Headlines

ಟೆಕ್ ಸಮಿಟ್​ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್

ಟೆಕ್ ಸಮಿಟ್​ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್


ಬೆಂಗಳೂರು, ನವೆಂಬರ್ 18: ಕರ್ನಾಟಕ ಸರ್ಕಾರದ ಅಗ್ಗದ ಬೆಲೆಗೆ ಎಐ ಶಕ್ತ ಕಂಪ್ಯೂಟರ್ (AI ಸಿದ್ಧ ಕಂಪ್ಯೂಟರ್) ಅನ್ನು ಸ್ಥಾಪಿಸಲಾಗಿದೆ. ಇವತ್ತು ಚಾಲನೆಗೊಂಡ ಬೆಂಗಳೂರು ಟೆಕ್ ಸಮಿಟ್ 2025 ರಲ್ಲಿಬೆಂಗಳೂರು ಟೆಕ್ ಶೃಂಗಸಭೆ – 2025) ಈ ವಿಶೇಷ ಪಿಸಿಯನ್ನು ಅನಾವರಣಗೊಳಿಸಲಾಗಿದೆ. ಕರ್ನಾಟಕ ಸರ್ಕಾರೀ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆ ಮತ್ತು ಐಟಿ ಬಿಟಿ ಇಲಾಖೆ ಜಂಟಿಯಾಗಿ ಈ ಪರ್ಸನಲ್ ಕಂಪ್ಯೂಟರ್ (ಮೈಕ್ರೋ ಪಿಸಿ) ಅನ್ನು ಅಭಿವೃದ್ದಿಪಡಿಸಿವೆ. ಈ 28ನೇ ಆವೃತ್ತಿಯ ಟೆಕ್ ಸಮಿಟ್‌ನಲ್ಲಿ ಈ ಕಿಯೋ ಕಂಪ್ಯೂಟರ್ (KEO ಕಂಪ್ಯೂಟರ್) ಪ್ರಮುಖ ಆಕರ್ಷಣೆಗಳಲ್ಲಿದೆ.

ಏನಿದು ಕಿಯೋ ಕಂಪ್ಯೂಟರ್?

ಕಿಯೋ (KEO) ಎಂಬುದು ಒಂದು ಸಣ್ಣ ಪರ್ಸನಲ್ ಕಂಪ್ಯೂಟರ್ ಅಥವಾ ಪಿಸಿ. ಇದು ಜ್ಞಾನ ಆಧಾರಿತ, ಅಗ್ಗವಾಗಿರುವ ಮತ್ತು ಕಂಪ್ಯೂಟಿಂಗ್ ಇರುವ ಕಂಪ್ಯೂಟರ್ (KEO- ಜ್ಞಾನ ಆಧಾರಿತ, ಆರ್ಥಿಕ ಮತ್ತು ಮುಕ್ತ ಕಂಪ್ಯೂಟಿಂಗ್). ದುಬಾರಿ ಬೆಲೆಯ ಕಂಪ್ಯೂಟರ್, ಲ್ಯಾಪ್ಟಾಪ್ ಖರೀದಿಸಲು ಶಕ್ತರಲ್ಲದ ಕೆಳ ಮಧ್ಯಮ ವರ್ಗದ ಜನರ ಕೈಗೆ ಕಡಿಮೆ ಬೆಲೆ ಪ್ರಬಲ ಕಂಪ್ಯೂಟರ್ ಒದಗಿಸುವ ಉದ್ದೇಶದಿಂದ ರೂಪಿಸಲಾದ ಪಿಸಿ ಇದು.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿತಿ 2025ಕ್ಕೆ ಚಾಲನೆ; ಸ್ಟಾರ್ಟಪ್ ನಗರದಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ

ಕಿಯೋ ಪಿಸಿಯಲ್ಲಿ ಏನಿದೆ ವಿಶೇಷತೆ?

ಇದು ಎಐ ಶಕ್ತ ಪಿಸಿಯಾಗಿದೆ. 4ಜಿ, ವೈಫೈ, ಈಟರ್ನೆಟ್, ಯುಎಸ್‌ಡಿ ಬಿ ಎ, ಯುಎಸ್‌ಡಿ ಬಿ ಸಿ ಪೋರ್ಟ್‌ಗಳು, ಎಚ್‌ಡಿಎಂಐ, ಆಡಿಯೋ ಜ್ಯಾಕ್‌ಗಳನ್ನು ಹೊಂದಿದೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಬಲ್ಲಂತೆ ಎಐ ಅನ್ನು ಶಕ್ತಗೊಳಿಸಲಾಗಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಪ್ರೊಡಕ್ಟಿವಿಟಿ ಸಾಧನಗಳನ್ನು ಇನ್ ಸ್ಟಾಲ್ ಮಾಡಲಾಗಿರುತ್ತದೆ.

ಜೊತೆಗೆ ಬುದ್ಧ ಏಜೆಂಟ್

ಈ ಕಂಪ್ಯೂಟರ್‌ನಲ್ಲಿ ಮತ್ತೊಂದು ವಿಶೇಷತೆ ಎಂದರೆ ಬುದ್ಧ್ (BUDDH) ಎಂಬ ಎಐ ಏಜೆಂಟ್. ಕರ್ನಾಟಕ ರಾಜ್ಯದ ಡಿಎಸ್‌ಐಆರ್‌ಟಿ ಸಿಲಾಬಸ್‌ನಲ್ಲಿ ಟ್ರೈನ್ ಆಗಿರುವ ಎಐ ಏಜೆಂಟ್ ಇದು. ಕಿಯೋ ಕಂಪ್ಯೂಟರ್ನಲ್ಲಿ ಈ ಐ ಏಜೆಂಟ್ ಪ್ರೀಲೋಡೆಡ್ ಆಗಿ ಬಂದಿರುತ್ತದೆ. ಇಂಟರ್ನೆಟ್ ಇಲ್ಲದೆಯೂ ಆಫ್ಲೈನ್ನಲ್ಲೇ ಈ ಐ ಏಜೆಂಟ್ ಕೆಲಸ ಮಾಡಬಲ್ಲದು.

ಇದನ್ನೂ ಓದಿ: ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ

ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷರಾಗಿರುವ ಕಿಯೋನಿಕ್ಸ್ ಸಂಸ್ಥೆ (ಕಿಯೋನಿಕ್ಸ್) ಅಭಿವೃದ್ದಿಪಡಿಸಿರುವ ಕಿಯೋ ಪಿಸಿಗೆ ಓಪನ್ ಸೋರ್ಸ್ ಆರ್ ಎಸ್ ಸಿ-ವಿ ಪ್ರೋಸೆಸರ್ (RISC-V ಪ್ರೊಸೆಸರ್) ಅಳವಡಿಸಲಾಗಿದೆ. ವಿಂಡೋಸ್ ಬದಲಿಗೆ ಲೈನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಂ ಸ್ಥಾಪಿಸಲಾಗಿದೆ. ಮೊನ್ನೆ ಬೆಂಗಳೂರು ಟೆಕ್ ಸಮಿತಿ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಐಟಿ ಬಿಟಿ ಪ್ರಿಯಾಂಕ್ ಖರ್ಗೆ ಅವರು ಕಿಯೋ ಕಂಪ್ಯೂಟರ್ ಅಭಿವೃದ್ಧಿಯನ್ನು ಬಹಳ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:57 pm, ಮಂಗಳವಾರ, 18 ನವೆಂಬರ್ 25



Source link

Leave a Reply

Your email address will not be published. Required fields are marked *