
<p>ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿದೆ. ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮರೆತುಹೋದ 300 ಗ್ರಾಂ ಚಿನ್ನ ಹಾಗೂ 1.5 ಲಕ್ಷ ನಗದುಳ್ಳ ಬ್ಯಾಗ್ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.</p><img><p>ಶಕ್ತಿಸೌಧ ವಿಧಾನಸೌಧದಲ್ಲಿಯೇ ಕಳ್ಳತನ ನಡೆದಿದೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಬೈರತಿ ಸುರೇಶ್ ಅವರ ಕಚೇರಿಯಲ್ಲಿದ್ದ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನವಾಗಿದೆ. ಇದರ ನಡುವೆ ವಿಧಾನಸೌಧದೊಳಗೆ ಇಷ್ಟೊಂದು ಚಿನ್ನಾಭರಣ ಹೇಗೆ ಬಂತು ಎಂಬುದರ ಬಗ್ಗೆಯೂ ಪ್ರಶ್ನೆ ಮೂಡಿದೆ.</p><img><p>ನವೀನ್ ಎಂಬ ವ್ಯಕ್ತಿ ಕೆಲಸದ ನಿಮಿತ್ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಆಗಮಿಸಿದ್ದರು. ಈ ವೇಳೆ ನವೀನ್ ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದ ಚಿನ್ನಾಭರಣ ಮತ್ತು ಹಣವುಳ್ಳ ಬ್ಯಾಗ್ ಮರೆತು ಹೋಗಿದ್ದಾರೆ. ಮರುದಿನ ಬಂದು ನೋಡಿದಾಗ ಸಚಿವರ ಕಚೇರಿಯಲ್ಲಿ ಚಿನ್ನ ಮತ್ತು ಹಣವುಳ್ಳ ಚೀಲ ಇರಲಿಲ್ಲ.</p><img><p>ಇದೀಗ ತಮ್ಮ ಬ್ಯಾಗ್ ಕಾಣೆಯಾಗಿದ್ದರ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಧಾನಸೌಧಕ್ಕೆ ಆಗಮಿಸಿ ಸಚಿವರ ಕಚೇರಿಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಿಪಿಎಆರ್ ಡಿ ಗ್ರೂಪ್ ನೌಕರನ ಪಾತ್ರವಿರೋದು ಪತ್ತೆಯಾಗಿದೆ.</p><img><p>ಡಿಪಿಎಆರ್ ಡಿ ಗ್ರೂಪ್ ನೌಕರ ಬ್ಯಾಗ್ ತೆಗೆದುಕೊಂಡು ಹೋಗುತ್ತಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.</p><p><strong>ಇದನ್ನೂ ಓದಿ: </strong><strong>ಹೊಯ್ಸಳ ವಾಹನಕ್ಕೆ ಆಟೋ ಗುದ್ದಿಸಿ ಕಳ್ಳನ ಹಿಡಿದುಕೊಟ್ಟಚಾಲಕ! ಅಸಲಿಗೆ ನಡೆದ್ದೇನು?</strong></p><img><p>ಅಸಲಿಗೆ ವಿಧಾನಸೌಧದೊಳಗೆ ಇಷ್ಟೊಂದು ಚಿನ್ನಾಭರಣ ಮತ್ತು ಹಣ ಬಂದಿದ್ದು ಹೇಗೆ? ದೂರು ದಾಖಲಿಸಿರುವ ನವೀನ್ ಯಾರು? ಮೆಟಲ್ ಡಿಟೆಕ್ಟರ್ ,ತಪಾಸಣೆ ಕೇವಲ ನೆಪಕ್ಕೆ ಮಾತ್ರಾನಾ? ಸಚಿವರ ಕಚೇರಿಯೊಳಗೆ ಬಂದಿರುವ ಈ ಚಿನ್ನಾಭರಣದ ಮೂಲ ಏನು ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.</p><p><strong>ಇದನ್ನೂ ಓದಿ: </strong><strong>ಮೆಟ್ರೋ ಟಿಕೆಟ್ ದರ ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಆರ್.ಅಶೋಕ್</strong></p>
Source link
ಸಚಿವ ಬೈರತಿ ಸುರೇಶ್ ವಿಧಾನಸೌಧದ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