ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!

ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!



ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!
<p>Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌, ಭೂಮಿಕಾ ದೂರ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ. ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್‌ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಹಾಕುತ್ತಿದ್ದರು, ಅದಕ್ಕೆ ಛಾಯಾ ಸಿಂಗ್‌ ತಿರುಗೇಟು ಕೊಟ್ಟಿದ್ದಾರೆ.</p><p>&nbsp;</p><img><p>ಗೌತಮ್‌ ಹಾಗೂ ಭೂಮಿಕಾಗೂ ಮಗ ಇದ್ದರೂ ಕೂಡ, ಆ ಮಗನಿಗೆ ತಂದೆ ಪ್ರೀತಿ ಸಿಗ್ತಿಲ್ಲ, ಗೌತಮ್‌ಗೂ ಕೂಡ ಹೆಂಡ್ತಿ, ಮಗನ ಜೊತೆ ಇರುವ ಭಾಗ್ಯ ಇಲ್ಲ. ಒಟ್ಟಿನಲ್ಲಿ ವೀಕ್ಷಕರಿಗೆ ಸದ್ಯದ ಎಪಿಸೋಡ್‌ಗಳು ಬೇಸರ ತಂದಿವೆ. ಹೀಗಾಗಿ ಕೆಲವರು ಭೂಮಿ ಪೋಸ್ಟ್‌ಗಳಿಗೆ ನೆಗೆಟಿವ್‌ ಕಾಮೆಂಟ್‌ ಮಾಡಿದ್ದರು.</p><img><p>ಉಳಿದ ಸೆಲೆಬ್ರಿಟಿಗಳಿಗೆ ಹೋಲಿಕೆ ಮಾಡಿದರೆ ಛಾಯಾ ಸಿಂಗ್‌ ಅವರು ಅಷ್ಟಾಗಿ ಸೋಶಿಯಲ್‌ ಮೀಡಿಯಾವನ್ನು ಬಳಕೆ ಮಾಡೋದಿಲ್ಲ, ಎಲ್ಲದಕ್ಕೂ ರಿಯಾಕ್ಟ್‌ ಕೂಡ ಮಾಡೋದಿಲ್ಲ. ಈಗ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಈ ಪೋಸ್ಟ್‌ಗೆ ಸೀರಿಯಲ್‌ ಸಂಬಂಧಿತ ನೆಗೆಟಿವ್‌ ಕಾಮೆಂಟ್‌ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p><img><p>“ನನ್ನ ಹಿತೈಷಿಗಳಾದ ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ. ದಯವಿಟ್ಟು ವಾದಬೇಡ. ನಾವು ಪ್ರಜಾಸತ್ತಾತ್ಮಕ ದೇಶದಲ್ಲಿದ್ದೇವೆ ಮತ್ತು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವತಂತ್ರ ಹಕ್ಕು ಹೊಂದಿದ್ದಾರೆ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.</p><img><p>“ನನ್ನ ಕೋರಿಕೆ ಇಷ್ಟೇ…ವಾದ ವಿವಾದಗಳನ್ನು ಮಾಡಬೇಡಿ…..ನೀವು ಎಲ್ಲರೂ ನನ್ನ ಕುಟುಂಬ, ಮತ್ತು ನನ್ನ ಕುಟುಂಬದವರು ಯಾರನ್ನೂ ಅವಮಾನಿಸಲ್ಲ ಅಥವಾ ಬೇರೆಯವರ ಮನಸ್ಸಿಗೆ ನೋವನ್ನು ಉಂಟುಮಾಡುವುದಿಲ್ಲವೆಂದು ನಾನು ನಂಬಿದ್ದೇನೆ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.</p><img><p>“ನಮ್ಮ ಮೌನವೇ ನಮ್ಮ ಶಕ್ತಿ ಮತ್ತು ಸಾಮರ್ಥ್ಯವೆಂದು ಎಲ್ಲರಿಗೂ ತೋರಿಸಿ.</p><p>ನೀವು నిజವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರೆ, ದಯವಿಟ್ಟು ಅನವಶ್ಯಕ ಕಾಮೆಂಟ್‌ಗಳನ್ನು ತೆಗೆದುಹಾಕಿ, ಸಂಬಂಧಪಟ್ಟ ಯಾರಿಗೂ, ನನ್ನ ಕುಟುಂಬದ ಪರವಾಗಿ ಕ್ಷಮೆ ಕೋರುತ್ತೇನೆ. ದೇವರು ಎಲ್ಲರಿಗೂ ಆಶೀರ್ವದಿಸಲಿ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.</p>



Source link

Leave a Reply

Your email address will not be published. Required fields are marked *