17

Image Credit : zee kannada facebook
ಎಲ್ಲರೂ ಒಂದೆಡೆ
ಅಮೃತಧಾರೆಯಲ್ಲಿ (Amruthadhaare) ಇನ್ನೇನು ಎಲ್ಲರೂ ಒಂದಾಗುವ ಟೈಮ್ ಬಂದೇ ಬಿಟ್ಟಿದೆ. ಮಲ್ಲಿ ಮತ್ತು ಮಗ ಆಕಾಶ್ನನ್ನು ಕರೆದುಕೊಂಡು ಭೂಮಿಕಾ ದೇವಾಲಯಕ್ಕೆ ಹೋಗಿದ್ದರೆ, ಅದೇ ದೇವಾಲಯಕ್ಕೆ ಗೌತಮ್ನೂ ಬಂದಿದ್ದಾನೆ.
27
Image Credit : zee5
ಮನೆಬಿಟ್ಟ ಭಾಗ್ಯಮ್ಮ
ಮಗ-ಸೊಸೆ ಬೆಂಗಳೂರಿನಲ್ಲಿಯೇ ಇರುವುದು ತಿಳಿದು ಅವರನ್ನು ಹುಡುಕಿ ಮನೆಬಿಟ್ಟ ಭಾಗ್ಯಮ್ಮ ಕೂಡ ಅದೇ ದೇವಾಲಯಕ್ಕೆ ಬಂದಿದ್ದಾಳೆ. ಆಟೊದಲ್ಲಿ ಭೂಮಿಕಾ ಹೋಗುವುದನ್ನು ನೋಡಿದ್ದ ಅವಳು ಅದರ ಹಿಂದೆನೇ ಬಂದು ದೇವಾಲಯ ಸೇರಿದ್ದಾಳೆ.
37
Image Credit : Instagram
ಶಕುಂತಲಾ ಮಾತು
ಅದೇ ಇನ್ನೊಂದೆಡೆ, ಗ್ರಹಚಾರ ಸರಿಯಿಲ್ಲ, ಪೂಜೆ ಮಾಡಿಸಿಕೊಂಡು ಬಾ ಎಂದು ಜೈದೇವ್ ಮತ್ತು ದಿಯಾಳನ್ನು ಶಕುಂತಾ ಒತ್ತಾಯಪೂರ್ವಕವಾಗಿ ಕಳುಹಿಸಿದ್ದಾಳೆ.
47
Image Credit : Instagram
ದೇವಸ್ಥಾನಕ್ಕೆ ಜೈದೇವ
ಮನಸ್ಸಿಲ್ಲದ ಮನಸ್ಸಿನಿಂದ ಜೈದೇವ ಬಂದಿದ್ದಾನೆ. ಫುಲ್ ಟೈಟ್ ಆಗಿ ಕಾರಿನಲ್ಲಿ ಆತ ಕುಳಿತಿದ್ದರೆ, ದಿಯಾ ದೇವಸ್ಥಾನದ ಒಳಗೆ ಹೋಗಿದ್ದಾಳೆ.
57
Image Credit : Instagram
ಭಾಗ್ಯಮ್ಮ ಪ್ರತ್ಯಕ್ಷ
ಕಾರಿನ ಕುಳಿತ ಜೈದೇವ್ಗೆ ಭಾಗ್ಯಮ್ಮ ಕಾಣಿಸಿದ್ದಾಳೆ. ಭಾಗ್ಯಮ್ಮ ದೇವಸ್ಥಾನ ಒಳ ಹೊಕ್ಕಿದ್ದನ್ನು ನೋಡಿದ ಆತ ಅವಳ ಹಿಂದೆಯೇ ಬಂದಿದ್ದಾನೆ. ಅದಕ್ಕೂ ಮೊದಲು ಭೂಮಿಕಾ, ಮಲ್ಲಿ ಹೋಗಿದ್ದನ್ನು ಆತ ಗಮನಿಸಿರಲಿಲ್ಲ.
67
Image Credit : Instagram
ಆಕಾಶ್ನನ್ನು ಕಂಡ ಜೈದೇವ
ಅಲ್ಲಿ ಜೈದೇವ್ಗೆ ಆಕಾಶ್ ಕಾಣಿಸಿದ್ದಾನೆ. ಇವನನ್ನು ನೋಡಿ ಆಕಾಶ್ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಆತ ಹಿಡಿದುಕೊಂಡು ಬಿಟ್ಟಿದ್ದಾನೆ. ಆಕಾಶ್ ಅವರನನ್ನು ನೋಡಿ ಗುರುತೇ ಇಲ್ಲದ ಹಾಗೆ ಮಾಡಿದರೂ, ಜೈದೇವ ತನ್ನ ಗುರುತು ಹೇಳಿದ್ದಾನೆ.
77
Image Credit : Instagram
ಜೈದೇವ್ ತತ್ತರ
ಕೊನೆಗೆ ಮಲ್ಲಿಯ ಫೋಟೋ ಬಗ್ಗೆ ಪ್ರಶ್ನಿಸಿದ್ದಾನೆ. ಅವರು ನಿಮಗೆ ಏನಾಗಬೇಕು ಎಂದು ಆಕಾಶ್ ಕೇಳಿದ್ದಾನೆ. ಆ ಬಗ್ಗೆ ಜೈದೇವ್ ಎಲ್ಲಾ ಸತ್ಯ ನುಡಿಯುವುದರಲ್ಲಿ ಇದ್ದ. ಅದನ್ನು ಮರೆಯಿಂದಲೇ ಕೇಳಿಸಿಕೊಳ್ಳುತ್ತಿದ್ದ ಮಲ್ಲಿ ಅಲ್ಲೇ ಇದ್ದ ಕೋಲಿಯಿಂದ ಜೈದೇವನ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಆ ಹೊಡೆತಕ್ಕೆ ಜೈದೇವ ತತ್ತರಿಸಿ ಹೋಗಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.