Headlines

Drawing Competition: ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ? | Kannadaprabha Asianet Suvrana South Zone School Drawing Competition Gvd

Drawing Competition: ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ? | Kannadaprabha Asianet Suvrana South Zone School Drawing Competition Gvd



Drawing Competition: ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ? | Kannadaprabha Asianet Suvrana South Zone School Drawing Competition Gvd

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಿಮಿತ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸುತ್ತಿದೆ.

ಬೆಂಗಳೂರು (ಡಿ.15): ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಿಮಿತ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸುತ್ತಿದೆ. ಡಿ.20ರಂದು ಜ್ಞಾನಭಾರತಿ ಸಮೀಪದ ನಾಗದೇವನಹಳ್ಳಿ ರಿಂಗ್ ರಸ್ತೆಯಲ್ಲಿರುವ ಸಾಂದೀಪಿನಿ ಹೈಟೆಕ್ ಶಾಲೆಯಲ್ಲಿ ಈ ಸ್ಪರ್ಧೆ ನಡೆಯಲಿದೆ.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಾಗಿ ನಡೆಯುವ ಈ ಸ್ಪರ್ಧೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಸಾಂದೀಪಿನಿ ಹೈಟೆಕ್ ಶಾಲೆಯ ಸಹಯೋಗವಿದೆ. ಡಿ.20ರ ಬೆಳಗ್ಗೆ 10.30ಕ್ಕೆ ಸಾಂದೀಪಿನಿ ಹೈಟೆಕ್ ಶಾಲೆ ಆವರಣದಲ್ಲಿ ಈ ಸ್ಪರ್ಧೆ ಆರಂಭವಾಗಲಿದೆ. ಅದೇ ದಿನ ಚಿತ್ರಕಲೆಯ ಮೌಲ್ಯಮಾಪನ ಮುಗಿಸಿ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ವಲಯ ಮಟ್ಟದಲ್ಲಿ ಮೊದಲ ಮೂರು ಬಹುಮಾನ ಪಡೆಯುವವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.

ಚಿತ್ರಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.16ರ ಸಂಜೆ 4 ಗಂಟೆ ಒಳಗೆ ಈ ಸಂಖ್ಯೆಗೆ 9606447701 ಕರೆ ಮಾಡಿ ಅಥವಾ blrdrawing2025@gmail ಗೆ ಮೇಲ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಒಂದು ಶಾಲೆಯಿಂದ 8,9,10ನೇ ತರಗತಿಯ ವಿದ್ಯಾರ್ಥಿಗಳು ಪ್ರತಿ ತರಗತಿಗೆ ಇಬ್ಬರಂತೆ ಒಟ್ಟು 6 ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸ್ಪರ್ಧೆಯ ನಿಯಮಗಳು ಹೀಗಿವೆ

-ಚಿತ್ರಕಲೆ ಬಿಡಿಸಲು ನೀಡಲಾಗುವ ಸಮಯ 1 ಗಂಟೆ 30 ನಿಮಿಷದ ಅವಧಿ ನೀಡಲಾಗುವುದು.

-ಚಿತ್ರ ಬಿಡಿಸಲು ಅಗತ್ಯ ಇರುವ ಡ್ರಾಯಿಂಗ್ ಶೀಟ್ ಅನ್ನು ನಾವೇ ಒದಗಿಸಲಿದ್ದೇವೆ.

-ಅಗತ್ಯ ಇರುವ ಪೆನ್ಸಿಲ್, ಬಣ್ಣ ಹಾಗೂ ಇನ್ನಿತರ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು.

-ವಿದ್ಯಾರ್ಥಿಗಳ ಇಚ್ಚೆ ಮತ್ತು ಶಕ್ತಿ ಅನುಸಾರ ಕ್ರೆಯಾನ್ಸ್, ಸ್ಕೆಚ್ಪೆನ್, ಅಕ್ರಿಲಿಕ್ ಅಥವಾ ವಾಟರ್ ಕಲರ್ಸ್ ಬಳಸಿ ಚಿತ್ರ ಬಿಡಿಸಬಹುದು.

– ಚಿತ್ರ ಬಿಡಿಸಿದ ದಿನವೇ ಅದರ ಮೌಲ್ಯಮಾಪನ ಆಗಿ ಪ್ರಶಸ್ತಿ ಪ್ರಕಟಣೆ ಮತ್ತು ವಿತರಣೆ ನಡೆಯಲಿದೆ.

– ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

– ಪ್ರಥಮ, ದ್ವಿತೀಯ ಮತ್ತು ತೃತೀಯ ಎಂಬ ಮೂರು ಪ್ರಶಸ್ತಿಗಳಿರುತ್ತದೆ. ಇಬ್ಬರಿಗೆ ಸಮಾಧಾನಕರ ಬಹುಮಾನವು ಸಿಗಲಿದೆ.

– ವಲಯ ಮಟ್ಟದಲ್ಲಿ ಗೆಲುವು ಸಾಧಿಸುವ ಮೊದಲ ಮೂರು ವಿಜೇತರು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

– ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ವಲಯದ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

– ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು, ಶಿಕ್ಷಕರು ಅಥವಾ ಪೋಷಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.



Source link

Leave a Reply

Your email address will not be published. Required fields are marked *