
<p>ಗೌತಮ್ ಮತ್ತು ಭೂಮಿಕಾ ಒಂದಾದರೂ ‘ಅಮೃತಧಾರೆ’ ಧಾರಾವಾಹಿ ಮುಗಿದಿಲ್ಲ. ತಾಯಿಯ ಮಾತಿನಿಂದ ಪ್ರೇರಿತನಾದ ಗೌತಮ್ ತನ್ನ ಸಾಮ್ರಾಜ್ಯವನ್ನು ಮರುನಿರ್ಮಿಸಲು ಸಿದ್ಧನಾಗಿದ್ದಾನೆ. ಇತ್ತ, ಐಷಾರಾಮಿ ಜೀವನ ನಡೆಸುತ್ತಿರುವ ಜೈದೇವ ಬೀದಿಗೆ ಬೀಳುವ ಲಕ್ಷಣಗಳಿದೆ. ಮುಂದಿದೆ ರೋಚಕ ಸಂಚಿಕೆ</p><img><p>ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್ ಮತ್ತು ಭೂಮಿಕಾ ಒಂದಾಗುವ ಮೂಲಕ ಸೀರಿಯಲ್ ಇನ್ನೇನು ಎಂಡ್ ಆಗತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಪಿಚ್ಚರ್ ಅಭೀ ಬಾಕಿ ಹೈ ಎನ್ನುವಂತೆ, ಸೀರಿಯಲ್ ಇನ್ನೂ ಮುಂದುವರೆಯುತ್ತಿದೆ.</p><img><p>ಕಷ್ಟಪಟ್ಟು ಮೇಲೆ ಬರುವವರು ಇರುವ ಸ್ವಲ್ಪ ಹಣದಲ್ಲಿಯೇ ದೊಡ್ಡ ಸಾಮ್ರಾಜ್ಯ ನಿರ್ಮಿಸಬಲ್ಲರು, ಬಿಟ್ಟಿಗಾಗಿ ಕಾಯುತ್ತಾ ಕುಳಿತುಕೊಳ್ಳುವವರು ಶ್ರೀಮಂತಿಕೆಯನ್ನು ಬಳುವಳಿಯಾಗಿ ಕೊಟ್ಟರೂ ಕೊನೆಗೆ ಬರುವುದು ರಸ್ತೆಗೇನೇ ಎನ್ನುವ ಮಾತಿನಂತೆ, ಇದೀಗ ಗೌತಮ್ ಮತ್ತೆ ಗೌತಮ್ ದಿವಾನ್ ಆಗುವ ಕಾಲ ಸನ್ನಿಹಿತವಾಗಿದೆ.</p><img><p>ಇದೀಗ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಗೌತಮ್ ಅಮ್ಮ ಭಾಗ್ಯಮ್ಮ, ನೀನು ಎಷ್ಟೋ ಮಕ್ಕಳಿಗೆ ಆಸರೆಯಾದವನು, ಎಷ್ಟೋ ಜನರಿಗೆ ಬೆಳಕಾದವನು. ಮತ್ತೆ ಅದೇ ನಿನ್ನಿಂದ ನಾನು ನಿರೀಕ್ಷಿಸುತ್ತೇನೆ. ಮತ್ತೆ ನೀನು ಮೊದಲಿನಿಂದಲೇ ಆಗಬೇಕು ಎಂದಿದ್ದಾಳೆ.</p><img><p>ಇದನ್ನು ಕೇಳಿ ಗೌತಮ್ಗೆ ಅಮ್ಮನ ಮಾತು ಸರಿ ಎನ್ನಿಸಿದೆ. ಇದನ್ನು ನೋಡಿದರೆ, ಖಂಡಿತವಾಗಿಯೂ ಗೌತಮ್ ಮತ್ತೆ ತನ್ನ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವಲ್ಲಿ ಎರಡು ಮಾತೇ ಇಲ್ಲ.</p><img><p>ಅತ್ತ, ಬಿಟ್ಟಿಯಾಗಿ ಸಿಕ್ಕಿರುವ ಶ್ರೀಮಂತಿಕೆಯಲ್ಲಿ ತೇಲಾಡುತ್ತಿರುವ ಜೈದೇವ, ಐಷಾರಾಮಿ ಜೀವನ ನಡೆಸುತ್ತಾ ಇದ್ದಬಿದ್ದದ್ದನ್ನೆಲ್ಲಾ ಲೂಟಿ ಮಾಡುತ್ತಿದ್ದಾನೆ. ಕೆಲಸ ಮಾಡುವುದನ್ನು ಬಿಟ್ಟು ಮಲ್ಲಿಯ ಜೀವನ ಹಾಳು ಮಾಡಲು ಅವಳ ಹಿಂದೆ ಬಿದ್ದಿದ್ದಾನೆ.</p><img><p>ಆದ್ದರಿಂದ ಆತ ಮತ್ತೆ ಬೀದಿಗೆ ಬೀಳುವಲ್ಲಿ ಸಂದೇಹವೇ ಇಲ್ಲ. ಈ ಮೂಲಕ ಕಷ್ಟಪಟ್ಟು ದುಡಿದರೆ ಮಾತ್ರ ಮೇಲೆ ಬರಲು ಸಾಧ್ಯ, ಎಲ್ಲವನ್ನೂ ಬಿಟ್ಟಿಯಾಗಿ ಕೊಡಲಿ ಎನ್ನುವ ಜನರು ಹಾಗೆಯೇ ಇದ್ದುಬಿಡುತ್ತಾರೆ ಎನ್ನುವುದನ್ನು ತೋರಿಸಲು ಮುಂದಾಗಿದೆ ಅಮೃತಧಾರೆ ಸೀರಿಯಲ್.</p>
Source link
Amruthadhaare ರೋಚಕ ಸಂಚಿಕೆ: ಮರಳಲಿದೆ ಗೌತಮ್ ದಿವಾನ್ ಸಾಮ್ರಾಜ್ಯ- ಬಿಟ್ಟಿ ತಿಂದವರು ಬೀದಿಗೆ!