Rajamouli: ಚಿರಂಜೀವಿ ಚಿತ್ರದಿಂದ ಸಾಲದ ಸುಳಿಗೆ ಸಿಲುಕಿದ್ದ ನಿರ್ಮಾಪಕ: ರಾಜಮೌಳಿಗೆ ಧೈರ್ಯ ತುಂಬಿದ್ಹೇಗೆ? | Ss Rajamouli Reveals How Chiranjeevis Anji Movie Producer Inspired Him Gvd

Rajamouli: ಚಿರಂಜೀವಿ ಚಿತ್ರದಿಂದ ಸಾಲದ ಸುಳಿಗೆ ಸಿಲುಕಿದ್ದ ನಿರ್ಮಾಪಕ: ರಾಜಮೌಳಿಗೆ ಧೈರ್ಯ ತುಂಬಿದ್ಹೇಗೆ? | Ss Rajamouli Reveals How Chiranjeevis Anji Movie Producer Inspired Him Gvd



Rajamouli: ಚಿರಂಜೀವಿ ಚಿತ್ರದಿಂದ ಸಾಲದ ಸುಳಿಗೆ ಸಿಲುಕಿದ್ದ ನಿರ್ಮಾಪಕ: ರಾಜಮೌಳಿಗೆ ಧೈರ್ಯ ತುಂಬಿದ್ಹೇಗೆ? | Ss Rajamouli Reveals How Chiranjeevis Anji Movie Producer Inspired Him Gvd

ನಿರ್ದೇಶಕ ರಾಜಮೌಳಿ ಸದ್ಯ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ‘ವಾರಣಾಸಿ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು 1300 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ.

ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸಂದರ್ಶನವೊಂದರಲ್ಲಿ ಚಿರಂಜೀವಿ ನಟನೆಯ ‘ಅಂಜಿ’ ಸಿನಿಮಾ ಬಗ್ಗೆ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರ ಗ್ರಾಫಿಕ್ಸ್‌ನಿಂದ ಗಮನ ಸೆಳೆದಿತ್ತಾದರೂ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

ನಿರ್ದೇಶಕ ರಾಜಮೌಳಿ ಸದ್ಯ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ‘ವಾರಣಾಸಿ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು 1300 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ರಾಜಮೌಳಿ ಸಿನಿಮಾ ಎಂದರೆ ಇಂದು ವಿಶ್ವಾದ್ಯಂತ ಭಾರೀ ನಿರೀಕ್ಷೆಗಳಿವೆ. ತೆಲುಗು ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಜಮೌಳಿಗೆ ಸಲ್ಲುತ್ತದೆ.

ರಾಜಮೌಳಿ ಅವರಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ನೀಡಿದ ಕೆಲವೇ ಕೆಲವು ಪ್ರಮುಖರಿದ್ದಾರೆ. ಅವರಲ್ಲಿ ಒಬ್ಬರ ಬಗ್ಗೆ ರಾಜಮೌಳಿ ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ. ಕಷ್ಟಪಟ್ಟು ದುಡಿದು, ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಂಡು ಬೆಳೆದವರು ಯಾರೇ ಆಗಲಿ ತನಗೆ ಇಷ್ಟ ಎಂದು ರಾಜಮೌಳಿ ಹೇಳಿದ್ದಾರೆ.

ಅಂತಹವರಲ್ಲಿ ಮಲ್ಲೆಮಾಲ ಶ್ಯಾಮ್ ಪ್ರಸಾದ್ ರೆಡ್ಡಿ ಕೂಡ ಒಬ್ಬರು. ಶ್ಯಾಮ್ ಪ್ರಸಾದ್ ರೆಡ್ಡಿ ಅವರು ಚಿರಂಜೀವಿ ನಟನೆಯ ‘ಅಂಜಿ’ ಚಿತ್ರದ ನಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಸಂಪೂರ್ಣವಾಗಿ ಸಾಲದಲ್ಲಿದ್ದರು. ನಂತರ, ಸಾಲದಲ್ಲಿರುವಾಗಲೇ ‘ಅರುಂಧತಿ’ ಚಿತ್ರವನ್ನು ಪ್ರಾರಂಭಿಸಿದರು. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಲು ಹೊರಟರೂ, ಉತ್ತಮ ಗುಣಮಟ್ಟಕ್ಕಾಗಿ ಮತ್ತಷ್ಟು ಸಾಲ ಮಾಡಿದರು. ಕೊನೆಗೆ ‘ಅರುಂಧತಿ’ ಚಿತ್ರವನ್ನು ಅದ್ಭುತವಾಗಿ ತೆರೆಗೆ ತಂದರು.

ಟಾಲಿವುಡ್‌ನಲ್ಲಿ ಅಪ್ರತಿಮ ಕ್ರೇಜ್

ಸಿನಿಮಾದ ಮೇಲೆ ಇಷ್ಟೊಂದು ಪ್ಯಾಷನ್ ಇರುವವರು ಬಹಳ ಅಪರೂಪ. ನಾನು ಆ ಪರಿಸ್ಥಿತಿಯಲ್ಲಿದ್ದರೆ ಅಷ್ಟು ಧೈರ್ಯ ಮಾಡುತ್ತಿರಲಿಲ್ಲ. ‘ಅರುಂಧತಿ’ ಸಿನಿಮಾ ತನಗೂ ಧೈರ್ಯ ತುಂಬಿದ ಚಿತ್ರ ಎಂದು ರಾಜಮೌಳಿ ತಿಳಿಸಿದ್ದಾರೆ. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ಅರುಂಧತಿ’ ಚಿತ್ರವು ದೊಡ್ಡ ಬ್ಲಾಕ್‌ಬಸ್ಟರ್ ಆಯಿತು. ಈ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಟಾಲಿವುಡ್‌ನಲ್ಲಿ ಅಪ್ರತಿಮ ಕ್ರೇಜ್ ಗಳಿಸಿದರು.



Source link

Leave a Reply

Your email address will not be published. Required fields are marked *