Headlines

ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಣಕ್ಕಿಳಿದರೆ ನಾವೂ ರೆಡಿ, ಕೇರಳ ಕಾಂಗ್ರೆಸ್‌ನ 5 ಸಂಸದರಿಂದ ಪಟ್ಟು! | Karnataka In Charge Kc Venugopal Assembly Bid Triggers Contest Demands From 5 Kerala Mps Gdp

ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಣಕ್ಕಿಳಿದರೆ ನಾವೂ ರೆಡಿ, ಕೇರಳ ಕಾಂಗ್ರೆಸ್‌ನ 5 ಸಂಸದರಿಂದ ಪಟ್ಟು! | Karnataka In Charge Kc Venugopal Assembly Bid Triggers Contest Demands From 5 Kerala Mps Gdp



ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಣಕ್ಕಿಳಿದರೆ ನಾವೂ ರೆಡಿ, ಕೇರಳ ಕಾಂಗ್ರೆಸ್‌ನ 5 ಸಂಸದರಿಂದ ಪಟ್ಟು! | Karnataka In Charge Kc Venugopal Assembly Bid Triggers Contest Demands From 5 Kerala Mps Gdp

ಕೆ. ಸುಧಾಕರನ್, ಅಡೂರ್ ಪ್ರಕಾಶ್ ಬೆನ್ನಲ್ಲೇ, ಎಂ.ಕೆ. ರಾಘವನ್, ಕೊಡಿಕುನ್ನಿಲ್ ಹಾಗೂ ಶಾಫಿ ಪರಂಬಿಲ್ ಕೂಡಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸೋಕೆ ಆಸಕ್ತಿ ತೋರಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.

ದೆಹಲಿ: ಒಂದುವೇಳೆ ಕೆ.ಸಿ. ವೇಣುಗೋಪಾಲ್ ಅವರು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನಾವೂ ಕಣಕ್ಕಿಳಿಯುತ್ತೇವೆ ಎಂದು ಮತ್ತಷ್ಟು ಸಂಸದರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಕೆ. ಸುಧಾಕರನ್ ಮತ್ತು ಅಡೂರ್ ಪ್ರಕಾಶ್ ಆಸಕ್ತಿ ತೋರಿಸಿದ್ದರು. ಈಗ ಅವರ ಸಾಲಿಗೆ ಎಂ.ಕೆ. ರಾಘವನ್, ಕೊಡಿಕುನ್ನಿಲ್ ಮತ್ತು ಶಾಫಿ ಪರಂಬಿಲ್ ಕೂಡ ಸೇರಿದ್ದಾರೆ. ಒಟ್ಟು 5 ಸಂಸದರು ಹೀಗೆ ಬೇಡಿಕೆ ಇಟ್ಟಿರುವುದು ಕೇರಳ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಸದರನ್ನು ಚುನಾವಣೆಗೆ ನಿಲ್ಲಿಸುವುದು ಬೇಡ ಎಂಬ ತಮ್ಮ ನಿಲುವನ್ನು ಚುನಾವಣಾ ಸಮಿತಿಗೆ ತಿಳಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.

ಇದೇ ವೇಳೆ, ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಚುನಾವಣಾ ಸಮಿತಿ ಇಂದು ಸಂಜೆ ದೆಹಲಿಯಲ್ಲಿ ಸಭೆ ಸೇರಲಿದೆ. ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿ, ಮೊದಲ ಹಂತದ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಮೊದಲ ಪಟ್ಟಿಯಲ್ಲಿ ಗರಿಷ್ಠ 60 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ. ಸಂಸದರು ಸ್ಪರ್ಧಿಸುವ ಬಗ್ಗೆಯೂ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಪೆರುಂಬಾವೂರ್ ಮತ್ತು ಸುಲ್ತಾನ್ ಬತ್ತೇರಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಮತ್ತೆ ಸ್ಪರ್ಧಿಸಲಿ ಎಂಬುದು ರಾಜ್ಯ ನಾಯಕತ್ವದ ನಿಲುವಾಗಿದೆ.

