
<p>Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ವಿವಾಹ ವಾರ್ಷಿಕೋತ್ಸವ ಬಂದಿದೆ. ಇವರಿಬ್ಬರೂ ದೂರ ಇದ್ದರೂ ಕೂಡ ಪ್ರೀತಿ ಮಾಡುತ್ತಿದ್ದಾರೆ. ಈಗ ಇದನ್ನೆಲ್ಲ ನೋಡಿದರೆ ಈ ಜೋಡಿ ಒಂದಾಗುವ ಲಕ್ಷಣ ಕಾಣುತ್ತಿದೆ. ಹೊಸ ಪ್ರೋಮೋ ರಿಲೀಸ್ ಆಗಿದೆ.</p><img><p>ಈ ಜೋಡಿ ಒಂದೇ ಮನೆಯಲ್ಲಿದ್ದಾಗ ಗೌತಮ್, ಭೂಮಿಕಾಗೆ ಹೂವು ಕೊಡಿಸುತ್ತಿದ್ದನು. ಭೂಮಿಕಾಗೆ ಹೂವು ಅಂದರೆ ತುಂಬ ಇಷ್ಟ. ಆದರೆ ಗೌತಮ್ಗೆ ಹೂವು ಅಂದರೆ ಅಲರ್ಜಿ. ಒಮ್ಮೆಯಂತೂ ಭೂಮಿಕಾಗೋಸ್ಕರ ಇಡೀ ರೂಮ್ನ್ನು ಹೂವಿನಲ್ಲಿ ಅಲಂಕಾರ ಮಾಡಿದ್ದನು. ಆಗ ಗೌತಮ್ ಅಲರ್ಜಿ ಮಾತ್ರೆ ತಗೊಂಡಿದ್ದನು.</p><img><p>ಈಗ ಇವರಿಬ್ಬರು ಒಂದೇ ವಠಾರದಲ್ಲಿದ್ದಾರೆ. ಗೌತಮ್, ಭೂಮಿಕಾಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇವರಿಬ್ಬರು ಮದುವೆಯ ಫೋಟೋ ನೋಡಿಕೊಂಡು ಪರಸ್ಪರ ಮನಸ್ಸಿನಲ್ಲಿ ಶುಭಾಶಯ ಕೋರಿದ್ದಾರೆ.</p><img><p>ವಿವಾಹ ವಾರ್ಷಿಕೋತ್ಸವ ಎಂದು ಗೌತಮ್, ತನ್ನ ವಠಾರದಲ್ಲಿರುವವರಿಗೆ ಹೂವನ್ನು ಗಿಫ್ಟ್ ನೀಡಿದ್ದಾನೆ. ಮಲ್ಲಿಗೆ ಹೂವನ್ನು ಭೂಮಿಕಾಗೆ ಕೊಟ್ಟ ಭೂಮಿ, “ಬಾವ ಎಲ್ಲರಿಗೂ ಹೂವು ಕೊಡಿಸಿದ್ದಾರೆ, ನಿಮಗೆ ಬೇಕಿದ್ರೆ ತಗೋಳಿ” ಎಂದು ಹೇಳಿದ್ದಾರೆ. ಇದನ್ನು ನೋಡಿ ಭೂಮಿ ಖುಷಿಪಟ್ಟಿದ್ದಾಳೆ.</p><img><p>ಗೌತಮ್ ಹಾಗೂ ಭೂಮಿಕಾರನ್ನು ಒಂದು ಮಾಡಬೇಕು ಎಂದು ಲಕ್ಷ್ಮೀಕಾಂತ್ ಮಾವ, ಆನಂದ್, ಮಲ್ಲಿ, ಕಾವೇರಿ ಒಂದಾಗಿದ್ದಾರೆ. ವಿವಾಹ ವಾರ್ಷಿಕೋತ್ಸವದ ದಿನ ಇವರಿಬ್ಬರ ಮುಖಾಮುಖಿ ಮಾಡಲು ಯೋಜನೆ ರೆಡಿಯಾಗಿದೆ. ಗೌತಮ್, ಭೂಮಿಕಾ ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಿದರೆ ಇವರಿಬ್ಬರು ಪಕ್ಕಾ ಒಂದಾಗ್ತಾರೆ.</p><img><p>ಒಂದು ಕಡೆ ಜಯದೇವ್, ಎಂಎಲ್ಎ, ಶಕುಂತಲಾ ಸೇರಿಕೊಂಡು ಗೌತಮ್, ಭೂಮಿಕಾರನ್ನು ಟಾರ್ಗೆಟ್ ಮಾಡಿದ್ದಾರೆ. ಗೌತಮ್ ಕುಟುಂಬ ಕಣ್ಣೀರಲ್ಲಿ ಕೈತೊಳೆಯಬೇಕು ಎನ್ನೋದು ಇವರ ಗುರಿಯಾಗಿದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.</p><img><p>ಗೌತಮ್ ಭೂಮಿ ಬೇಗ ಒಂದಾಗಬೇಕು. ಅವರ ಅವಳಿ ಜವಳಿ ಮಕ್ಕಳು, ಭಾಗ್ಯಮ್ಮ, ಸುಧಾ ಫ್ಯಾಮಿಲಿ, ಆನಂದ್ ಫ್ಯಾಮಿಲಿ ಎಲ್ಲರನ್ನು ಒಟ್ಟಾಗಿ ನೋಡಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ.</p>
Source link
Amruthadhaare Serial: ಗೌತಮ್, ಭೂಮಿಕಾ ಬದುಕಿನಲ್ಲಿ ಮತ್ತೊಂದು ಊಹಿಸದ ತಿರುವು! ವೀಕ್ಷಕರನ್ನು ಕಾಪಾಡಪ್ಪಾ..!