ಬಹುಭಾಷಾ ನಟ ಪ್ರಕಾಶ್ ರಾಜ್ (ಪ್ರಕಾಶ್ ರಾಜ್) ಅವರ ರಾಜಕೀಯ ವಿಷಯಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಬಿಜೆಪಿ ನಿಲುವುಗಳನ್ನು ಅವರು ಆಗಾಗ ವಿರೋಧಿಸುತ್ತಾರೆ. ಆ ಕಾರಣದಿಂದ ಅವರ ವಿರೋಧಿಗಳು ಟ್ರೋಲ್ ಮಾಡುತ್ತಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅವರು ರಾಮಾಯಣದ (ರಾಮಾಯಣ) ಬಗ್ಗೆ ಮಾತನಾಡಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯ ವಿಡಂಬನೆಗೆ ಅವರು ರಾಮಾಯಣವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಅವರು ಮಾತನಾಡಿದ್ದನ್ನು ಅನೇಕರು ಖಂಡಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅನೇಕರು ತಮ್ಮ ಅನಿಸಿಕೆಯಾಗಬೇಕು. ‘ಪ್ರಕಾಶ್ ರಾಜ್ ಹೇಳುವುದೇನೆಂದರೆ ರಾಮನು ಉತ್ತರ ಭಾರತೀಯ, ರಾವಣನು ದಕ್ಷಿಣ ಭಾರತೀಯ ಆದಿವಾಸಿ. ರಾಮನು ಹಣ್ಣುಗಳನ್ನು ಕದ್ದ ಕಾರಣದಿಂದ ಅವರ ನಡುವಿನ ಸಂಘರ್ಷವು ಪ್ರಾರಂಭವಾಯಿತು. ನೀವು ಇತಿಹಾಸವನ್ನು ಚರ್ಚ್ನಿಂದ ಕಲಿತರೆ ಇಂತಹದ್ದೇ ಆಗುತ್ತದೆ’ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.
ಪ್ರಕಾಶ್ ರಾಜ್ ರಾಮ್ ಉತ್ತರ ಭಾರತೀಯ, ರಾವಣ ದಕ್ಷಿಣ ಭಾರತದ ಬುಡಕಟ್ಟು ಎಂದು ಹೇಳಿಕೊಳ್ಳುತ್ತಾರೆ ಮತ್ತು ರಾಮ್ “ಹಣ್ಣುಗಳನ್ನು ಕದ್ದ ಕಾರಣ” ಅವರ ಸಂಘರ್ಷ ಪ್ರಾರಂಭವಾಯಿತು.
ನೀವು ಚರ್ಚ್ನಿಂದ ಇತಿಹಾಸ್ ಅನ್ನು ಕಲಿತಾಗ ಇದು ಸಂಭವಿಸುತ್ತದೆ pic.twitter.com/yRJmEzwivq
— ಜೈಪುರ ಸಂಭಾಷಣೆಗಳು (@JaipurDialogues) ಏಪ್ರಿಲ್ 16, 2026
‘ಪ್ರಕಾಶ್ ರಾಜ್ ತನ್ನದೇ ರಾಮಾಯಣವನ್ನು ರಚಿಸಿಕೊಂಡು, ಉತ್ತರ ಭಾರತದ ರಾಮನು ದಕ್ಷಿಣ ಭಾರತದ ಆದಿವಾಸಿಯಾದ ರಾವಣನಿಂದ ಹಣ್ಣುಗಳನ್ನು ಕದ್ದನೆಂದು ಹೇಳುತ್ತಿದ್ದಾರೆ. ಇದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ. ಟ್ವಿಟರ್ನಲ್ಲಿ ಈ ವಿಷಯ ಈಗ ಟ್ರೆಂಡ್ ಆಗುತ್ತಿದೆ.