ಸುದ್ದಿ ಹರಡುತ್ತಿದ್ದಂತೆಯೇ ರಾಜ್ಯ ಉಸ್ತುವಾರಿ ಪ್ರತಿಕ್ರಿಯೆ

ಈ ಸುದ್ದಿ ಹರಡುತ್ತಿದ್ದಂತೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿಮುಂಬರುವ 2026 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆ.ಸಿ. ವೇಣುಗೋಪಾಲ್ ಅಧಿಕೃತವಾಗಿ ಹೇಳಿದ್ದಾರೆ. ನಾನು ಸ್ಪರ್ಧಿಸುತ್ತೇನೆ ಎಂಬುದು ಕೇವಲ ಊಹಾಪೋಹ ಎಂದು ಅವರು ಹಲವು ಬಾರಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ, ಮೊದಲು ನೀವು ನನ್ನನ್ನು ಕೇಳಬೇಕಲ್ಲವೇ? ನೀವು ಇತರ ಸಂಸದರನ್ನು ಅವರು ಸ್ಪರ್ಧಿಸುತ್ತಾರೆಯೇ ಎಂದು ಕೇಳಬೇಕು. ಕೆಲವು ಚಾನೆಲ್‌ಗಳು ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿವೆ. ಆದ್ದರಿಂದ, ಒಂದು ಚಾನೆಲ್ ಇತರ ಸಂಸದರು ಸ್ಪರ್ಧಿಸಬೇಕೆಂದು ಹೇಳಿದ್ದಾರೆ ಎಂದು ಸುದ್ದಿ ನೀಡಿತು.

ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, “ನನ್ನನ್ನು ಕೇಳಿ ಮತ್ತು ನನಗೆ ಸುದ್ದಿ ನೀಡಿ” ಒಂದು ದಿನ ಒಂದು ಸುದ್ದಿ ಹೇಳುತ್ತೇನೆ ಮತ್ತು ನಾಳೆ ಅದನ್ನು ಬದಲಾಯಿಸುತ್ತೇನೆ ಎಂದು ಹೇಳಿದರು. ಒಬ್ಬ ವ್ಯಕ್ತಿಯು ಸ್ಪರ್ಧಿಸಲು ಬಯಸುವುದು ತಪ್ಪಲ್ಲ, ಆದರೆ ನಿರ್ಧಾರವು ಪಕ್ಷದ ನೀತಿ ನಿಯಮಗಳ ಮೇಲೆ ನಿಂತಿದೆ ಎಂದು ಖಡಕ್ ಆಗಿಯೇ ಹೇಳಿದರು.

ಎರಡನೇ ಹಂತದ ಚರ್ಚೆ ಆರಂಭ

ಶಮಾ ಮೊಹಮ್ಮದ್ ಅವರಿಗೆ ಸ್ಥಾನ ನೀಡುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ ಕೆ.ಸಿ. ವೇಣುಗೋಪಾಲ್ ನಕ್ಕರು ಅಷ್ಟೇ. ಇದೇ ಸಮಯದಲ್ಲಿ, ವೇಣುಗೋಪಾಲ್ ಸ್ಪರ್ಧಿಸಬೇಕೆಂದು ಅನೇಕ ಸಂಸದರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಸಂಸದರು ಸ್ಪರ್ಧೆಯಿಂದ ಹಿಂದೆ ಸರಿದರೆ, ಅವರು ಹಿಂದೆ ಸರಿಯುತ್ತಾರೆ ಎಂದು ಕೆಲವು ಹಿರಿಯ ನಾಯಕರು ಹೇಳುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತು ಎರಡನೇ ಹಂತದ ಚರ್ಚೆಗಳು ಮತ್ತೊಂದು ಸಭೆಯಲ್ಲಿ ನಿರ್ಧಾರವಾಗಲಿದೆಯಂತೆ. ಕೆ. ಸುಧಾಕರನ್, ಎಂ.ಕೆ. ರಾಘವನ್, ಕೋಡಿಕುನ್ನಿಲ್, ಶಫಿ ಪರಂಬಿಲ್ ಮುಂತಾದ ಅನೇಕ ಸಂಸದರು ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.



Source link

Leave a Reply

Your email address will not be published. Required fields are marked *