ಈಗಲೇ ಇಷ್ಟು ಪರದಾಡ್ತಾ ಇರೋ ದಾಸನಿಗೆ ಬಳ್ಳಾರಿಗೆ ಶಿಫ್ಟ್ ಆಗೋ ಭೀತಿ ಬೇರೆ ಕಾಡ್ತಿದೆ. ದರ್ಶನ್ ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಅತ್ಯಂತ ಜನಪ್ರೀಯ ತಾರೆ ಪಟ್ಟ ಪಡೆದಾತ. ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ನಟ. ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯೋ ಸಿರಿವಂತ. ಆದ್ರೆ ಈ ಸಿರಿಯನ್ನ ಅನುಭಸಿಸೋ ಯೋಗ ಮಾತ್ರ ದರ್ಶನ್ಗಿಲ್ಲ. ಕಾಟೇರ ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡು ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ದಾಸನ ಬದುಕಿಗೆ ಗ್ರಹಣ ಹಿಡಿದುಬಿಟ್ಟಿದೆ.