ಡ್ಯಾಮ್! ಉತ್ತರ ಭಾರತದ ರಾಮನು ದಕ್ಷಿಣ ಭಾರತದ ಬುಡಕಟ್ಟು ರಾವಣನಿಂದ ಹಣ್ಣುಗಳನ್ನು ಕದ್ದಿದ್ದಾನೆ ಎಂದು ಈ ಕಮಿ ಪ್ರಕಾಶ್ ರಾಜ್ ತನ್ನದೇ ಆದ ರಾಮಾಯಣವನ್ನು ಕಂಡುಹಿಡಿದನು. ಇದಕ್ಕೆ ಕಾನೂನು ಕ್ರಮದ ಅಗತ್ಯವಿದೆ @HMOIndia
ಅಸ್ಪಷ್ಟ ಹಿಂದೂಫೋಬಿಯಾ pic.twitter.com/BGufumIiu9
– ಮೋನಿಕಾ ವರ್ಮಾ (@TrulyMonica) ಏಪ್ರಿಲ್ 16, 2026
‘ಹಿಂದೂಗಳನ್ನು ಅಪಹಾಸ್ಯ ಮಾಡಲು ಪ್ರಕಾಶ್ ರಾಜ್ ರಾಮಾಯಣದ ಕಲ್ಪಿತ ಆವೃತ್ತಿಯನ್ನು ವಿವರಿಸುತ್ತಾರೆ. ಅವರು ಈ ನಿಂದನೀಯ ಕಥೆಯನ್ನು ಕೇವಲ ಗೋಮಾಂಸ ಸೇವನೆಯನ್ನು ಉತ್ತೇಜಿಸಲು ಮತ್ತು ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸಿದ್ದಾರೆ. ಇಂತಹ ವ್ಯಕ್ತಿಗೆ ದೃಶ್ಯಂ 3 ಮತ್ತು ವಾರಾಣಸಿ ಸಿನಿಮಾಗಳಲ್ಲಿ ಕೆಲಸ ಕೊಟ್ಟ ಅಜಯ್ ದೇವಗನ್ ಮತ್ತು ಎಸ್ಎಸ್ ರಾಜಮೌಳಿ ಅವರಿಗೆ ನಾಚಿಕೆ ಆಗಬೇಕು’ ಎಂದು ಇತರರು ಖುದ್ದು ಹೇಳಿಕೆ ನೀಡಿದ್ದಾರೆ.
ಪ್ರಕಾಶ್ ರಾಜ್ ಹಿಂದೂಗಳನ್ನು ಅಪಹಾಸ್ಯ ಮಾಡಲು ರಾಮಾಯಣದ ನಿರ್ಮಿತ ಆವೃತ್ತಿಯನ್ನು ವಿವರಿಸುತ್ತಾರೆ
-ರಾಮ್ ಜೆಐ ಉತ್ತರ ಭಾರತೀಯ – ರಾವಣ ದಕ್ಷಿಣ ಭಾರತದ ಬುಡಕಟ್ಟು – ಅವರು ಶತ್ರುಗಳಾದರು bcz ರಾಮ್ ಜಿ ರಾವಣನಿಂದ ಹಣ್ಣುಗಳನ್ನು ಕದ್ದರು
ಮತ್ತು ಅವರು ಗೋಮಾಂಸ ತಿನ್ನುವುದನ್ನು ಉತ್ತೇಜಿಸಲು ಮತ್ತು ಉತ್ತರ ದಕ್ಷಿಣ ವಿಭಜನೆಯನ್ನು ಸೃಷ್ಟಿಸಲು ಮಾತ್ರ ಈ ಧರ್ಮನಿಂದೆಯ ಕಥೆಯನ್ನು ಮಾಡಿದರು
ಅವಮಾನ… pic.twitter.com/HFAV95HXbR
— ಅಮಿತ್ ಕುಮಾರ್ ಸಿಂಧಿ (@AMIT_GUJJU) ಏಪ್ರಿಲ್ 16, 2026
‘ನಾನು ಪ್ರಕಾಶ್ ರಾಜ್ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನೋಡಲು ಇದ್ದ ಜನರು ಏನು ಮಾಡಿದರು? ಅವರ ಅಸಂಬದ್ಧ ಮಾತುಗಳಿಗೆ ಚಪ್ಪಾಳೆ ಹೊಡೆಯುತ್ತಾ ಪ್ರೋತ್ಸಾಹಿಸುತ್ತಿದ್ದರು. ಯಾಕೆ ಯಾರೂ ಎದ್ದು ನಿಲ್ಲಲಿಲ್ಲ? ಅಲ್ಲಿ ಹಿಂದೂಗಳು ಯಾರೂ ಇಲ್ಲವೇ?’ ಎಂದು ನೆಟ್ಟಿಗ ಪ್ರಶ್ನೆ ಮಾಡಲಾಗಿದೆ.
ಇದನ್ನೂ ಓದಿ: ನಟ ಪ್ರಕಾಶ್ ರಾಜ್ ತಾಯಿ ನಿಧನ: ಶಾಂತಿನಗರ ಚರ್ಚ್ನಲ್ಲಿ ಪ್ರಾರ್ಥನೆ: ವಿಡಿಯೋ
ಈ ರೀತಿಯ ಅನೇಕ ಟೀಕೆಗಳು ಎದುರಾಗಿವೆ. ಇವುಗಳಿಗೆ ಪ್ರಕಾಶ್ ರಾಜ್ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರ ತಾಯಿ ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಿದ ರೀತಿಯ ಬಗ್ಗೆಯೂ ಅನೇಕರು ಟೀಕಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.