
ಅಂತರಘಟ್ಟೆ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಪಾನಕದ ಬಂಡಿ ಎಳೆಯುವ ಸ್ಪರ್ಧೆಯಲ್ಲಿ ಎತ್ತುಗಳ ಹನಿವಾರ ನೋಡಿದರೆ ಎದೆಝಲ್ಲೆನ್ನುವಂತಿತ್ತು. ಎತ್ತಿನಗಾಡಿಗಳ ನಡುವಿನ ತೀವ್ರ ಪೈಪೋಟಿಯಿಂದಾಗಿ ವೇಗವಾಗಿ ಬಂದ ಗಾಡಿಯೊಂದು ನಿಂತಿದ್ದ ತೇರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಎತ್ತು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ನೆರೆದಿದ್ದ ಭಕ್ತರಲ್ಲಿ ಆತಂಕ ಮೂಡಿಸಿತು. ಸುಮಾರು ಅರ್ಧ ಗಂಟೆಯ ಕಾಲ ಎತ್ತು ಏಳಲಾಗದೆ ಒದ್ದಾಡಿದ್ದು, ನಂತರ ಮಾಲೀಕರು ಮತ್ತು ಸ್ಥಳೀಯರು ಎತ್ತನ್ನು ಸಮಾಧಾನಪಡಿಸಿ ಎಬ್ಬಿಸಿದ ಬಳಿಕ ಪಾನಕದ ಬಂಡಿ ಮುಂದೆ ಸಾಗಿದೆ.