ಸಂಕೇತ್ ಕೊ-ಲೆಗೆ ಕಾರಣ ಏನು? ಎರಡು ದಿನದ ಹಿಂದೆ ನಡೆದಿತ್ತಾ ಜಗಳ? ಎಸ್‌ಪಿ ಹೇಳಿದ್ದೇನು? 15 ಲಕ್ಷ ಪರಿಹಾರ ಘೋಷಣೆ | What Was The Reason For Shivamogga Student Sanketh S Murder Did The Fight Happen Two Days Ago What Did The Sp Say Mrq

ಸಂಕೇತ್ ಕೊ-ಲೆಗೆ ಕಾರಣ ಏನು? ಎರಡು ದಿನದ ಹಿಂದೆ ನಡೆದಿತ್ತಾ ಜಗಳ? ಎಸ್‌ಪಿ ಹೇಳಿದ್ದೇನು? 15 ಲಕ್ಷ ಪರಿಹಾರ ಘೋಷಣೆ | What Was The Reason For Shivamogga Student Sanketh S Murder Did The Fight Happen Two Days Ago What Did The Sp Say Mrq



ಸಂಕೇತ್ ಕೊ-ಲೆಗೆ ಕಾರಣ ಏನು? ಎರಡು ದಿನದ ಹಿಂದೆ ನಡೆದಿತ್ತಾ ಜಗಳ? ಎಸ್‌ಪಿ ಹೇಳಿದ್ದೇನು? 15 ಲಕ್ಷ ಪರಿಹಾರ ಘೋಷಣೆ | What Was The Reason For Shivamogga Student Sanketh S Murder Did The Fight Happen Two Days Ago What Did The Sp Say Mrq

ಶಿವಮೊಗ್ಗದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿ ಸಂಕೇತ್ ಕೊಲೆಗೆ ಕ್ರಿಕೆಟ್ ಪಂದ್ಯದ ಗಲಾಟೆಯೇ ಕಾರಣ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮೃತನ ಕುಟುಂಬಕ್ಕೆ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಶಿವಮೊಗ್ಗ: ಸೋಮವಾರ ರಾತ್ರಿ ನಡೆದ ಸಂಕೇತ್ ಕೊ*ಲೆಗೆ ಕ್ರಿಕೆಟ್ ಪಂದ್ಯ ಕಾರಣ ಎಂದು ಎಸ್‌ಪಿ ನಿಖಿಲ್ ಬಿ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಕ್ರಿಕೆಟ್ ಪಂದ್ಯವೊಂದು ನಡೆದಿತ್ತು. ಈ ಪಂದ್ಯ ಸಂಬಂಧ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಗಾಂಜಾ ಟೆಸ್ಟ್ ಗೆ ಒಳಪಡಿಸುತ್ತೇವೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ. ಗಾಂಜಾ ಹಾವಳಿ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಇಲ್ಲಿ ಒಂದು ಪೊಲಿಸ್ ಉಪಠಾಣೆಯನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ 15 ಲಕ್ಷ ಪರಿಹಾರ ಘೋಷಣೆ

ಮೃತ ಸಂಕೇತ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ, ಶಿಕ್ಷಣ ಇಲಾಖೆಯಿಂದ 5 ಲಕ್ಷ ನೀಡಲಾಗುತ್ತದೆ ಎಂದು ಸರ್ಕಾರದ ಪರವಾಗಿ ಪ್ರಭುಲಿಂಗ ಕವಳಿಕಟ್ಟೆ ಪರಿಹಾರ ಘೋಷಣೆ ಮಾಡಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಸಂಕೇತ ಮೃತರಾಗಿದ್ದರು. ಸಿಎಂ, ಉಸ್ತುವಾರಿ ಸಚಿವರೊಂದಿಗೆ ಮಾತಾಡಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಆರೋಪಗಳನ್ನು ಬಂಧಿಸಿಲಾಗಿದೆ. ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ, ಮೃತ ಸಂಕೇತ್ ಜೊತೆಗೆ ಗಾಯಾಳು ಆಗಿರುವ ಗಿರೀಶ್ ಗೆ ಪರಿಹಾರ ನೀಡಲಾಗುವುದು. ಮಾದಕ ವಸ್ತುಗಳ ಬಗ್ಗೆ ಸಾಕಷ್ಟು ಜಿಲ್ಲಾಡಳಿತದಿಂದ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು. ಈ ಬಡಾವಣೆಯಲ್ಲಿ ಉಪ ಪೊಲೀಸ್ ಠಾಣೆ ತೆರೆಯುವ ಬಗ್ಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ: Shivamogga: ಬೆಳಗ್ಗೆ ದೇವರಿಗೆ ಕೈ ಮುಗಿದು ಹೋದವನು ಹಿಂತಿರುಗಲಿಲ್ಲ: ಸಂಕೇತ್ ಪೋಷಕರ ಕಣ್ಣೀರು

Scroll to load tweet…

ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ಸಂಕೇತ್ ಸಾವಿನ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮುಸ್ಲಿಂ ಮುಖಂಡ ಕರೀಂ ಪಾಷಾ, ಹಿಂದೂ , ಮುಸಲ್ಮಾನರು ಈ ಭಾಗದಲ್ಲಿದ್ದೇವೆ. ನಿನ್ನೆ ಘಟನೆ ಅತ್ಯಂತ ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಿನ್ನೆಯಿಂದಲೂ ನಾವು ಕುಟುಂಬದೊಂದಿಗೆ ಇದ್ದೇವೆ ಮುಂದೆ ಇರುತ್ತೇವೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದೆ. ಪೊಲೀಸ್ ಚೌಕಿ ಅಥವಾ ಉಪ ಪೊಲೀಸ್ ಠಾಣೆ ತೆರೆಯುವ ಬಗ್ಗೆ ಒತ್ತಾಯಿಸಿದ್ದೇವೆ. ಈ ಘಟನೆ ನಡೆಯಬಾರದಾಗಿತ್ತು ದುರದೃಷ್ಟವಶಾತ್ ನಡೆದಿದೆ. ಬಾಲಕನನ್ನು ನಾವು ಹತ್ತಿರದಿಂದ ನೋಡಿದ್ದೇವೆ ಅವರ ತಂದೆಯು ಕೂಡ ನಮ್ಮೊಂದಿಗೆ ಅನೋನ್ಯವಾಗಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ

Scroll to load tweet…



Source link

Leave a Reply

Your email address will not be published. Required fields are marked *