರದ ಹಿರಿಯ ಮುಖಂಡರುಗಳು ತಿಳಿಸಿದ್ದಾರೆಇಂದು ಮಾರಿಯಮ್ಮ ನಗರದ ಸಂಘದ ಕಛೇರಿಯಲ್ಲಿ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಗಳನ್ನು ಸ್ಲಂ ಜನಾಂದೋಲನ ರ‍್ನಾಟಕ ರಾಜ್ಯ ಸಂಚಾಲಕರಾದ ಎ,ನರಸಿಂಹಮರ‍್ತಿ ಬಿಡುಗಡೆ ಗೊಳಿಸಿ ಮಾತನಾಡಿದರುತುಮಕೂರು ನಗರದಲ್ಲಿ ಶ್ರಮಿಕರೇ…

Read More

ವಿವಿಧ ಅಪಘಾತದಲ್ಲಿ ಗಾಯಗೊಂಡವರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ..

ತುಮಕೂರು: ವಿವಿಧ ಅವಘಡದಿಂದಾಗಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ವೈದ್ಯಕೀಯ ತಪಾಸಣೆಯನ್ನು ಸಿದ್ಧಗಂಗಾ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.ಎಪಿಡಿ ಹಾಗೂ ಅರೇಕಲ್ ಸಂಸ್ಥೆಯ ಸಹಯೋಗದಲ್ಲಿ‌ ನಡೆದ ಶಿಬಿರದಲ್ಲಿ 12 ಕ್ಕೂ ಹೆಚ್ಚು ರೋಗಿಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಾಯಿತು‌.ಎಸ್ ಎಂಸಿಆರ್ ಐ ನಿರ್ದೇಶಕ ಡಾ.ಎಸ್‌.ಪರಮೇಶ್ ಮಾತನಾಡಿ ಶಿಬಿರದಲ್ಲಿ ತಪಾಸಣೆಗೆ ಒಳಗಾದ ಅನೇಕ ರೋಗಿಗಳ ಬಾಳಿನಲ್ಲಿ ಮತ್ತೆ ಮಂದಹಾಸ ಮೂಡಿರುವುದು ಮರುಜೀವನ ನಡೆಸುವ ಶಕ್ತಿ ಬಂದಿರುವುದು ನಮ್ಮ ಸೇವೆಗೆ ಸಾರ್ಥಕಥೆ ತಂದಿದೆ ಎಂದರು. ವೈದ್ಯಕೀಯ ಮೇಲ್ವಿಚಾರಕ…

Read More

65 ಲಕ್ಷದ ರೈತರ ಕೃಷಿ ಪರಿಕರ ವಿತರಣೆ ಮಾಡಿದ ಹಾಲು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ

ಪಾವಗಡ: ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಾಲ್ಲೂಕು ಉಪಕಚೇರಿ ಆವರಣದಲ್ಲಿ ರೈತರಿಗೆ ಕೃಷಿ ಪರಿಕರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಕ್ಕೂಟದ ಜಿಲ್ಲಾ ನಿರ್ದೇಶಕರು ಬೆಳ್ಳಿಬಟ್ಲು ಚಂದ್ರಶೇಖರ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಒಟ್ಟು 65 ಲಕ್ಷ ರೂ. ಮೌಲ್ಯದ ವಿವಿಧ ಉಪಕರಣಗಳನ್ನು ರೈತ ಫಲಾನುಭವಿಗಳಿಗೆ ವಿತರಿಸಲಾಯಿತು.ಈ ಪೈಕಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಅನೇಕ ಸಹಾಯಧನಗಳನ್ನು ಒಳಗೊಂಡಿದ್ದು, 24 ಮಂದಿ ರೈತರಿಗೆ ರೈತ ಮರಣ ಪರಿಹಾರ, 100 ರಾಸುಗಳ ಮರಣ…

Read More

ಚಿ.ನಾ.ತಾಲ್ಲೂಕಿನ ಕೆರೆಗಳಿಗೆ ಹರಿದ ಹೇಮಾವತಿ ನೀರು: ಶಾಸಕ ಸುರೇಶ್ ಬಾಬು ಚಾಲನೆ

ಚಿಕ್ಕನಾಯಕನಹಳ್ಳಿ : ಸಾಸಲು, ಶೆಟ್ಟಿಕೆರೆ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹರಿಯುವ ಹೇಮಾವತಿ ಚಾನಲ್ ನೀರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಕೆ.ಬಿ.ಕ್ರಾಸ್ ಬಳಿ ಇರುವ ಗಡಬನಹಳ್ಳಿಯಲ್ಲಿ ತೂಬು ಎತ್ತುವ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲು ಚಾಲನೆ ನೀಡಿದರು. ನಮ್ಮ ಕೆಲಸದ ಬಗ್ಗೆ ನಿಂದಿಸುವವರು ಇರಬೇಕು, ಆಗಲೇ ನಮಗೆ ಮತ್ತಷ್ಟು ಕೆಲಸ ಮಾಡಲು ಪ್ರೋತ್ಸಾಹ, ಪ್ರೇರಣೆ ದೊರಕುವುದು.

Read More

ಗಡಿನಾಡಿಗೆ ಇಂದು ಸಿಎಂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕರ‍್ಪಣೆ: ಸಕಲ ಸಿದ್ಧತೆಗಳನ್ನ ಪರಿಶೀಲಿಸಿದ ಜಿಲ್ಲಾಡಳಿತ

ಸೂರ್ಯಪ್ರಗತಿ ನ್ಯೂಸ್,ಕಾಂ ಪಾವಗಡದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕರ‍್ಪಣೆ ಮಾಡಿ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು. ಇಂದು ಪಾವಗಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿ ಹಿನ್ನೆಲೆ ತುಮಕೂರು ಡಿಸಿ ಶುಭಾಕಲ್ಯಾಣಕ್, ಸಿಇಓ ಪ್ರಭು.ಜಿ ಹಾಗೂ ಎಸ್ ಪಿ ಕೆ.ವಿ.ಅಶೋಕ್ ಪಾವಗಡ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪಾವಗಡ ಜಿಲ್ಲೆಗೆ ಭೇಟಿ ನೀಡಿದ ಡಿಸಿ, ಎಸ್‌ಪಿ, ಸಿಇಓ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ಶಾಸಕರು ಹಾಗೂ ತುಮುಲ್…

Read More

ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಸಿ.ಬಿ.ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ : ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವ ಮಾತು ಎಂದಿಗೂ ಸತ್ಯ, ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಮಕ್ಕಳ ಭವಿಷ್ಯವನ್ನ ರೂಪಿಸುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಂಘದ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂಗಳ ಪುದುವಟ್ಟನ್ನು ಇಡಲು ದೇವಾಂಗ ಸಂಘದ ಮುಖಂಡರಿಗೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ…

Read More