Amruthadhaare: ಭೂಮಿಕಾ ಸತ್ಯ ಬಾಯ್ಬಿಟ್ಟ ಹೊತ್ತಲ್ಲೇ ಅನಾಹುತ: ಜೈದೇವನ ಕೈಗೆ ಸಿಕ್ಕೇಬಿಟ್ಟಿತು ಆ ಫೋಟೋ!

Amruthadhaare:  ಭೂಮಿಕಾ ಸತ್ಯ ಬಾಯ್ಬಿಟ್ಟ ಹೊತ್ತಲ್ಲೇ ಅನಾಹುತ: ಜೈದೇವನ ಕೈಗೆ ಸಿಕ್ಕೇಬಿಟ್ಟಿತು ಆ ಫೋಟೋ!



Amruthadhaare:  ಭೂಮಿಕಾ ಸತ್ಯ ಬಾಯ್ಬಿಟ್ಟ ಹೊತ್ತಲ್ಲೇ ಅನಾಹುತ: ಜೈದೇವನ ಕೈಗೆ ಸಿಕ್ಕೇಬಿಟ್ಟಿತು ಆ ಫೋಟೋ!
ಅಜ್ಜಿ ಮತ್ತು ಭಾಗ್ಯಮ್ಮನ ಯೋಜನೆಯಿಂದ ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಬಂದಿದೆ. ಭೂಮಿಕಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಇತ್ತ ಜೈದೇವನಿಗೆ ಆಕಾಶ್ ಗೌತಮ್ ಮಗ ಎಂಬ ಸತ್ಯ ಫೋಟೋ ಮೂಲಕ ತಿಳಿದುಬಂದಿದೆ. ಅತ್ತ ಅಜ್ಜಿಯ ಆಸ್ತಿ ಕಬಳಿಸುವ ಜೈದೇವನ ಸಂಚು ಕೂಡ ವಿಫಲವಾಗಿದೆ.<img><p>ಅಮೃತಧಾರೆ (Amruthadhaare Serial) ಸೀರಿಯಲ್​ನಲ್ಲಿ ಅಜ್ಜಿ ಮತ್ತು ಭಾಗ್ಯಮ್ಮ ಮಾಡಿದ ಡ್ರಾಮಾದಿಂದಾಗಿ ಈಗ ಗೌತಮ್​ ಮತ್ತು ಭೂಮಿಕಾ ಒಂದಾಗುವ ಕಾಲ ಕೂಡಿ ಬಂದಿದೆ.</p><img><p>ಮಿಂಚು ಮತ್ತು ಆಕಾಶ್​ ಕೂಡ ಇಬ್ಬರನ್ನೂ ಅಮ್ಮ-ಅಪ್ಪ ಎಂದು ಹೇಳಿ ಖುಷಿ ಪಟ್ಟಿದ್ದಾರೆ. ಅದೇ ಮುಂದುವರೆಯಲಿ ಎನ್ನುವ ಆಸೆ ಅವರದ್ದು. ಅದೇ ಇನ್ನೊಂದೆಡೆ ಅಜ್ಜಿ ಕೂಡ ಇವರಿಬ್ಬರನ್ನೂ ಒಂದು ಮಾಡಲು ಇನ್ನಷ್ಟು ಪ್ಲ್ಯಾನ್​ ಮಾಡುತ್ತಿದ್ದಾಳೆ.</p><img><p>ಅದೇ ಇನ್ನೊಂದೆಡೆ, ಭೂಮಿಕಾಗೆ ಈಗ ಗೌತಮ್​ನ ಬಿಟ್ಟು ಇರಲಾಗದ ಎಂದು ಅನ್ನಿಸತೊಡಗಿದೆ. ಇದೇ ವಿಷಯವನ್ನು ಆಕೆ ಮಲ್ಲಿ ಎದುರೂ ಹೇಳಿದ್ದಾಳೆ. ನಾನು ಗೌತಮ್​ ಜೊತೆಯಾಗಿ ಇರಬೇಕು ಎಂದು ಬಯಸುವುದಾಗಿ ಕೊನೆಗೂ ಬಾಯಿ ಬಿಟ್ಟಿದ್ದಾಳೆ. ಸತ್ಯವನ್ನು ಆಕೆ ಹೇಳಿದ್ದಾಳೆ.</p><img><p>ಆದರೆ ಅಷ್ಟರಲ್ಲಿಯೇ ಕೆಡಿ ಜೈದೇವನ ಕೈಗೆ ಭೂಮಿಕಾ, ಆಕಾಶ್​ ಮತ್ತು ಮಲ್ಲಿ ಇರುವ ಫೋಟೋ ಸಿಕ್ಕಿಬಿಟ್ಟಿದೆ. ಫೋಟೋಶೂಟ್​ ಸಮಯದಲ್ಲಿ ಮಿಂಚು ಕೈಯಿಂದ ಆ ಫೋಟೋ ಕೆಳಕ್ಕೆ ಬಿದ್ದಿತ್ತು. ಅದನ್ನು ನೋಡಿ ಅವನಿಗೆ ಆಕಾಶ್​ ಗೌತಮ್​ ಮಗ ಎನ್ನುವ ಸತ್ಯ ತಿಳಿದಿದೆ.</p><img><p>ಅದೇ ಇನ್ನೊಂದೆಡೆ, ಅಜ್ಜಿ ಕೂಡ ತನ್ನೆಲ್ಲಾ ಆಸ್ತಿಯನ್ನು ಇದಾಗಲೇ ಗೌತಮ್​ ಹೆಸರಿಗೆ ಮಾಡಿದ್ದಾಳೆ. ಜೈದೇವನ ಕುತಂತ್ರ ಬುದ್ಧಿ ಅವನಿಗೇ ಉಲ್ಟಾ ಹೊಡೆದಿದೆ. ಅಜ್ಜಿಗೆ ನಿದ್ದೆ ಬರುವ ಮಾತ್ರೆ ಕೊಟ್ಟು ಸಹಿ ಹಾಕಿಸಿಕೊಳ್ಳಲು ನೋಡಿದ್ದ ಜೈದೇವ. ಆದರೆ ಅಜ್ಜಿ ಅದನ್ನು ತಿಂದೇ ಇರಲಿಲ್ಲ. ಆದರೆ ಎಡಗೈ ಬದಲು ಜೈದೇವ ಗಡಿಬಿಡಿಯಲ್ಲಿ ಬಲಗೈ ಬೆರಳಚ್ಚನ್ನು ಹಾಕಿಕೊಂಡಿದ್ದರಿಂದ ಅಜ್ಜಿ ಸುಮ್ಮನೇ ಇದ್ದಳು!</p>



Source link

Leave a Reply

Your email address will not be published. Required fields are marked *