
ಆತನ ಇತಿಹಾಸದ ಬಗ್ಗೆ ಅರಿಯುತ್ತಲೇ ಪಾರುಗೆ ಶಾಕ್ ಆಗಿದೆ. ಈ ಹಿಂದೆ ಶಿವು ರೌಡಿಯಾಗಿದ್ದ ಎನ್ನುವುದು ತಿಳಿದಿದೆ. ಆದರೆ ದುಷ್ಟರ ದಮನಕ್ಕೆ ಆತ ರೌದ್ರನಾಗಿದ್ದ ಎನ್ನುವುದು ನಿಜವಾಗಿರುವ ಸತ್ಯ. ಆದರೆ ಇದೀಗ ಮತ್ತೆ ಅದೇ ದರ್ಶನದಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆ ಅವನಿಗೆ ಎದುರಾಗಿದೆ. ಶಿವು ಸಹೋದರಿ ರತ್ನಳ ಗೆಳತಿಯೊಬ್ಬಳಿಗೆ ಮೆರಿಟ್ ಅಲ್ಲಿ ಸೀಟ್ ಸಿಕ್ಕಿದ್ದು, ಅದನ್ನು ಕೇಳೋದಕ್ಕೆ ಸರ್ಕಾರಿ ಕಚೇರಿಗೆ ಹೋದ್ರೆ, ಅಲ್ಲಿ ಅಧಿಕಾರಿ, ಕೆಟ್ಟದಾಗಿ ಮಾತನಾಡಿ, ನಾನು ಹೇಳಿದ್ದನ್ನು ಮಾಡಿದ್ರೆ ಮಾತ್ರ ಕೆಲಸ ಕೋಡೋದು ಅಂದಿದ್ದಾನೆ. ಇದರಿಂದ ರತ್ನ ಗೆಳತಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.