Annayya Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್‌ ನ್ಯಾಚುಲರ್‌ ಶಕ್ತಿ ಬಂದಿದ್ದು ಹೇಗೆ?

Annayya Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್‌ ನ್ಯಾಚುಲರ್‌ ಶಕ್ತಿ ಬಂದಿದ್ದು ಹೇಗೆ?



Annayya Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್‌ ನ್ಯಾಚುಲರ್‌ ಶಕ್ತಿ ಬಂದಿದ್ದು ಹೇಗೆ?
<p>Annayya Serial Kannada: ಅಣ್ಣಯ್ಯ ಹಾಗೂ ಕರ್ಣ ಧಾರಾವಾಹಿ ಸಂಗಮವಾಗಿದೆ. ಕರ್ಣ ಟೀಂ ಈಗ ಮಾರಿಗುಡಿಗೆ ಬಂದಿದೆ. ಮಾರಿಗುಡಿಯಲ್ಲಿ ಜಾತ್ರೆ ನಡೆಯುತ್ತಿದೆ. ಶಿವು ವಿರುದ್ಧ ದುಷ್ಟಶಕ್ತಿಯೊಂದು ಹರಸಾಹಸ ಮಾಡುತ್ತಿದೆ. ಈಗ ಶಿವು ಸೂಪರ್ ನ್ಯಾಚುರಲ್‌ ಶಕ್ತಿ ಪಡೆದಿದ್ದಾನೆ.</p><img><p>ಹೌದು, ಮಾರಿಗುಡಿಗೂ ನಿಧಿ-ನಿತ್ಯಾ ತಂದೆ-ತಾಯಿ ಕೊಲೆಗೆ ಸಂಬಂಧ ಇದೆ. ಇದರ ಹಿಂದಿರೋದು ಕರ್ಣನ ಅತ್ತೆ ನಯನತಾರಾ. ಕರ್ಣನ ಮನೆಯವರು ಮಾರಿಗುಡಿಗೆ ಹೋದರೆ ತನ್ನ ಸತ್ಯ ಗೊತ್ತಾಗುತ್ತದೆ ಎಂದು ಭಾವಿಸುತ್ತಾಳೆ. ಮಾರಿಗುಡಿ ಜಾತ್ರೆಗೆ ಬಂದವರನ್ನು ತಡೆಯೋದು ಅವಳ ಗುರಿ.</p><img><p>ಈಗ ಜಾತ್ರೆ ನಡೆಯಬೇಕು, ಶಿವು ಅದರ ಸಾರಥ್ಯ ವಹಿಸಬೇಕು. ಒಂದು ಕಡೆ ನಯನತಾರಾ ತನ್ನ ರೌಡಿಗಳನ್ನು ಕಳಿಸುತ್ತಿದ್ದಾಳೆ. ಇನ್ನೊಂದು ಕಡೆ ದೇವಿ ಹಾಗೂ ದೇವಿ ಪುತ್ರನ ದಿಗ್ಬಂಧನ ಕೂಡ ನಡೆಯುತ್ತಿದೆ. ಆದರೆ ಮಾಟ-ಮಂತ್ರ ಮಾಡಿದವರು ಸತ್ತಿದ್ದಾರೆ.</p><img><p>ಶಿವುಗೆ ಕರ್ಣ ಸಾಥ್‌ ಕೊಟ್ಟಿದ್ದಾನೆ. ಶಿವು ಪೂಜೆಯನ್ನು ತಡೆಯೋಕೆ ಬಂದವರನ್ನು ಕರ್ಣ ತಡೆದಿದ್ದಾನೆ. ಒಟ್ಟಿನಲ್ಲಿ ಇಬ್ಬರು ಹೀರೋಗಳು ಸೇರಿಕೊಂಡಿದ್ದು, ವೀಕ್ಷಕರಿಗೆ ಹಬ್ಬ ಆಗಿದೆ. ಈ ಜಾತ್ರೆ ನೆಪದಲ್ಲಿ ಯಾವ ಸತ್ಯ ಹೊರಬರಲಿದೆ ಎಂದು ಕಾದು ನೋಡಬೇಕಿದೆ. ಜಾತ್ರೆಯ ನಂತರ ಶಿವು ಕೆರೆಯಿಂದ ಎದ್ದು ಎತ್ತರಕ್ಕೆ ಹಾರುತ್ತಾನೆ. ಶಿವುಗೆ ಸೂಪರ್‌ ನ್ಯಾಚುರಲ್‌ ಶಕ್ತಿ ಬಂತಾ ಎಂಬ ಡೌಟ್‌ ಕೂಡ ಬರುವುದು.</p><img><p>ಶಿವು ಈ ಹಿಂದೆ ದೊಡ್ಡ ರೌಡಿಯಾಗಿದ್ದನು. ಈಗ ಮುಗ್ಧ, ಸಾಧು ಪ್ರಾಣಿ ಎನ್ನೋ ಥರ ಬದುಕುತ್ತಿದ್ದಾನೆ. ಶಿವು ಜೀವನದಲ್ಲಿ ಏನು ನಡೆದಿದೆ? ಏನಾಯ್ತು ಎಂದು ರಿವೀಲ್‌ ಆಗಬೇಕಿದೆ. ಸತ್ಯ ಗೊತ್ತಾಯ್ತು ಎಂದು ಪಾರು ಅವನಿಂದ ದೂರ ಹೋಗ್ತಾಳಾ ಎಂಬ ಕುತೂಹಲವೂ ಇದೆ.</p><img><p>ಶಿವು ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್‌ ಅವರು ನಟಿಸಿದ್ದಾರೆ. ಉಳಿದಂತೆ ನಮ್ರತಾ ಗೌಡ, ಭವ್ಯಾ ಗೌಡ, ಗಾಯತ್ರಿ ಪ್ರಭಾಕರ್‌ ಅವರು ನಟಿಸುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *