Headlines

ಆ ನುಡಿಯನ್ನು ದೇವರು ಕೊಟ್ಟಿಲ್ಲ, ಕಾಂತಾರದ ಬಗ್ಗೆ ಪ್ರಶ್ನೆಯೇ ಬಂದಿಲ್ಲ: ಪೆರಾರ ಆಡಳಿತ ಮಂಡಳಿ ಸ್ಪಷ್ಟೀಕರಣ! | Perara Tempe Clarity Press Note About Virla News Of Kantara Chapter 1 Movie

ಆ ನುಡಿಯನ್ನು ದೇವರು ಕೊಟ್ಟಿಲ್ಲ, ಕಾಂತಾರದ ಬಗ್ಗೆ ಪ್ರಶ್ನೆಯೇ ಬಂದಿಲ್ಲ: ಪೆರಾರ ಆಡಳಿತ ಮಂಡಳಿ ಸ್ಪಷ್ಟೀಕರಣ! | Perara Tempe Clarity Press Note About Virla News Of Kantara Chapter 1 Movie


‘ಕಾಂತಾರ ಚಾಪ್ಟರ್ 1’ ಸಿನಿಮಾ ಹಾಗೂ ಆ ಬಗ್ಗೆ ಶ್ರೀ ಕ್ಷೇತ್ರ ಪೇರಾರದಲ್ಲಿ ಹೇಳಿದೆ ಎನ್ನಲಾದ ದೈವ ನುಡಿಯ ಬಗ್ಗೆ ಸಾಕಷ್ಟು ಹೇಳಿಕೆಗಳು, ಚರ್ಚೆಗಳು ಹಾಗೂ ವಿವಾದಗಳು ಏರ್ಪಟ್ಟಿವೆ. ಆದರೆ, ಇದೀಗ ಶ್ರೀ ಕ್ಷೇತ್ರದಿಂದಲೇ ಸ್ಪಷ್ಟೀಕರಣ ಬಂದಿದೆ. ಅದೇನು ನೋಡಿ..

ಕಾಂತಾರ ಸಿನಿಮಾ ದೈವವಾಣಿ ಸುದ್ದಿಗೆ ಬಿಗ್ ಟ್ವಿಸ್ಟ್!

ಇತ್ತೀಚೆಗೆ ಬಹುದೊಡ್ಡ ಸುದ್ದಿಯಾದ ಮಂಗಳೂರಿನ ದೈವ ನುಡಿ ಘಟನೆಯ ಬಗ್ಗೆ ಇದೀಗ ಸ್ವತಃ ಕ್ಷೇತ್ರದಿಂದಲೇ ಸ್ಪಷಿಕರಣ ಬಂದಿದೆ. ಬಹುತೇಕರಿಗೆ ಗೊತ್ತಿರುವಂತೆ, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಹಾಗೂ ಆ ಬಗ್ಗೆ ಶ್ರೀ ಕ್ಷೇತ್ರ ಪೇರಾರ ಜಾತ್ರೆಯಲ್ಲಿ ಹೇಳಿದೆ ಎನ್ನಲಾದ ದೈವ ನುಡಿಯ ಬಗ್ಗೆ ಸಾಕಷ್ಟು ಹೇಳಿಕೆಗಳು, ಚರ್ಚೆಗಳು ಹಾಗೂ ವಿವಾದಗಳು ಏರ್ಪಟ್ಟಿವೆ. ಆದರೆ, ಸುತ್ತುತ್ತಿರುವ ಸುದ್ದಿಯೇ ಬೇರೆಬೇರೆ ರೂಪದಲ್ಲಿ ರೌಂಡ್ ಹಾಕುತ್ತಿದೆ. ಆದರೆ, ಇದೀಗ ಶ್ರೀ ಕ್ಷೇತ್ರದಿಂದಲೇ ಸ್ಪಷ್ಟೀಕರಣ ಕೊಟ್ಟಿರುವ ಪ್ರೆಸ್ ನೋಟ್ ಬಂದಿದ್ದು ಎಲ್ಲಾ ವಿವಾದವೂ ಅಂತ್ಯ ಕಾಣುವ ಸಮಯ ಬಂದಿದೆ ಎನ್ನಬಹುದು!

ಹಾಗಿದ್ದರೆ ಮಂಗಳೂರಿನ ಶ್ರೇ ಕ್ಷೇತ್ರ ಪೆರಾರ ಆಡಳಿಥ ಮಂಡಳಿ ಕೊಟ್ಟಿರುವ ಸ್ಪಷ್ಟತೆ ಏನು?

