
ಬಾಲಿವುಡ್ನ ಬ್ಲಾಕ್ಬಸ್ಟರ್ ಸಿನಿಮಾ ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಮೂಲಕ ನಟ ಅಜಯ್ ದೇವಗನ್ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು. ಆ ಸಿನಿಮಾಗೆ ನಿರ್ದೇಶಕ ಓಮ್ ರಾವುತ್ (ಓಂ ರಾವುತ್) ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಈಗ ಓಂ ರಾವುತ್ ಮತ್ತು ಅಜಯ್ ದೇವಗನ್ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ, ಈ ವರದಿಗಳ ಬಗ್ಗೆ ಈಗ ಅಜಯ್ ದೇವಗನ್ (ಅಜಯ್ ದೇವಗನ್) ಅವರ ಕಡೆಯಿಂದ ಅಧಿಕೃತ ಸ್ಪಷ್ಟನೆ ಬಂದಿದೆ.
ಕೇಳಿಬಂದ ವದಂತಿಗಳಿಗೆ ಅಜಯ್ ದೇವಗನ್ ಪರ ವಕ್ತಾರರು ತೆರೆ ಎಳೆದಿದ್ದಾರೆ. ಅಜಯ್ ದೇವಗನ್ ಮತ್ತು ಓಮ್ ರಾವುತ್ ಮತ್ತೊಂದು ಐತಿಹಾಸಿಕ ಸಿನಿಮಾಕ್ಕಾಗಿ ಒಂದಾಗುತ್ತಿದೆ ಎಂಬ ನಟನ ತಂಡ ಸಂಪೂರ್ಣವಾಗಿ ನಿರಾಕರಿಸಿದೆ. ಈ ಬಗ್ಗೆ ‘ಅಜಯ್ ದೇವಗನ್ ಫಿಲ್ಮ್ಸ್’ ವಕ್ತಾರರು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
‘ಅಜಯ್ ದೇವಗನ್ ಮತ್ತು ಓಂ ರಾವುತ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಯಾವುದೇ ಚರ್ಚೆಗಳು ಅಥವಾ ಪ್ರಸ್ತುತಗಳು ನಡೆಯುತ್ತಿಲ್ಲ. ಈ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ. ಅಜಯ್ ಮತ್ತು ತಮ್ಮ ತಮ್ಮ ರಾವುತ್ ಇಬ್ಬರೂ ಪ್ರಸ್ತುತ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದೇವಗನ್ ದಂಪತಿ ಯಾರು ಶ್ರೀಮಂತರು?
ಸದ್ಯಕ್ಕೆ ‘ದೃಶ್ಯಂ 3’ ಚಿತ್ರದ ಮೇಲೆ ಅಜಯ್ ದೇವಗನ್ ಅವರು ಗಮನ ಹರಿಸಿದ್ದಾರೆ. ಅಜಯ್ ದೇವಗನ್ ಕಳೆದ ವರ್ಷ ‘ದೇ ದೇ ಪ್ಯಾರ್ ದೇ 2’ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಅವರು ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.