
ಅಮೃತಧಾರೆ ಸೀರಿಯಲ್ನಲ್ಲಿ ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗುತ್ತಾನೆ. ಅಲ್ಲಿ ಸಹೋದರ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ. ಈ ಘಟನೆಯಿಂದ ಕಥೆ ರೋಚಕ ತಿರುವು ಪಡೆದಿದೆ.<img><p>ಅಮೃತಧಾರೆ ಸೀರಿಯಲ್ನಲ್ಲಿ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ವರ್ಷಗಳ ಬಳಿಕ ಗೌತಮ್ ಮತ್ತು ಶಕುಂತಲಾ ಮುಖಾಮುಖಿಯಾಗಿದ್ದಾರೆ. ತನ್ನೆಲ್ಲಾ ಆಸ್ತಿಯನ್ನು ಬಿಟ್ಟು ಬಂದಿರುವ ಗೌತಮ್ಗೆ ಆ ಮನೆಗೆ ಹೋಗುವುದು ಅನಿವಾರ್ಯವಾಗಿ ಹೋಗಿದ್ದ. ಆದರೆ ಅಲ್ಲಿ ಆದದ್ದೇ ಬೇರೆ.</p><img><p>ಅಪ್ಪನ ಕಾರ್ಯ ಇದ್ದುದರಿಂದ, ಭೂಮಿಕಾ ಗೌತಮ್ಗೆ ಈ ಬಗ್ಗೆ ನೆನಪಿಸಿದ್ದಾಳೆ. ಅಪ್ಪನ ಕಾರ್ಯವನ್ನು ಮಿಸ್ ಮಾಡಬಾರದು ಎನ್ನುವ ಕಾರಣಕ್ಕೆ ಗೌತಮ್, ಮನಸ್ಸಿಲ್ಲದಿದ್ದರೂ ಅಪ್ಪನಿಗಾಗಿ ಆ ಮನೆಯ ಮೆಟ್ಟಿಲು ಏರಿದ್ದಾನೆ.</p><img><p>ಅವನು ಬಂದದ್ದು ನೋಡಿ ಶಕುಂತಲಾಗೂ ಶಾಕ್ ಆಗಿದೆ. ಇನ್ನು ಜೈದೇವ್ ಸುಮ್ಮನೇ ಇರ್ತಾನಾ. ಅಪ್ಪನ ಕಾರ್ಯಕ್ಕೆ ಬಂದಿರುವುದಕ್ಕೆ ಸಿಡಿಮಿಡಿಗೊಂಡಿದ್ದಾನೆ. ಗೌತಮ್ಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದಾನೆ.</p><img><p>ಅಪ್ಪನ ಸಮಾಧಿಗೆ ಗೌತಮ್ ಮತ್ತು ಭೂಮಿಕಾ ಪೂಜೆ ಸಲ್ಲಿಸಲು ಹೋದಾಗ, ಅವರು ನಿನ್ನ ಅಪ್ಪ ಅಲ್ಲ, ನನ್ನ ಅಪ್ಪ, ನಿನಗ್ಯಾವ ಹಕ್ಕಿದೆ ಎಂದು ಕೊಬ್ಬಿನಿಂದ ಮಾತನಾಡಿರುವ ಜೈದೇವ, ಪೂಜೆಗೆಂದು ತಂದಿದ್ದ ಹೂವಿನ ಬಟ್ಟಲನ್ನು ಬೀಸಾಡಿದ್ದಾನೆ.</p><img><p>ಅಪ್ಪನ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟು ನೆತ್ತಿಗೇರಿಸಿಕೊಂಡ ಗೌತಮ್, ಚಟಾರ್ ಎಂದು ಗೌತಮ್ನ ಕೆನ್ನೆಗೆ ಬಾರಿಸಿ, ನನ್ನ ಬಗ್ಗೆ ಏನಾದರೂ ಹೇಳು, ಅಪ್ಪನ ಬಗ್ಗೆ ಮಾತನಾಡಿದರೆ ಅಷ್ಟೇ ಎಂದಿದ್ದಾನೆ. ಅಲ್ಲಿದ್ದವರೆಲ್ಲರೂ ಶಾಕ್ ಆಗಿದ್ದಾರೆ.</p><img><p>ಒಂದು ಏಕೆ ಹೊಡೆದೆ, ಇನ್ನೊಂದಿಷ್ಟು ಕೆನ್ನೆಗೆ ಬಿಡಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪನ ತಿಥಿ ಕಾರ್ಯದಲ್ಲಿ ಸಹೋದರರು ಇಬ್ಬರೂ ಸಿಡಿದೆದ್ದಿದ್ದು, ಈಗ ಸೀರಿಯಲ್ ಇನ್ನಾವ ಟರ್ನ್ ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ.</p>
Source link
Amruthadhaare ರೋಚಕ ಟ್ವಿಸ್ಟ್: ವರ್ಷಗಳ ಬಳಿಕ ಗೌತಮ್-ಶಕುಂತಲಾ ಮುಖಾಮುಖಿ; ಆಗಿದ್ದೇ ಬೇರೆ