ಹೌದು, ಇತ್ತೀಚೆಗೆ ಸೋಷಿಯಲ್ ಮೀಡಿಯಾ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವ ಪೆರಾರ ಕ್ಷೇತ್ರದ ದೈವ ವಾಣಿ ಹಾಗೆ ಹೇಳಿಲ್ಲ ಎಂದಿದೆ ಅಲ್ಲಿನ ಆಡಳಿತ ಮಂಡಳಿ. ‘ಮೊನ್ನೆ ಪೆರಾರ ಕ್ಷೇತ್ರದಲ್ಲಿ ದೈವವು ರಿಷಬ್ ಶೆಟ್ಟಿಯವರ ನಿರ್ದೇಶನದ ಕಾಂತಾರ ಹಾಗೂ ಕಾಂತಾರ ಚಾಪ್ಟರ್ 1’ ಸಿನಿಮಾದ ಬಗ್ಗೆ ಯಾವ ಮಾತೂ ಆಡಿಲ್ಲ. ಆದರೂ ಒಂದಿಷ್ಟು ಜನರು ‘ಹೋರಾಟಗಾರರ’ ಹೆಸರಲ್ಲಿ ಮಾಧ್ಯಮದ ಎದುರು ಬಂದು ‘ಕಾಂತಾರಕ್ಕೆ ದೈವದ ಎಚ್ಚರಿಕೆ’ ಎಂದೆಲ್ಲಾ ಸುದ್ದಿ ಕೊಟ್ಟಿದ್ದಾರೆ.

ದೈವದ ಹೆಸರಿನಲ್ಲಿ ಹಣ ಮಾಡಿಕೊಂಡವರ ‘ಹಣವನ್ನು ಆಸ್ಪತ್ರೆಗೆ ಸೇರಿಸುತ್ತೇನೆ’ ಎಂದು ದೈವ ಹೇಳಿದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದೆ. ಇದೇ ವೇಳೆ, ಕಾಂತಾರಕ್ಕೆ ದೈವ ಒಪ್ಪಿಗೆ ಕೊಟ್ಟಿಲ್ಲ ಎನ್ನುವಂತಾ ಮಾತನಾಡಿದ್ದು ದೊಡ್ಡ ವಿವಾದವಾಗಿ ರಾಜ್ಯ, ರಾಷ್ಟ್ರದ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು, ದೈವದ ನುಡಿಯ ಬಗ್ಗೆಯೇ ಆಕ್ಷೇಪ ಎದ್ದಿತ್ತು. ಆದರೆ, ಆದರೆ ಅದು ಸುಳ್ಳು ಸುದ್ದಿ ಎಂದು ಇವತ್ತು ಅಲ್ಲಿನವರು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.

ಪೆರಾರ ಕ್ಷೇತ್ರದ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಪ್ರೆಸ್‌ನೋಟ್‌

ಪೆರಾರ ಕ್ಷೇತ್ರದ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಪ್ರೆಸ್‌ನೋಟ್‌ನಲ್ಲಿ ಸ್ಪಷ್ಟವಾಗಿ ಈ ಬಗ್ಗೆ ಕ್ಲಾರಿಟಿ ಕೊಡಲಾಗಿದೆ. ‘ಆ ತರದ ನುಡಿಯನ್ನು ದೇವರು ಕೊಟ್ಟಿಲ್ಲ. ಆ ಸಮಯದಲ್ಲಿ ದೈವದ ಮುಂದೆ ಕಾಂತಾರ ಸಿನಿಮಾದ ಬಗ್ಗೆ ಪ್ರಶ್ನೆಯೇ ಬಂದಿಲ್ಲ ಎಂದ ಮೇಲೆ, ಅದು ಆ ಬಗ್ಗೆ ಉತ್ತರವನ್ನು ಹೇಗೆ ಕೊಡಲು ಸಾಧ್ಯ?’ ಎಂದು ಸ್ಪಷ್ಟವಾಗಿ ಹೇಳಿದೆ. ಇಷ್ಟರವರೆಗೂ ಹಬ್ಬುತ್ತಿದ್ದ ಆ ಸುದ್ದಿ ಸುಳ್ಳು ಎಂದು ಗೊತ್ತಾದ ಬಳಿಕ ಇದೀಗ, ಹೋರಾಟಗಾರರ ಹೆಸರಲ್ಲಿ ದೇವರನ್ನು ಬಳಸಿಕೊಂಡವರ (ನಕಲಿ ಹೋರಾಟಗಾರರು?) ಬಗ್ಗೆ ಸಾರ್ವಜನಿಕರು ಆಕ್ರೋಶ ವ್ತಕ್ತಪಡಿಸಿದ್ದಾರೆ. 



Source link

Leave a Reply

Your email address will not be published. Required fields are marked *