ಚಾಮರಾಜನಗರ:ಹೃದಯಾಘಾತದಿಂದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಫಲಹಾರ ಪ್ರಭುದೇವ ಸ್ವಾಮೀಜಿ ಲಿಂಗೈಕ್ಯ | Phalahara Prabhudeva Swamiji Passed Away Due To Heart Attackv

ಚಾಮರಾಜನಗರ:ಹೃದಯಾಘಾತದಿಂದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಫಲಹಾರ ಪ್ರಭುದೇವ ಸ್ವಾಮೀಜಿ ಲಿಂಗೈಕ್ಯ | Phalahara Prabhudeva Swamiji Passed Away Due To Heart Attackv



ಚಾಮರಾಜನಗರ:ಹೃದಯಾಘಾತದಿಂದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಫಲಹಾರ ಪ್ರಭುದೇವ ಸ್ವಾಮೀಜಿ ಲಿಂಗೈಕ್ಯ | Phalahara Prabhudeva Swamiji Passed Away Due To Heart Attackv

ಚಾಮರಾಜನಗರ ಜಿಲ್ಲೆಯ ಎಂಟಳ್ಳಿ ಗ್ರಾಮದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬಂಡಹಳ್ಳಿ ದೊಡ್ಡಮಠದಲ್ಲಿ ನಡೆಯಲಿದೆ.

ಚಾಮರಾಜನಗರ (ಸೆ.15): ಚಾಮರಾಜನಗರ ಜಿಲ್ಲೆಯ ಎಂಟಳ್ಳಿ ಗ್ರಾಮದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ (64) ಅವರು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಕಳೆದ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಯವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಈ ದುಃಖದ ಸುದ್ದಿ ಜಿಲ್ಲೆಯಾದ್ಯಂತ ಭಕ್ತರಲ್ಲಿ ಆಘಾತ ಮೂಡಿಸಿದೆ. ಶ್ರೀ ಪ್ರಭುದೇವ ಸ್ವಾಮೀಜಿಯವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ಅಪಾರ ಭಕ್ತರನ್ನ ಹೊಂದಿದ್ದರು. ಇದೀಗ ಅವರು ದಿಡೀರ ಹೃದಯಾಘಾತದಿಂದ ಲಿಂಗೈಕ್ಯರಾಗಿರುವುದು ಭಕ್ತರು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು!

ಇಂದು ಮಧ್ಯಾಹ್ನ ಅಂತ್ಯಕ್ರಿಯೆ:

ಶ್ರೀ ಪ್ರಭುದೇವ ಸ್ವಾಮೀಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬಂಡಹಳ್ಳಿ ದೊಡ್ಡಮಠದಲ್ಲಿ ನಡೆಯಲಿದೆ. ಸ್ಥಳೀಯ ಭಕ್ತರು ಮತ್ತು ಗಣ್ಯರು ಸ್ವಾಮೀಜಿಯವರ ಅಂತಿಮ ದರ್ಶನ ಪಡೆಯಲು ಮಠಕ್ಕೆ ಆಗಮಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಳ ಆತಂಕ:

ಕರ್ನಾಟಕದಲ್ಲಿ ಕೋವಿಡ್ ನಂತರ ಹೃದಯಾಘಾತದ ಸಂಖ್ತೆ ಏರಿಕೆಯಾಗಿದ್ದು, ಜೀವನಶೈಲಿ ಬದಲಾವಣೆಗಳು ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ತಂಬಾಕು, ಮದ್ಯಪಾನ ಒತ್ತಡ ಆಹಾರಾಭ್ಯಾಸಗಳು ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿವೆ. ಆರೋಗ್ಯಕರ ಜೀವನಶೈಲಿ, ನಿಯಮಿತವಾಗಿ ಹೃದಯ ತಪಾಸಣೆ ಮೂಲಕ ಹೃದಯಾಘಾತವನ್ನು ತಪ್ಪಿಸಬಹುದಾಗಿದೆ.



Source link

Leave a Reply

Your email address will not be published. Required fields are marked *