
ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್ನ ಆರೈಕೆ ಮಾಡಲು ಭೂಮಿಕಾ ಮುಂದಾಗುತ್ತಾಳೆ. ಆದರೆ, ಇವರಿಬ್ಬರ ಸಂಬಂಧ ತಿಳಿಯದ ವಠಾರದವರು ಗೌತಮ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಭೂಮಿಕಾ ರಣಚಂಡಿಯ ಅವತಾರ ತಾಳಿ ಎಲ್ಲರಿಗೂ ತಕ್ಕ ಉತ್ತರ ನೀಡುತ್ತಾಳೆ.<img><p>ಅಮೃತಧಾರೆ (Amruthadhaare) ಸೀರಿಯಲ್ ಈಗ ಇನ್ನೊಂದು ಹಂತಕ್ಕೆ ಹೋಗಿದೆ. ಒಂದೇ ವಠಾರದಲ್ಲಿ ಇದ್ದರೂ, ಗೌತಮ್ ಮತ್ತು ಭೂಮಿಕಾ ದೂರದೂರವಿದ್ದಾರೆ. ಆದರೆ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಗೌತಮ್ಗೆ ಜ್ವರ ಬಂದಿರೋ ವಿಷಯ ತಿಳಿದು ಭೂಮಿಕಾ ಕುಗ್ಗಿ ಹೋಗಿದ್ದಾಳೆ.</p><img><p>ಆತನ ಆರೈಕೆಯಲ್ಲಿ ಭೂಮಿಕಾ ನಿಂತಿದ್ದಾಳೆ. ಆದರೆ ವಠಾರದವರಿಗೆ ಇವರಿಬ್ಬರೂ ಗಂಡ-ಹೆಂಡತಿ ಎನ್ನೋದು ಗೊತ್ತಿಲ್ಲವಲ್ಲ. ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ತನ್ನ ವಿರುದ್ಧ ಮಾತನಾಡಿದರೆ ಭೂಮಿಕಾ ಸಹಿಸಿಕೊಳ್ಳುತ್ತಿದ್ದಳೇನೋ. ಆದರೆ ಅವರು ಮಾತನಾಡಿದ್ದು ಗೌತಮ್ ವಿರುದ್ಧ.</p><img><p>ಮೊದಲಿಗೆ ಅವರ ಮನೆಯಿಂದ ಹೊರಕ್ಕೆ ಬಂದದ್ದನ್ನು ನೋಡಿದ ಹೆಂಗಸರು ಎಲ್ಲಿ ನಿಮ್ಮ ಗಂಡ ಕಾಣಿಸ್ತಾನೆ ಇಲ್ವಲ್ಲಾ. ಇದೆಲ್ಲಾ ಅವರು ನೋಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದಿದ್ದಾರೆ. ಅದಕ್ಕೆ ಭೂಮಿಕಾ ಕುದಿಯುತ್ತಿದ್ದರೂ ಸುಮ್ಮನಾಗಿದ್ದಾಳೆ.</p><img><p>ಬಳಿಕ ಸುಮ್ಮನಾಗದ ವಠಾರದವರು, ಗೌತಮ್ ಹೀಗೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಗಂಡನ ವಿರುದ್ಧ ಮಾತನಾಡಿದ್ದನ್ನು ನೋಡಿ ರಣಚಂಡಿ ಅವತಾರ ಎತ್ತೇಬಿಟ್ಟಿದ್ದಾಳೆ ಭೂಮಿಕಾ.</p><img><p>ವಠಾರದ ಹೆಂಗಸರಿಗೆ ಚಾಟಿ ಏಟು ನೀಡಿದ್ದಾಳೆ. ಅವರು ಬಂದು ಐದು ವರ್ಷವಾಯ್ತು. ಒಮ್ಮೆಯಾದರೂ ಈ ವಠಾರದ ಹೆಣ್ಣುಮಕ್ಕಳ ಮೇಲೆ ಕೆಟ್ಟ ಕಣ್ಣು ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಾಳೆ. ಅವರು ಹೊರಗಡೆ ಕೆಲವು ದಿನಗಳಿಂದ ಬರಲಿಲ್ಲ. ಅದನ್ನು ಯಾರಾದ್ರೂ ಗಮನಿಸಿ ಅವರಿಗೆ ಏನು ಆಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ರಾ ಎಂದು ಪ್ರಶ್ನಿಸಿದ್ದಾಳೆ.</p><img><p>ಅವಳ ಈ ರೌದ್ರಾವತಾರಕ್ಕೆ ಮಹಿಳೆಯರು ಸುಸ್ತಾಗಿ ತಲೆ ಬಗ್ಗಿಸಿ ನಿಂತಿದ್ದಾರೆ. ಅವರು ಎಷ್ಟೆಲ್ಲಾಮಂದಿಗೆ ಹೆಲ್ಪ್ ಮಾಡಿದ್ದಾರೆ. ನೀವು ಅವರಿಗೆ ಏನು ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ ಭೂಮಿಕಾ, ಅವರ ಬಗ್ಗೆ ಮಾತನಾಡಲು ನಿಮಗೆ ಯಾರಿಗೂ ಅರ್ಹತೆ ಇಲ್ಲ ಎಂದಿದ್ದಾಳೆ.</p><p>ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್ ಮಾಡಿ</p>
Source link
Amruthadhaare: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