Headlines

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!




<p>ಪವಿತ್ರವಾದ ಶ್ರಾವಣ ಮಾಸದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಇದು ಧಾರ್ಮಿಕ ಅಂತ ಅನಿಸಿದರೂ, ಇದರ ಹಿಂದೆ ಇರುವ ವಿಜ್ಞಾನವನ್ನು ನೀವು ಅರ್ಥ ಮಾಡಿಕೊಳ್ಳಬೇಕು.</p><p>&nbsp;</p><img><p>ಬಹುತೇಕ ಎಲ್ಲಾ ಶಿವನ ಭಕ್ತರು ಶ್ರಾವಣ ಮಾಸಕ್ಕಾಗಿ (Shravana Mas)ಕಾಯುತ್ತಾರೆ. ಶೀಘ್ರದಲ್ಲೇ ಶ್ರಾವಣ ಮಾಸ ಬರಲಿದೆ. ಉತ್ತರ ಭಾರತೀಯರ ಪ್ರಕಾರ ಈ ವರ್ಷ ಜುಲೈ 11 ರಿಂದ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಜುಲೈ 25 ರಿಂದ ಶ್ರಾವಣ ಮಾಸ ಆರಂಭ. ಈ ತಿಂಗಳಲ್ಲಿ ಕೆಲವು ವಿಷಯಗಳು ನಿಷಿದ್ಧ ಎಂದು ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬೇಕು. ಅದಕ್ಕೆ ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ.</p><img><p><strong>ಕೆಲವು ವಿಷಯಗಳನ್ನು ತಪ್ಪಿಸಬೇಕು</strong></p><p>ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಜನ ತಮ್ಮ ಜೀವನಶೈಲಿಯನ್ನು (lifestyle) ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಮ್ಮಲ್ಲಿ ತಡವಾಗಿ ಶ್ರಾವಣ ಶುರುವಾದರೂ, ಎರಡೂ ಉತ್ತರ-ದಕ್ಷಿಣ ಭಾರತದ ಆಚರಣೆಗಳು ವಿಭಿನ್ನವಾದರೂ, ಅದರ ಹಿಂದಿರುವ ಶಾಸ್ತ್ರಗಳ ಸಂಪ್ರದಾಯಗಳ ಮೂಲ ಒಂದೇ ಆಗಿದೆ. ಹಾಗಾಗಿ ಈ ಸಮಯದಲ್ಲಿ ನಾವು ಏನನ್ನು ತಿನ್ನಬಾರದು ಅನ್ನೊದನ್ನು ನೋಡೋಣ.</p><img><p><strong>ಡೈರಿ ಉತ್ಪನ್ನ ತಪ್ಪಿಸಿ</strong></p><p>ಶ್ರಾವಣ ಮಾಸದಲ್ಲಿ ಹಾಲಿನ ಉತ್ಪನ್ನಗಳನ್ನು (dairy products) ಸೇವಿಸಬಾರದು ಏಕೆಂದರೆ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಹೆಚ್ಚಾಗಿ ಮಣ್ಣಿನಡಿಯಿಂದ ಮೇಲೆ ಬಂದು ಹುಲ್ಲು ಅಥವಾ ಹಸಿರು ವಸ್ತುಗಳನ್ನು ತಿಂದು ಅವುಗಳಿಗೆ ಸೋಂಕು ತರುತ್ತವೆ. ಹಸು ಅಥವಾ ಎಮ್ಮೆ ಅದೇ ಹುಲ್ಲನ್ನು ತಿನ್ನುತ್ತದೆ, ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.</p><img><p><strong>ಮೊಸರು ಸೇವಿಸುವುದನ್ನು ತಪ್ಪಿಸಿ</strong></p><p>ಮೊಸರನ್ನು ತಿನ್ನಬಾರದು ಏಕೆಂದರೆ ಈ ದಿನಗಳಲ್ಲಿ ಪರಿಸರದಲ್ಲಿ ತೇವಾಂಶ ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿರುತ್ತವೆ, ಇದರಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾಗಳು(bacteria) ಬೆಳೆಯುತ್ತವೆ. ಇದಲ್ಲದೆ, ಮೊಸರಿನ ಪರಿಣಾಮವು ಶೀತವಾಗಿರುತ್ತದೆ, ಹಾಗಾಗಿ ಶೀತ ಮತ್ತು ಕೆಮ್ಮು ಉಂಟಾಗುವ ಸಾಧ್ಯತೆ ಇರುತ್ತದೆ</p><img><p><strong>ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಿ</strong></p><p>ಆಯುರ್ವೇದದ ಪ್ರಕಾರ ಮಳೆಯಿಂದಾಗಿ ಜನರ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ. ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ (garlic and ginger) ಬಿಸಿ ಸ್ವಭಾವವನ್ನು ಹೊಂದಿರುತ್ತವೆ, ಅವುಗಳನ್ನು ತಿನ್ನುವುದರಿಂದ ವಾಯು, ಗ್ಯಾಸ್ ಮತ್ತು ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.</p><img><p><strong>ಬದನೆಕಾಯಿಯಿಂದ ದೂರವಿರಿ</strong></p><p>ಚರಕ ಸಂಹಿತವು ಶ್ರಾವಣ ಮಾಸದಲ್ಲಿ ಬದನೆಕಾಯಿ ತಿನ್ನಬಾರದೆಂದು ಸಲಹೆ ನೀಡುತ್ತದೆ, ಇದಕ್ಕೆ ಮುಖ್ಯ ಕಾರಣ ಅದರ ಸ್ವಭಾವ. ಬದನೆಕಾಯಿ (brinjal) ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬದನೆಕಾಯಿ ಗಿಡದಲ್ಲಿ ಬೆಳೆಯುವ ತರಕಾರಿ’ . ಶ್ರಾವಣ ಮಾಸದಲ್ಲಿ ಆರ್ದ್ರತೆಯಿಂದಾಗಿ, ಅದರಲ್ಲಿ ಕೀಟಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.</p><img><p><strong>ಹಸಿರು ಎಲೆ ತರಕಾರಿಗಳು</strong></p><p>ಸುಶ್ರುತ ಸಂಹಿತದಲ್ಲಿ, ಶ್ರಾವಣ ಮಾಸದಲ್ಲಿ ಹಸಿರು ಎಲೆ ತರಕಾರಿಗಳನ್ನು(green vegetables) ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಈ ಋತುವಿನಲ್ಲಿ ನೆಲದಲ್ಲಿರುವ ಹೆಚ್ಚಿನ ಕೀಟಗಳು ಹೊರಬಂದು ಹಸಿರು ಎಲೆ ತರಕಾರಿಗಳಿಗೆ ಸೋಂಕು ತರುತ್ತವೆ, ಇದರಿಂದಾಗಿ ವೈರಲ್ ಸೋಂಕಿನ ಅಪಾಯ ಹೆಚ್ಚಾಗುವ ಭಯವಿದೆ.</p>



Source link

Leave a Reply

Your email address will not be published. Required fields are marked *