
<p>ಅಮೃತಧಾರೆ ಧಾರಾವಾಹಿ ಈಗ ಭರ್ಜರಿ ಟ್ವಿಸ್ಟ್ ಇರುವ ಎಪಿಸೋಡ್ ಪ್ರಸಾರ ಆಗ್ತಿದೆ. ಈ ಧಾರಾವಾಹಿಯಲ್ಲಿ ಭೂಮಿಗೆ ಆತ ತಾನೇ ಹುಟ್ಟಿದ ಹೆಣ್ಣು ಮಗಳನ್ನು, ಜಯದೇವ್ ಕದ್ದು, ಕಾಡಿನಲ್ಲಿ ಬಿಸಾಕಿದ್ದನು. ಈಗ ಅವನಿಗೆ ಮಗಳು ಸಿಕ್ಕಿದ್ದಾಳೆ. ಆದರೆ ಅವಳೇ ತನ್ನ ಮಗಳು ಎನ್ನೋದು ಅವನಿಗೆ ಅರಿವಾಗಿರಲಿಲ್ಲ.</p><p> </p><img><p>ಮಲತಾಯಿ ಶಕುಂತಲಾಗೆ ಗೌತಮ್ ಎಲ್ಲ ಆಸ್ತಿಯನ್ನು ಬರೆದುಕೊಟ್ಟು ಈಗ ಸಾಮಾನ್ಯ ಕ್ಯಾಬ್ ಡ್ರೈವರ್ ಆಗಿ, ಮಾರುವೇಷ ಹಾಕಿಕೊಂಡು ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಒಂದು ದಂಪತಿಯನ್ನು ಕ್ಯಾಬ್ನಲ್ಲಿ ಬೆಂಗಳೂರು ಏರ್ಪೋರ್ಟ್ಗೆ ಡ್ರಾಪ್ ಮಾಡಬೇಕಿತ್ತು. ಆಗ ಆ ಕಾರ್ನಲ್ಲಿ ಮಹಿಳೆ ಒಂದು ಬ್ಯಾಗ್ ಬಿಟ್ಟು ಹೋಗಿದ್ದಳು. ಆ ಬ್ಯಾಗ್ನ್ನು ಕೊಡಬೇಕು ಅಂತ ಅವನು ಆ ಮನೆಗೆ ಹೋದ. ಅಲ್ಲಿಗೆ ಅವನಿಗೆ ಪುಟ್ಟ ಬಾಲಕಿ ಇರೋದು ಗೊತ್ತಾಗಿತ್ತು.</p><img><p>ಪಾಲಕರು ಆ ಮಗುವನ್ನು ಬಿಟ್ಟು ಹೋದರು ಅಂತ ಪೊಲೀಸ್ ಠಾಣೆಗೆ ಬಂದು ಮಗುವನ್ನು ಒಪ್ಪಿಸಲು ನೋಡಿದ್ದಾನೆ. ಅಲ್ಲಿನ ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿ ಅನಾಥಾಶ್ರಮಕ್ಕೆ ಹೋಗಿದ್ದಾನೆ. ಅಲ್ಲಿ ಆ ಮಗುವನ್ನು ಬಿಡೋದು ಅವನ ಪ್ಲ್ಯಾನ್ ಆಗಿತ್ತು. ಆದರೆ ಆ ಮಗು ಮಾತ್ರ ಅಲ್ಲಿ ಇರೋಕೆ ರೆಡಿ ಆಗಲಿಲ್ಲ.</p><img><p>ಆ ಮಗು ಗೌತಮ್ ಜೊತೆಯೇ ಉಳಿದುಕೊಳ್ತೀನಿ ಎಂದು ಸಂಜ್ಞೆಯಲ್ಲಿ ಹೇಳಿದೆ. ಆ ಮಗುವೇ ಗೌತಮ್ ಮಗಳು ಎನ್ನೋ ಥರ ಧಾರಾವಾಹಿ ಪ್ರೋಮೋದಲ್ಲಿ ತೋರಿಸಲಾಗಿದೆ. ದುರಂತ ಎಂದರೆ ಈ ವಿಷಯ ಗೌತಮ್ಗಾಗಲೀ, ಆ ಮಗುವಿಗಾಗಲೇ ಗೊತ್ತೇ ಇಲ್ಲ.</p><img><p>ಬೇರೆ ವಿಧಿ ಇಲ್ಲದೆ ಗೌತಮ್ ಆ ಹೆಣ್ಣು ಮಗುವನ್ನು ತನ್ನ ಜೊತೆ ಇಟ್ಟುಕೊಂಡು ಸಾಕಬಹುದು. ನಾಳೆ ಅವಳ ಪಾಲಕರು ಬಂದರೆ ಆ ಮಗುವನ್ನು ಕಳಿಸಿಕೊಡೋಣ ಎಂದುಕೊಂಡಿರಬಹುದು. ಇನ್ನೊಂದು ಕಡೆ ತನ್ನ ಮಗಳು ಎಲ್ಲಿ ಅಂತ ಗೌತಮ್ ಹುಡುಕಾಟ ಮಾಡುತ್ತಿದ್ದಾನೆ. ಆಮೇಲೆ ನನ್ನ ಮಗಳು, ಈಗ ನನ್ನ ಜೊತೆಗೆ ಇರುವ ಈ ಮಗಳು ಇಬ್ಬರೂ ಒಂದೇ ಎಂದು ಗೊತ್ತಾಗಬಹುದು. ಆ ಮಗುವಿಗೆ ತಂದೆ-ತಾಯಿ ಇವರೇ ಎನ್ನೋದು ಗೊತ್ತಿಲ್ಲ, ಗೌತಮ್ಗೂ ಕೂಡ ಆ ಮಗು ನನ್ನ ಮಗು ಎನ್ನೋದು ಗೊತ್ತಿಲ್ಲ. ಇದು ದುರಂತವೇ ಸರಿ.</p><img><p>ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ.</p>
Source link
Amruthadhaare Serial: ಕರ್ಮ ಅಂದ್ರೆ ಇದೇ ಇರಬೇಕು; ಈ ರೀತಿ ಮಾತ್ರ ನೋಡೋಕೆ ಆಗ್ತಿಲ್ಲ ಎಂದ ವೀಕ್ಷಕರು!